Home Latest News ಚಿಕ್ಕಮಗಳೂರು ಶಾಸಕ ಎಚ್ ಡಿ ತಮ್ಮಯ್ಯ ಸೆಳೆಯಲು ಕೋಟಿ ಕೋಟಿ ಆಪರ್ ಬಗ್ಗೆ ಗಣಿಗ ರವಿ ಹೇಳಿದ್ದೇನು
Latest News

ಚಿಕ್ಕಮಗಳೂರು ಶಾಸಕ ಎಚ್ ಡಿ ತಮ್ಮಯ್ಯ ಸೆಳೆಯಲು ಕೋಟಿ ಕೋಟಿ ಆಪರ್ ಬಗ್ಗೆ ಗಣಿಗ ರವಿ ಹೇಳಿದ್ದೇನು

Share
Share

ಚಿಕ್ಕಮಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಬಿರುಗಾಳಿ ಬಿಸುತ್ತಿದೆ.ಮಂಡ್ಯ ಶಾಸಕ ರವಿ ಗಣಿಗ ಗಂಭೀರ ಆರೋಪ ಮಾಡಿ ಬಿಜೆಪಿಯವರು ನಮ್ಮ ಶಾಸಕರುಗಳಿಗೆ ಪಕ್ಷಾಂತರ ಮಾಡಲು ನೂರು ಕೋಟಿ ಅಫರ್ ಮಾಡಿದ್ದಾರೆ ಇದಕ್ಕೆ ಬೇಕಾದ ದಾಖಲೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ರವಿ ಗಣಿಗ ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯರ ಹೆಸರು ಹೇಳಿರುವುದು ಯಾಕೆ ?ತಮ್ಮಯ್ಯ ಇದು ಸುಳ್ಳು ನಾನು ನಿಷ್ಠಾವಂತ ಕಾಂಗ್ರೆಸ್ ಗ ಎನ್ನುತ್ತಿದ್ದಾರೆ.ಆದರೆ ಅವರ ವಿರೋಧಿಗಳು ಮತ್ತು ಹಿತ ಶತೃಗಳು ತಮ್ಮಯ್ಯ ಈಗಾಗಲೇ ಹಲವು ಪಕ್ಷಗಳನ್ನು ಪಕ್ಷಂತರ ಮಾಡಿರುವುದನ್ನು ಉಲ್ಲೇಖ ಮಾಡಿ ಮಾತನಾಡುತ್ತಿದ್ದಾರೆ.

ದಳ,ಕಾಂಗ್ರೆಸ್ ಬಿಜೆಪಿ ಮತ್ತೆ ಕಾಂಗ್ರೆಸ್ ಗೆ ಜಂಪ್ ಮಾಡಿರುವುದು ಸುಳ್ಳೇನಲ್ಲಾ ಮತ್ತೆ ಜಂಪ್ ಮಾಡಿದರೆ ತಪ್ಪೇನು ?ಎಂದು ಅವರ ಬಿಜೆಪಿ ಹಿತೈಷಿಗಳು ವಾದ ಮಾಡುತ್ತಿದ್ದಾರೆ.ತಮ್ಮಯ್ಯ ಎಲ್ಲಾ ಪಕ್ಷಗಳೊಂದಿಗೆ ಸರಸದಿಂದ ಇರುವುದು ಪುಷ್ಟಿ ಕೊಡುತ್ತದೆ.

ರಾಜ್ಯದಲ್ಲಿ ಇಬ್ಬರು ಶಾಸಕರ ಹೆಸರು ಪ್ರಸ್ತಾಪ ಮಾಡಿರುವ ರವಿ ಗಣಿಗ ಚಿಕ್ಕಮಗಳೂರು ಶಾಸಕ ಎಂದು ಹೇಳಿದ ತಕ್ಷಣ ತಮ್ಮಯ್ಯನವರ ಹೆಸರು ಏಕೆ ಹೇಳಬೇಕು ಎಂದು ಹಿಂಬಾಲಕರು ಅಕ್ಷೇಪ ಮಾಡುತ್ತಿದ್ದಾರೆ ಅದರಲ್ಲೂ ಬೆಂಕಿ ಇಲ್ಲದೆ ಹೊಗೆ ಬರುತ್ತಾದ ಎನ್ನುವವರು ಇದ್ದಾರೆ.
ಒಟ್ಟಾರೆ ರಾಜ್ಯದ ರಾಜಕಾರಣದಲ್ಲಿ ತಮ್ಮಯ್ಯನವರ ಹೆಸರು ಪದೇ,ಪದೇ ಪಕ್ಷಾಂತರದೊಂದಿಗೆ ತಳುಕು ಹಾಕಿಕೊಂಡಿದೆ ಇದಕ್ಕೆ ಕಲ್ಯಾಣಮಸ್ತು ಎನ್ನುವ ಗ್ಯಾರಂಟಿ ಬೇಕಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...