Home namma chikmagalur chikamagalur ಜಿಲ್ಲೆಗೆ ಮಂತ್ರಿಯಂತೆ, ಮಂತ್ರಿ ಇಲ್ಲವೇ, ಇಲ್ಲ ಸಾಧ್ಯವಿಲ್ಲ !
chikamagalurHomeLatest Newsnamma chikmagalur

ಜಿಲ್ಲೆಗೆ ಮಂತ್ರಿಯಂತೆ, ಮಂತ್ರಿ ಇಲ್ಲವೇ, ಇಲ್ಲ ಸಾಧ್ಯವಿಲ್ಲ !

Share
Share

ಚಿಕ್ಕಮಗಳೂರು: ಕಳೆದ ಇಪ್ಪತೈದು ವರ್ಷಗಳಿಂದ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿಲ್ಲಾ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಬಾರಿಯಾದರೂ ಜಿಲ್ಲೆಯವರಿಗೆ ಮಂತ್ರಿ ಸ್ಥಾನ ದೊರೆಯುತ್ತದೆ ಎಂಬ ಲೆಕ್ಕಾಚಾರದಲ್ಲಿ ನಿರತರಾದವರಿಗೆ ಮತ್ತೆ ಹಗಲು ಕನಸು ಅವರಿಸುತ್ತದೆ .

ಜಾರ್ಜ್  ಕಸುಬುಗಾರಿಕೆ ‌ ವ್ಯವಹಾರಸ್ಥನಿಗೆ ಮತ್ತೆ ಜಿಲ್ಲೆಯಲ್ಲಿ ಆಸ್ತಿ ಕೊಳ್ಳಲು ಮಣಿ ಹಾಕುವ ಕಾಂಗ್ರೆಸ್ ನವರು ತಲೆ ಬಗ್ಗಿಸಿ ನಿಲ್ಲುವ ಪರಿಪಾಠ ರೂಢಿಯಾಗಿದೆ. 2004 ರವರೆಗೆ ಜಿಲ್ಲೆಯವರಾದ ಡಿ.ಬಿ.ಚಂದ್ರೇಗೌಡ ಐದು ವರ್ಷಗಳ ಕಾಲ ಜಿಲ್ಲಾ ಉಸ್ತುವಾರಿಯಾಗಿದ್ದು ಬಿಟ್ಟರೆ ಬಿಜೆಪಿ ದಳದ ಕಾಲದಲ್ಲಿ ಮೂರು ತಿಂಗಳು ಆರು ತಿಗಳಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಯಾದವರು ಹೆಚ್ಚು.

ಬಳ್ಳಾರಿಯ ಶ್ರೀರಾಮುಲು, ಗೂಳಿಹಟ್ಟಿ ಶೇಖರ್, ಡಿ.ಸುಧಾಕರ,  ಬಿ.ಶಿವರಾಂ, ಎಸ್,ಸುರೇಶ್ ಕುಮಾರ್, ಪರಮೇಶ್ವರ್, ಖೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ, ಅರಗ ಜ್ಞಾನೇಂದ್ರ, ಈಶ್ವರಪ್ಪ ಮತ್ತು ಈಗಾ ಜಾರ್ಜ್ ಜಿಲ್ಲಾ ಉಸ್ತುವಾರಿಯಾಗಿ ಬಂದ ಪುಟ್ಟ, ಹೋದ ಪುಟ್ಟ ಎನ್ನುವಂತಾಗಿದೆ.ಇದರ ಮಧ್ಯೆ ಜಿಲ್ಲೆಯವರಾದ ಜೀವರಾಜ್, ಸಿ.ಟಿ.ರವಿ ಆರು ತಿಂಗಳು ವರ್ಷಗಳ ಕಾಲ ಉಸ್ತುವಾರಿ ಮಂತ್ರಿಯಾಗಿದ್ದರು.

ಶೃಂಗೇರಿಯ ರಾಜೇಗೌಡ, ತರೀಕೆರೆಯ ಶ್ರೀನಿವಾಸ್ ಎರಡು ಬಾರಿ ಗೆದ್ದಿರುವ ಶಾಸಕರು ಕಡೂರು ಆನಂದ್, ಮೂಡಿಗೆರೆ ನಯನ ಮತ್ತು ಚಿಕ್ಕಮಗಳೂರಿನ ಹೆಚ್.ಡಿ.ತಮ್ಮಯ್ಯ ಹೊಸದಾಗಿ ಆಯ್ಕೆಯಾದವರು.ಈಗ ಏನಿದ್ದರೂ ರಾಜೇಗೌಡ ಮತ್ತು ಶ್ರೀನಿವಾಸ್ ಮಂತ್ರಿಯಾಗಿ ಜಿಲ್ಲಾ ಉಸ್ತುವಾರಿ ಆಗಬೇಕು ಎಂದು ಲಾಭಿ ಶುರುಮಾಡಿದ್ದಾರೆ.ಆದರೆ ತುಂಬಾ ಕಷ್ಟವಿದೆ. ಏಕೆಂದರೆ ಜಾತಿ ಲೆಕ್ಕಾಚಾರದಲ್ಲಿ ಇವರ ಕನಸಿಗೆ ವಿಘ್ನ ಖಚಿತ ಎನ್ನಲಾಗುತ್ತಿದೆ.

ಒಕ್ಕಲಿಗರ ಖೋಟಾದಲ್ಲಿ ಟಿ.ಡಿ.ರಾಜೇಗೌಡ ಮಂತ್ರಿಯಾಗಲು ಡಿ.ಕೆ.ಶಿವಕುಮಾರ್, ಸೇರಿದಂತೆ ರಾಮಲಿಂಗ ರೆಡ್ಡಿ, ಸುಧಾಕರ ರೆಡ್ಡಿ, ಜಯಚಂದ್ರ, ಶಿವಲಿಂಗೇಗೌಡ, ಮಾಗಡಿ ಬಾಲಕೃಷ್ಣ, ಮಂಡ್ಯದಿಂದ ಚಲುವ ನಾರಾಯಣ ಸ್ವಾಮಿ, ಕೃಷ್ಣಬೈರೇಗೌಡ ಕ್ಯೂ ನಿಂತಿದ್ದಾರೆ.ಹೀಗಾಗಿ ರಾಜೇಗೌಡರಿಗೆ ಕಷ್ಟ ಎನ್ನಲಾಗುತ್ತಿದೆ. ಮೊನ್ನೆ ನಡೆದ ಶೃಂಗೇರಿ ಘಟನೆಗಳ ಬಗ್ಗೆ ಡಿ.ಕೆ ಸೇಡಿಗೆ ಹೊರಟರೆ ರಾಜೇಗೌಡ ಛಾನ್ಸ್ ಪಡೆಯಬಹುದು. ಜೊತೆಗೆ ಜಿಲ್ಲೆಯ ನಾಲ್ವರು ಶಾಸಕರು ರಾಜೇಗೌಡರ ಪರ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ.

ತರೀಕೆರೆ ಶಾಸಕ ಶ್ರೀನಿವಾಸ್ ಗೆ ಸಿದ್ದರಾಮಯ್ಯ ಕೈ ಹಿಡಿಯಬೇಕು ಅದು ಸಾಧ್ಯವಿಲ್ಲ ಏಕೆಂದರೆ ಅವರ ನೀಲಿ ಕಣ್ಣಿನ ಬೈರತಿ ಸುರೇಶ್ ಮತ್ತು ಮಗ ಯತೀಂದ್ರ ಪರ ಜೊತೆಗೆ ಹೊಸದುರ್ಗದ ಗೋವಿಂದಪ್ಪ ಪರ ಇರುವುದು ಶ್ರೀನಿವಾಸ್ ಏನೇ ಮಾಡಿದರು ಮಂತ್ರಿಯಾಗುವುದು ಕಷ್ಟ. ಜಾರ್ಜ್ ಗೆ ಅವಕಾಶ ಮತ್ತೊಮ್ಮೆ ಕಾಫಿ ತೋಟ, ಬೆಲೆ ಬಾಳುವ ಆಸ್ತಿ ಖರೀದಿಗೆ ಅನುವು ಮಾಡಿಕೊಡುವ ಸಾಧ್ಯತೆ ಹೆಚ್ಚು. ಪ್ರಮುಖವಾಗಿ ಜಾತಿ ಮೇಲಾಟದಲ್ಲಿ ಇನ್ನೂ ಎರಡು ವರ್ಷಗಳ ಕಾಲ ಜಿಲ್ಲೆಯಲ್ಲಿ ಪರಿಚಯ ಇಲ್ಲದವರಿಗೆ ಸೆಲ್ಯೂಟ್ ಹೊಡೆಯ ಬೇಕಾಗಿದೆ.

There is no minister for the district no minister no way!

Share

Leave a comment

Leave a Reply

Your email address will not be published. Required fields are marked *

Don't Miss

ಬಿಡದಿ ರೈತರ ಹೋರಾಟ ಬೆಂಬಲಿಸಿ ಆ.25ರಂದು ವಿಧಾನಸೌಧ ಚಲೋ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ರೈತರ ಭೂಮಿ ರಕ್ಷಣೆಗೆ ಆಗ್ರಹಿಸಿ ಆ.25ರಂದು ಬೆಂಗಳೂರಿನಲ್ಲಿ ಬೃಹತ್ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು...

ಮುಂಗಾರು ಋತುವಿನಲ್ಲಿ ಜಿಲ್ಲೆಯಲ್ಲಿ ಶೇ.35 ಮಳೆ ಕೊರತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಋತುವಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಶೇ.೩೫ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...

Related Articles

ಕುದುರೆಮುಖ ಭಾಗದಲ್ಲಿ ವಾಸಿಗರ ವಿಶೇಷ ಗಮನ ಸೆಳೆದ ನೀಲಕುರಿಂಜಿ

ಚಿಕ್ಕಮಗಳೂರು:  ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯಕ್ಕೆ ಮತ್ತೊಂದು ವಿಶೇಷ ಮೆರುಗು ನೀಡುವಂತೆ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ...

‘ರಾಷ್ಟ್ರದ ಸುರಕ್ಷತೆಗಾಗಿ ಎಲ್ಲರೂ ಒಂದಾಗಬೇಕು’

ಚಿಕ್ಕಮಗಳೂರು: ರಾಷ್ಟ್ರದ ಸುರಕ್ಷತೆ ಹಾಗೂ ದೇಶದ ಹಿತಾಸಕ್ತಿಗಾಗಿ ವೈಯಕ್ತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ...

ಆರೋಪಿಯಿಂದ ₹11.30 ಲಕ್ಷ ಮೌಲ್ಯದ 71 ಗ್ರಾಂ ಚಿನ್ನಾಭರಣ ವಶ

ಎನ್.ಆ‌ರ್. ಪುರ: ಮನೆಯ ಹಂಚು ತೆಗೆದು ಒಳನುಗ್ಗಿ, ಮಲಗಿದ್ದ ಮಹಿಳೆಯ ಕೊರಳಿನಿಂದ ಮಾಂಗಲ್ಯ ಸರ ಎಗರಿಸಿದ್ದ...

ಅಜ್ಜಂಪುರ ಸುತ್ತಮುತ್ತ ಕರಡಿ ಹಾವಳಿ

ಅಜ್ಜಂಪುರ: ಅಜ್ಜಂಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಗಲು-ರಾತ್ರಿ...