ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾಕ್ಷೇತ್ರದ ಮರುಮತ ಎಣಿಕೆಯ ಫಲಿತಾಂಶ ಪ್ರಜಾಪ್ರಭುತ್ವದ ಕಗ್ಗೋಲೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಆರೋಪಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಿರುವ ಪ್ರಜಾತಂತ್ರ ವ್ಯವಸ್ಥೆಯ ಪ್ರಭುಗಳಾದ ಮತದಾರರು ಮತ್ತು ಟಿ.ಡಿ.ರಾಜೇಗೌಡ ಅವರಿಗೂ ಜೀವರಾಜ್ ಮೋಸಮಾಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
೨೦೨೩ ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಎಲ್ಲ ಪಕ್ಷದ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಪರವಾಗಿ ಮತ ಎಣಿಕೆ ಏಜೆಂಟರು ಇರುತ್ತಾರೆ. ಚುನಾವಣಾಕಾರಿಗಳ ಸಮಕ್ಷಮದಲ್ಲಿ ಟಿ.ಡಿ.ರಾಜೇಗೌಡರ ಪರವಾಗಿ ಸಿಂಧು ಆಗಿದ್ದ ೨೫೭ ಮತಗಳು ೩ ವರ್ಷದ ಬಳಿಕ ಅಸಿಂಧು ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಒಂದೇ ಕಟ್ಟಿನಲ್ಲಿ ಇದ್ದ ೧೭೦ ಮತಗಳನ್ನು ಉದ್ದೇಶಪೂರ್ವಕವಾಗಿ ತಿದ್ದುಪಡಿ ಮಾಡಲಾಗಿದ್ದು ಅವುಗಳಲ್ಲಿ ಎರಡೆರಡು ಗೆರೆ ಎಳೆದವರು ಯಾರು? ಹಾಗೂ ಸ್ಟ್ರಾಂಗ್ ರೂಂ ನಲ್ಲಿ ಇದ್ದ ಪೆಟ್ಟಿಗೆಗಳ ಸೀಲ್ ತೆಗೆದು ಅಕ್ರಮ ಎಸಗಿದವರು ಯಾರು? ನಾಪತ್ತೆಯಾಗಿದ್ದ ಮತಗಳು ಎಲ್ಲಿಹೋದವು ಎಂಬ ಸತ್ಯ ಹೊರಬರಬೇಕಾಗಿದೆ. ಹೀಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಎಸ್ಐಟಿ ತನಿಖೆ ನಡೆಸಿದರೆ ಸತ್ಯ ಬಯಲಾಗಲಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡಿದೆ.ಈಗಿನ ರಿಟರ್ನಿಂಗ್ ಅಕಾರಿಗೆ ವಕೀಲರ ಹಾಗೂ ಚುನಾವಣಾ ಆಯೋಗದ ಮೂಲಕ ಒತ್ತಡ ಹೇರಲಾಗಿದೆ.ಈ ಪ್ರಕರಣದಲ್ಲಿ ಅಕ್ರಮ ನಡದಿರುವ ಬಗ್ಗೆ ಜಿಲ್ಲಾಕಾರಿಗಳು ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿ ಎಂದು ಒತ್ತಾಯಿಸುತ್ತೇನೆ ಎಂದರು.
ಜೀವರಾಜ್ ಪ್ರಕರಣದಲ್ಲಿ ಇಷ್ಟೊಂದು ತುರ್ತಾಗಿ ತಿರ್ಮಾನ ತೆಗೆದುಕೊಂಡಿರುವ ನ್ಯಾಯಾಲಯ ಗಾಯತ್ರಿ ಶಾಂತೇಗೌಡ ಅವರ ಪ್ರಕರಣದಲ್ಲಿ ಮೀನಮೇಷ ಎಣಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ರಾಮಚಂದ್ರ, ಶಾಂತಕುಮಾರ್, ಕುಸುಮ ಭರತ್, ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಎಂ.ಡಿ.ರಮೇಶ್, ಶಾದಬ್ ಮತ್ತಿತರರಿದ್ದರು.
The recount result is a blow to democracy.
Leave a comment