ಚಿಕ್ಕಮಗಳೂರು :
ಉಡುಪಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಫಿನಾಡನಲ್ಲಿಯೂ ಎ.ಎನ್.ಎಫ್, ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ
ವಾರದ ಹಿಂದಷ್ಟೆ ಕಾಡಂಚಿನ ಕುಗ್ರಾಮಕ್ಕೆ ಬಂದಿದ್ದ ನಕ್ಸಲ್ ನಾಯಕಿ ಮುಂಡಗಾರು ಲತಾ ತಂಡದ ವಿಕ್ರಮ್ ಗೌಡ ಎಎನ್ಎಫ್ ಎನ್ ಕೌಂಟ್ ಗೆ ಬಲಿಯಾಗಿದ್ದಾನೆ ಕಳೆದ ವಾರದ ಹಿಂದೆ ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮಕ್ಕೆ ಭೇಟಿ ನೀಡಿದ್ದ ಮುಂಡಗಾರು ಲತಾ, ಜಯಣ್ಣ ತಂಡ ಸುಬ್ಬೇಗೌಡ ಎಂಬುವರ ಮನೆಯಲ್ಲಿ ಊಟ ಮಾಡಿ, ಗನ್ ಬಿಟ್ಟು ಹೋಗಿದ್ದರು. ನಂತರ ತೀವ್ರ ಕಾರ್ಯಾಚರಣೆ ನಡೆಸುತ್ತಿರೋ ಪೊಲೀಸರು ಅಲರ್ಟ್ ಆಗಿದ್ದರು.
ಇದೀಗ ವಿಕ್ರಂ ಗೌಡ ಎನ್ಕೌಂಟರ್ ಹಿನ್ನೆಲೆ ಕೂಂಬಿಂಗ್ ಮತ್ತಷ್ಟು ಚುರುಕು ಗೊಳಿಸಿದ್ದಾರೆ. ಇತ್ತೀಗಷ್ಟೆ, ಕೇರಳದಿಂದ ತಮ್ಮ ರಾಜ್ಯಗಳತ್ತ ವಾಪಸ್ಸಾಗಿದ್ದ ನಕ್ಸಲರು ಬಗ್ಗೆ ಕೂಂಬಿಂಗ್ ನಡೆಯುತ್ತಿತ್ತು, ಮುಂಡಗಾರು ಲತಾ, ವಿಕ್ರಂ ಗೌಡ, ವನಜಾಕ್ಷಿ, ಜಯಣ್ಣ ಕೇರಳದಿಂದ ಹಿಂದಿರುಗಿದ್ರು ವಿಕ್ರಂ ಗೌಡ ತನ್ನ ಜಿಲ್ಲೆ ಉಡುಪಿಯಲ್ಲೇ ಇದ್ದು, ಲತಾ-ಜಯಣ್ಣ ಕೊಪ್ಪಾಗೆ ಬಂದು ಹೋಗಿದ್ರು, ಮುಂಡಗಾರು ಲತಾ ವಿರುದ್ಧ ಚಿಕ್ಕಮಗಳೂರಲ್ಲಿ 38 ಪ್ರಕರಣಗಳಿವೆ ವಿಕ್ರಂ ಎನ್ಕೌಂಟರ್ ಹಿನ್ನೆಲೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ತೀವ್ರ ಕೂಂಬಿಂಗ್ ಮತ್ತಷ್ಟು ಹೆಚ್ಚಿಸಲಾಗಿದೆ.
Leave a comment