ಚಿಕ್ಕಮಗಳೂರು: ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸಿಲ್ಲ, ಎಸ್ಸಿಎಸ್ಟಿ ಮೀಸಲಾತಿಯನ್ನು ಕಡಿತಗೊಳಿಸಿರುವುದು ಏಕೆ ಎಂಬುದನ್ನು ಸರ್ಕಾರ ಜನತೆಗೆ ವಿವರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಒಳಮೀಸಲಾತಿ ಕುರಿತು ಪ್ರತಿಕ್ರಿಯೆನೀಡಿದಿರುವ ಅವರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಿರ್ಧಾರ ಸಾಮಾಜಿಕ ಅನ್ಯಾಯವನ್ನು ಮಾಡಿದೆ. ಒಳಮೀಸಲಾತಿ ಜಾರಿಗೆತರಲುಸರ್ಕಾರ ಎರಡುವರ್ಷಕ್ಕೂ ಹೆಚ್ಚುಕಾಲವಿಳಂಬಮಾಡಿದ್ದು, ಅಂತಿಮವಾಗಿಜಾರಿಗೊಳಿಸಿದ ಮಾದರಿಯೂನ್ಯಾಯ ಸಮ್ಮತವಾಗಿಲ್ಲ. ಹೈಕೋರ್ಟ್ ಶೇ.೫೦ ಮಿತಿಯೊಳಗೆ ಮೀಸಲಾತಿ ನೀಡುವಂತೆ ಸೂಚಿಸಿದ್ದೇ ಹೊರತು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿ ಕಡಿತಗೊಳಿಸಲು ಹೇಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಳಮೀಸಲಾತಿ ರೂಪಿಸುವಲ್ಲಿ ವಿವಿಧಸಮಿತಿಗಳಶಿಫಾರಸು ಪರಿಗಣಿಸಿಲ್ಲ. ಸದಾಶಿವ ಆಯೋಗ, ಮಾಜಿ ಸಚಿವ ಮಾಧು ಸ್ವಾಮಿ ವರದಿ ಹಾಗೂ ಸ್ವತಃ ಈ ಸರ್ಕಾರವೇ ನೇಮಿಸಿದ ನ್ಯಾಯಮೂರ್ತಿನಾಗಮೋಹನ್?ಸ್ಸಮಿತಿವರದಿಗಳನ್ನೂ ಕಡೆಗಣಿಸಲಾಗಿದೆ ಎಂದು ಹೇಳಿದರು.
ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಎ. ಎ, ಬಿ ಮತ್ತು ಸಿ ವರ್ಗಗಳಾಗಿ ವಿಭಜಿಸಿರುವ ಕ್ರಮದ ಮೇಲೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದ
ಅವಧಿಯಲ್ಲಿ ಮೀಸಲಾತಿಯನ್ನು ಶೇ.೧೫ ರಿಂದ ೧೭ಕ್ಕೆ ಹೆಚ್ಚಿಸಲಾಗಿತ್ತು ಎಂದು ನೆನಪಿಸಿದರು.
ಎ ವರ್ಗಕ್ಕೆ ಶೇ.೬ ಮತ್ತು ಬಿ ವರ್ಗಕ್ಕೆ ಶೇ.೫.೫ ಇದ್ದ ಮೀಸಲಾತಿಯನ್ನು ತಲಾ ೫,೨೫ಕ್ಕೆಕ್ಕೆ ಇಳಿಸಿ, ಎರಡೂ ಸಮುದಾಯ ಗಳಿಗೆ ಅನ್ಯಾಯ ಮಾಡಲಾಗಿದೆ. ಭೋವಿ, ಬಂಜಾರ, ಕೊರಚ, ಕೊರಮ ಸೇರಿದಂತೆ ಹಲವು ಸಮುದಾಯಗಳಿಗೆ೪.೫ ಮೀಸಲಾತಿ ಇತ್ತು.
ಅವುಗಳನ್ನು ಸಿ ವರ್ಗದಲ್ಲಿ ಒಗ್ಗೂಡಿಸಲಾಗಿದೆ. ಇದರೊಡನೆ, ಅಲೆಮಾರಿ ಸಮುದಾಯಕ್ಕೆ ಶೇ.೧ ರಷ್ಟು ಮೀಸಲಾತಿ ಇತ್ತು. ಅವರನ್ನೂ ಸಿ ವರ್ಗಕ್ಕೆ ಸೇರಿಸಲಾಗಿದೆ. ನ್ಯಾಯಯುತವಾಗಿ ಸಿ ವರ್ಗಕ್ಕೆ ಸಿಗಬೇಕಿದ್ದ ಶೇ.೫.೫ ಮೀಸಲಾತಿ ಬದಲು ಕೇವಲ ಶೇ.೪.೫ ಮಾತ್ರ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಹೆಸರಿನಲ್ಲಿ ದಲಿತ ಸಮುದಾಯಗಳಿಗೆ ಮೋಸ ಮಾಡಲಾಗಿದೆ. ಸಂವಿಧಾನ ವಿರೋಧಿಯಾದ, ಮತೀಯ ಆಧಾರದ ಮೀಸಲಾತಿ ಮುಂದುವರಿಸಿ, ಎಸ್ಸಿ ಎಸ್ಟಿಮೀಸಲಾತಿ ನಿರ್ಧಾರದ ಸಂವಿಧಾನಬದ್ಧ ಕಡಿತಗೊಳಿಸಿರುವುದು ಅನ್ಯಾಯದ ನಡೆ. ರಾಜ್ಯಸರ್ಕಾರದ ನಿರ್ಧಾರ ವಿವಿಧ ಪಂಗಡಗಳ ನಡುವೆ ಒಳ ಜಗಳ ಉಂಟು ಮಾಡುವ ಸಾಧ್ಯತೆಯಿದೆ.
ಈ ಪರಿಣಾಮವನ್ನುಕಾಂಗ್ರೆಸ್ ಶೀಘ್ರದಲ್ಲೇಎದುರಿಸಲಿದೆ. ಯಾವ ಪಂಗಡವೂ ಈ ಅನ್ಯಾಯದ ಒಳ ಮೀಸಲಾತಿನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ಕಾಂಗ್ರೆಸ್ ಅಧಿಕಾರ ಕಳೆದು ಕೊಳ್ಳಲಿದೆ ಎಂದು ಹೇಳಿದ್ದಾರೆ.
The state government has not followed social justice in implementing internal reservation.
Leave a comment