ಚಿಕ್ಕಮಗಳೂರು: ಬಡ ಜನಾಂಗದ ಅಭಿವೃಧ್ದಿಗೆ ನಿರ್ಮಿತಗೊಂಡಿರುವ ಪರಿಶಿಷ್ಟ ಸಹಕಾರ ಸಂಘದಲ್ಲಿ ಇನ್ನಷ್ಟು ಹೆಚ್ಚು ಮಂದಿ ಸದಸ್ಯರಾಗುವ ಮೂಲಕ ಸಮಾಜದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸ ಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ನಗರದ ಡಾ|| ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗೌತಮಬುದ್ಧ ಪರಿಶಿಷ್ಟ ಜಾತಿ ಸಹಕಾ ರ ಸಂಘದ ೨೦೨೪-೨೫ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂಘದಲ್ಲಿ ೮೦೦ಕ್ಕೂ ಹೆಚ್ಚು ಮಂದಿ ಸದಸ್ಯರುಗಳು ೨೨ ಲಕ್ಷ ರೂ.ಗಳ ವಹಿವಾಟು ನಡೆಸು ತ್ತಿರುವುದು ಸ್ವಾಗತಾರ್ಹ. ಕೇವಲ ಐದು ವರ್ಷಗಳಲ್ಲಿ ಸ್ಥಾಪಿತಗೊಂಡಿರುವ ಸಹಕಾರ ಸಂಘವು ಏರುಪೇ ರಿನ ನಡುವೆ ಪ್ರತಿವರ್ಷವು ಮುಂಚೂಣಿಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಂಘವು ಆರ್ಥಿಕ ಅಭಿವೃದ್ದಿ ಹೊಂದಲು ಓರ್ವನಿಂದ ಸಾಧ್ಯವಿಲ್ಲ. ಪರಸ್ಪರ ಸಹಕಾರ ನೀಡಿ ಆಂ ದೋಲನವನ್ನು ನಡೆಸಬೇಕಿದೆ. ಜೊತೆಗೆ ಎಸ್ಬಿ ಖಾತೆ ತೆರೆಯುವಿಕೆ, ಎಫ್ಡಿ ಕಲೆಕ್ಷನ್ ಮುಖಾಂತರ ವಹಿ ವಾಟು ಮಾಡಿಕೊಂಡು ಡಿಸಿಸಿ ಬ್ಯಾಂಕ್ನಲ್ಲಿ ಇರುವಂಥ ಷೇರುಧನಕ್ಕೆ ಸಮನಾದ ಸಾಲಸೌಲಭ್ಯ ಪಡೆದು ಕೊಂಡು ಸದಸ್ಯರಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಪುಟ್ಟಮಗುವಿನಂತೆ ಉಗಮವಾಗಿರುವ ಪರಿಶಿಷ್ಟ ಸಹಕಾರ ಸಂಘವು ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿನ ವಹಿವಾಟು ನಡೆಸಿ ಜಿಲ್ಲೆಯಲ್ಲೇ ಮಾದರಿ ಸಂಘವಾಗಿ ಹೆಸರು ಸಂಪಾದಿಸಲಿ ಎಂದು ಹಾರೈಸಿದರು.
ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲ್ಲೂಕಿನ ಪ್ರತಿ ಗ್ರಾಮ ಮಟ್ಟದಲ್ಲಿ ಪದಾಧಿಕಾರಿಗಳು ಪರಿಶಿಷ್ಟರನ್ನು ಭೇಟಿ ಮಾಡಿ ಸದಸ್ಯರಾಗಿಸುವ ನಿಟ್ಟಿನಲ್ಲಿ ಪ್ರಚಾರ ಮಾಡಲಾಗು ತ್ತಿದೆ. ಸಮಾಜದ ಬಾಂಧವರು ಹೆಚ್ಚಿನ ವ್ಯವಹಾರ, ಷೇರುಗಳನ್ನು ಹೊಂದಬೇಕಿದೆ ಎಂದು ತಿಳಿಸಿದರು.
ಪ್ರಸ್ತುತ ಸಂಘದಲ್ಲಿ ೧೦ ಲಕ್ಷ ರೂ.ಗಳಷ್ಟು ಸಾಲಸೌಲಭ್ಯವನ್ನು ಒದಗಿಸಿದ್ದು ವಸೂಲಾತಿ ಕಾರ್ಯವು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಒಟ್ಟಾರೆ ಪ್ರತಿವರ್ಷವು ಸಹಕಾರ ಸಂಘವು ಆರ್ಥಿಕ ಲಾಭಾಂ ಶವನ್ನು ಹೊಂದುವ ಮೂಲಕ ಮುನ್ನೆಡೆ ಸಾಧಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಹಂಪಯ್ಯ, ಉಪಾಧ್ಯಕ್ಷ ಬಿ.ಎಂ.ಶಂಕರ್, ನಿರ್ದೇ ಶಕರುಗಳಾದ ಪಿ.ವೇಲಾಯುಧನ್, ಕೆ.ಎಂ.ಗೋಪಾಲ್, ಎಲ್.ಶಾಂತಕುಮಾರ್, ಎ.ನಾಗರಾಜ್, ಎಂ.ಟಿ. ಲೋಕೇಶಪ್ಪ, ಎಂ.ಆರ್.ಗಂಗಾದರ್. ಹೆಚ್.ಜೆ.ಪರಮೇಶ್ವರಪ್ಪ, ಕೆ.ನಾಗರಾಜ್, ಎಂ.ಎ ಸ್.ವೆಂಕಟೇಶ್, ಕೆ.ಟಿ.ಶ್ರೀನಿವಾಸ್, ಸುರೇಂದ್ರ ಬಾಬು, ಪಾರ್ವತಮ್ಮ, ರೇಣುಕಾ ಮತ್ತಿತರರಿದ್ದರು.
Show solidarity by becoming a member of a cooperative.
Leave a comment