Home namma chikmagalur ಬಿ.ಎಲ್.ಶಂಕರ್ ರಾಜಕೀಯ ಹಿನ್ನಡೆ ಏಕೆ ?
namma chikmagalurchikamagalurHomeLatest NewsPolitical News

ಬಿ.ಎಲ್.ಶಂಕರ್ ರಾಜಕೀಯ ಹಿನ್ನಡೆ ಏಕೆ ?

Share
ಬಿ.ಎಲ್. ಶಂಕರ್
ಬಿ.ಎಲ್. ಶಂಕರ್
Share

ಚಿಕ್ಕಮಗಳೂರು: ಬಿ.ಎಲ್.ಶಂಕರ್ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿದ್ದವರು ಹಿನ್ನಡೆ ಅನುಭವಿಸುತ್ತಿರುವುದು ಏಕೆ ?

ಕಿರಿಯ ವಯಸ್ಸಿನಲ್ಲಿ ಹಿರಿಯ ಜವಾಬ್ದಾರಿ ನಿರ್ವಹಿಸಿರುವ ಶಂಕರ್ ಕಳೆದ ಇಪ್ಪತ್ತೈದು ವರ್ಷಗಳಿಂದ ಯಾವ ಅಧಿಕಾರವಿಲ್ಲದೆ ಒದ್ದಾಡುತ್ತಿದ್ದಾರೆ. ಇಪ್ಪತ್ತೈದರ ಹರೆಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಯುವಜನ ಸೇವಾ ಮತ್ತು ಕ್ರೀಡಾ ಮಂತ್ರಿಯಾಗಿದ್ದವರು.ಬೆಳಗ್ಗೆ ವಿಧಾನ ಪರಿಷತ್ ಸದಸ್ಯರಾಗಿ ಸಂಜೆ ದೊಡ್ಡ ಕೈಗಾರಿಕಾ ಮಂತ್ರಿ ಯಾದ ದಾಖಲೆ ಇದೆ.

ಸಭಾಪತಿ ಯಾಗಿ ಸೈ ಅನ್ನಿಸಿಕೊಂಡವರು ಲೋಕಸಭಾ ಸದಸ್ಯರಾಗಿ ಜನತಾದಳದ ರಾಜ್ಯ ಅಧ್ಯಕ್ಷರಾಗಿ ಪಕ್ಷ ಕಟ್ಟಿದವರು. ಒಂದು ಹಂತದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದವರು ಕಳೆದ ಇಪ್ಪತ್ತೈದು ವರ್ಷಗಳಿಂದ ಏನು ಆಗದು ಎಂಬಂತೆ ಈ ಸಾರಿ ವಿಧಾನ ಪರಿಷತ್ ಗೆ ಗ್ಯಾರಂಟಿ ಎನ್ನುತ್ತ ಇರುವಾಗಲೇ ಪಟ್ಟಿಯಲ್ಲಿ ಇದ್ದ ಹೆಸರು ಕಾಣೆಯಾಗುತ್ತಿರುವುದರ ಗುಟ್ಟೇನಲ್ಲ.

ಜನತಾದಳ ತೊರೆದು ಕಾಂಗ್ರೆಸ್ ಸೇರಿದ ಮೇಲೆ ಮೂಲೆಗುಂಪಾಗಿರುವುದು ಸ್ಪರ್ಧೆ ಮಾಡಿದ ಚುನಾವಣೆಯಲ್ಲಿ ಸೋತ ದಾಖಲೆ ಸೇರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣಕ್ಕೆ ಸೀಮಿತವಾದ ಶಂಕರ್ ತನಗೆ ಬೇಕಾದ ಗುಂಪು ಕಟ್ಟಿಕೊಂಡು ನೆಲಕಚ್ಚಿದ್ದಾರೆ ಎಂದು ಕಾಂಗ್ರೆಸ್ ನ ಮುಖಂಡರು ಹೇಳುವುದಲ್ಲದೆ ಶಂಕರ್ ನಮಗೆ ಗೂಟ ಒಡೆದರೆ ಶಂಕರ್ ಗೂ ಗೂಟ ಒಡೆಯುವವರು ಇರುತ್ತಾರೆ ಆದ್ದರಿಂದ ಶಂಕರ್ ರಾಜಕೀಯ ನಿವೃತ್ತಿ ಪಡೆಯಲಿ ಎನ್ನುತ್ತಾರೆ.ಈ ಬಾರಿ ಖಚಿತವಾಗಿ ವಿಧಾನ ಪರಿಷತ್ ಗೆ ಹೋಗುತ್ತಾರೆ ಎನ್ನುವಾಗ ಅವರ ಬದಲಾಗಿ ಆರತಿಕೃಷ್ಣರ ಹೆಸರು ಮೂಂಚುಣಿಗೆ ಬಂದಿದ್ದು ಮಾತ್ರ ಶಂಕರ್ ತೀವ್ರ ಹಿನ್ನಡೆ ಎನ್ನಲಾಗಿದೆ.

ಶಂಕರ್ ಬೆಂಗಳೂರು ರಾಜಕಾರಣದ ಕೇಂದ್ರವಾಗಿಸಿಕೊಂಡು ತಳಮಟ್ಟದ ಹಿಡಿತ ಕಳೆದುಕೊಂಡಿರುವುದರ ಜೊತೆಗೆ ಹಿಂಬಾಲಕರು ಕಿವಿ ಕಚ್ಚಿ ರಾಜಕೀಯ ಹಿನ್ನಡೆಗೆ ಕಾರಣ ಎನ್ನುವವರು ಇದ್ದಾರೆ.

ಸಾಂಸ್ಕೃತಿಕವಾಗಿ ಉತ್ತಮ ನಡವಳಿಕೆ ಮಾತು,ಓದುವ ಹವ್ಯಾಸ ಸಭೆ,ಸಮಾರಂಭ ಸಂಘಟಿಸುವುದು,ಪ್ರಣಾಳಿಕೆ ಬೇಕಾದ ವಿಷಯ ತಿಳಿದಿರುವ ಶಂಕರ್ ಒಳ್ಳೆಯ ಭಾಷಣಕಾರ ಹೀಗಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಚಿತ್ರ ಕಲಾ ಪರಿಷತ್ ನ ಅಧ್ಯಕ್ಷರಾಗಿದ್ದು ಇತ್ತೀಚಿಗೆ ಮತ್ತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರು ಹೌದು ಒಟ್ಟಾರೆ ಹೇಳುವುದಾದರೆ ಶಂಕರ್ ಗೆ ರಾಜಕೀಯ ಬೇಕೋ ಬೇಡವೋ ಅವರೇ ಉತ್ತರಿಸ ಬೇಕು.

Why is B.L. Shankar politically backward?

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಪುಸ್ತಕ ಸಂಸ್ಕೃತಿ-ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ

ಚಿಕ್ಕಮಗಳೂರು: ಪುಸ್ತಕ ಸಂಸ್ಕೃತಿ ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ ಎಂದು ನ್ಯೂಸ್ ಕಿಂಗ್ ಆನ್ಲೈನ್ ಪತ್ರಿಕೆಯ ಸಂಪಾದಕ...

ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ ಕಾರು

ಕಳಸ: ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಪ್ರವಾಸಿಗರ ಕಾರೊಂದು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ...

ಸ್ವಾತಂತ್ರ್ಯೋತ್ಸವದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ 

ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ದಲಿತ...

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ,...