Home Latest News ಖಾಸಗಿ ಆಸ್ಪತ್ರೆ ಬಳಿ ಹೈ ಟೆನ್ಷನ್ ವಿದ್ಯುತ್ ತಂತಿ : ಜನರಿಗೆ ಟೆನ್ಷನ್ ಟೆನ್ಷನ್
Latest News

ಖಾಸಗಿ ಆಸ್ಪತ್ರೆ ಬಳಿ ಹೈ ಟೆನ್ಷನ್ ವಿದ್ಯುತ್ ತಂತಿ : ಜನರಿಗೆ ಟೆನ್ಷನ್ ಟೆನ್ಷನ್

Share
Share

ಚಿಕ್ಕಮಗಳೂರು : ಎಂತಹ,ಎಂತಹ ಜನರಿದ್ದಾರೆ ಎಂಬುದಕ್ಕೆ ಅಪ್ಪಟ ಉದಾಹರಣೆಯೆಂದರೆ ತರೀಕೆರೆಯ ಗಾಳಿಹಳ್ಳಿ ಕ್ರಾಸ್ ನಲ್ಲಿ ಕಟ್ಟಿರುವ ಸಾಯಿ ಆಸ್ಪತ್ರೆ ಕಟ್ಟಡ ನೋಡಿದರೆ ತಿಳಿಯುತ್ತದೆ.ಶರಾವತಿಯಿಂದ ಬೆಂಗಳೂರಿಗೆ 220 ವಿದ್ಯುತ್ ಹೆಚ್ ,ಟಿ (high tension) ಲೈನ್ ಎಳೆಯಲಾಗಿದೆ.ಇದರ ಅಕ್ಕಪಕ್ಕದಲ್ಲಿ 55 ಅಡಿ ಜಾಗ ಬಿಟ್ಟು ವಾಸ ಮಾಡ ಬೇಕೆಂಬ ಸ್ಪಷ್ಟವಾದ ನಿಯಮವಿದ್ದು ಇದನ್ನು ಉಲ್ಲಂಘಿಸಿ ಲೈನ್ ಪಕ್ಕದಲ್ಲಿ ಬೃಹತ್ ಕಟ್ಟಡ ಕಟ್ಟಿದ್ದು ಇದರ ಬಗ್ಗೆ ಯಾವ ಇಲಾಖೆಯವರು ಕ್ರಮ ತೆಗೆದುಕೊಳ್ಳುವ ಬದಲು ಕೈ ಜೋಡಿಸಿದ್ದಾರೆ.ಅದರಲ್ಲೂ ಇಲ್ಲಿ ಆಸ್ಪತ್ರೆ ನಡೆಯುತ್ತಿರುವುದು ಸೋಜಿಗ .

ಕಟ್ಟಡದ ಮಾಲೀಕ ಕೆ.ಇ.ಬಿಯಿಂದ ವಿದ್ಯುತ್ ಪಡೆಯಲು ಹೋದಾಗ ಇದು ಕಾನೂನು ಬಾಹಿರ ಎಂದು ತಿರಸ್ಕಾರಿಸಿದ್ದಾರೆ.ಇದಕ್ಕೂ ಕೇರ್ ಮಾಡದೆ ಅನಧಿಕೃತವಾಗಿ ವಿದ್ಯುತ್ ಪಡೆದಿದ್ದು ಸ್ಕ್ವಾಡ್ನವರು ಒಮ್ಮೆ ಮಾತ್ರ ಕಾಟಚಾರಕ್ಕೆ ಕ್ರಮಕೈಗೊಂಡು ಅಗಾಗ ಭೇಟಿ ನೀಡಿ ನಗುನಗುತ್ತಾ ಹೊರಗೆ ಬರುವುದು ನೋಡಿದರೆ ಎಲ್ಲಾ ವ್ಯವಹಾರ ಖುಲ್ಲಾ,ಖುಲ್ಲ ನಡೆಯುತ್ತಿದೆ ಎನ್ನಿಸುತ್ತದೆ.

ಆರೋಗ್ಯ ಇಲಾಖೆಯು ಕೂಡ ಇಲಾಖೆಯ ನಿಯಮಗಳನ್ನು ಬದಿಗೊತ್ತಿದೆ ಈ ಬಗ್ಗೆ ಡಿ,ಹೆಚ್,ಒ ಅಶ್ವಥ್ ಬಾಬು ವಿಚಾರಿಸಿದರೆ ರಾಜಕೀಯದವರ ತರಹ ಉತ್ತರ ಕೊಡುತ್ತಾರೆ.
ಅಕಸ್ಮಾತ್ತಾಗಿ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರದ್ದು ? ಹೀಗೆ ಬಿಟ್ಟರೆ ಹೆಚ್,ಟಿ ಲೈನ್ ನ ಐದು ಅಡಿ ಪಕ್ಕದಲ್ಲಿ ಕಟ್ಟಿರುವುದನ್ನು ನೋಡಿದರೆ ಮುಂದೆ ಸಾಧ್ಯವಾದರೆ ಲೈನ್ ಮೇಲೆ ಕಟ್ಟಡ ಕಟ್ಟಿದರು ಆಶ್ಚರ್ಯವಿಲ್ಲ ಎನ್ನುತ್ತಾರೆ ಜನ.ಪುರಸಭೆಯವರು ಇದರ ಬಗ್ಗೆ ಮೌನವಹಿಸಿದ್ದಾರೆ, ಆರೋಗ್ಯ ಇಲಾಖೆಗೆ ಅನಾರೋಗ್ಯ ಬಾಧಿಸುತ್ತಿರುವಾಗ, ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳ ಬೇಕಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....