ಮೂಡಿಗೆರೆ: ತಾಲ್ಲೂಕಿನಲ್ಲಿ ಹಾದು ಹೋಗಿರುವ ಚಾರ್ಮಾಡಿ ಘಾಟಿಯಲ್ಲಿ ಶನಿವಾರ ಕಾಡಾನೆ ಕಾಣಿಸಿಕೊಂಡಿದ್ದು, ಪ್ರವಾಸಿಗರು ಹಾಗೂ ವಾಹನ ಸಹಾರರು ಆತಂಕಗೊಂಡರು.
ಘಾಟಿಯ ಅರಣ್ಯ ಪ್ರದೇಶದಿಂದ ರಸ್ತೆ ಬದಿಗೆ ಬಂದ ಕಾಡಾನೆಯು, ಕೆಲ ಹೊತ್ತು ರಸ್ತೆ ಮಧ್ಯ ನಿಂತು ವಾಹನ ಸಂಚಾರಕ್ಕೆ ಅಡ್ಡಿ ಮಾಡಿತು. ಕಾಡಾನೆ ಬಂದಿರುವ ಮಾಹಿತಿ ತಿಳಿಯುತ್ತಿದ್ದಂತೆ ವಾಹನ ಸವಾರರು ಕಾಡಾನೆಯತ್ತ ತೆರಳಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ರಸ್ತೆ ಮಧ್ಯದಿಂದ ಬಹಳ ಸಮಯದವರೆಗೆ ಹೋಗದ ಕಾರಣ ರಸ್ತೆಯ ಎರಡೂ ಬದಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಾಡಾನೆ ಅರಣ್ಯದತ್ತ ಸಾಗಿದ ನಂತರ ವಾಹನ ಸಂಚಾರ ಪ್ರಾರಂಭಗೊಂಡಿತು.
‘ಘಾಟಿಯಲ್ಲಿ ಕಾಡಾನೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ. ಅನಾಹುತ ಸಂಭವಿಸುವ ಮೊದಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳದಲ್ಲಿದ್ದ ವಾಹನ ಸವಾರರು ಒತ್ತಾಯಿಸಿದರು.
Wild elephant at Charmadi Ghat
Leave a comment