ಚಿಕ್ಕಮಗಳೂರು: ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಅನುಕೂಲ ವಾಗಲು ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಕನ್ನಡಸೇನೆ ಮುಖಂಡರುಗಳು ಶನಿವಾರ ಶಾ ಸಕ ಹೆಚ್.ಡಿ.ತಮ್ಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಯಿದೆ. ಕೇವಲ ಒಂದೇ ಬೋರ್ವೆಲ್ನಿಂದ ನೀರು ಪೂರೈಕೆಯಾಗುತ್ತಿದೆ. ಇದರಿಂದ ನೀರಿನ ಕೊರತೆಯಾ ಗಿದೆ. ಯಗಚಿ ಡ್ಯಾಮಿನಿ ಸಂಪರ್ಕ ಕಲ್ಪಿಸುವುದು ಮತ್ತು ಹೆರಿಗೆ ಆಸ್ಪತ್ರೆಗೆ ಮುಖ್ಯ ಪೈಪಿನಿಂದ ಸಂಪರ್ಕ ಕಲ್ಪಿ ಸಿಕೊಡಬೇಕು ಎಂದರು.
ಜಿಲ್ಲಾಸ್ಪತ್ರೆಗೆ ಸಿಟಿ ಸ್ಯ್ಕಾನ್ ಹಾಗೂ ದಂತ ಪರೀಕ್ಷೆ ಓಪಿಜಿ ಸ್ಯಾನರ್ ಅಳವಡಿಸಬೇಕು, ನರ್ಸ್ ಮತ್ತು ಸಿಬ್ಬಂದಿಗಳ ಕೊರತೆಯಿದ್ದು ತಕ್ಷಣವೇ ನೇಮಕ ಮಾಡಿಕೊಳ್ಳಬೇಕು. ಹೆರಿಗೆ ಆಸ್ಪತ್ರೆಯಲ್ಲಿ ಬೆಡ್ಗಳನ್ನು ಹೆಚ್ಚಿ ಸುವುದು. ಆಸ್ಪತ್ರೆಯ ಕಟ್ಟಡ ಹಳೆಯದಾಗಿ ಸೋರುತ್ತಿದ್ದು ದುರಸ್ಥಿಪಡಿಸಬೇಕು ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಚೀಟಿ ಕೊಡುವ ಕೌಂಟರ್ನಲ್ಲಿ ಸರ್ವರ್ ಸಮಸ್ಯೆಯಿದೆ. ಆಸ್ಪತ್ರೆಯ ಆಹಾರ ಪೂರೈಸುವ ವಾಹನವು ದುರಸ್ಥಿತಿಯಲ್ಲಿರುವ ಕಾರಣ ಹೊಸ ವಾಹನವನ್ನು ಖರೀದಿಸಿ ಆಸ್ಪತ್ರೆಗೆ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ನಗರದ ಇಂದಿರಾಗಾಂಧೀ ಬಡಾವಣೆಯಲ್ಲಿ ಸಾವಿರಾರು ಮನೆಗಳಿವೆ. ಪಡಿತರ ಆಹಾರ ಧಾನ್ಯವನ್ನು ತರುವುದಕ್ಕಾಗಿ ಎರಡು ಕಿ.ಮೀ. ದೂರದಲ್ಲಿರುವ ಕಲ್ಲುದೊಡ್ಡಿನಿಂದ ತರಬೇಕಾಗಿರುವುದರಿಂದ ಬಾಡಿಗೆಗೆ ನೂರಾರು ರೂ.ಗಳು ವ್ಯಯವಾಗುತ್ತಿದೆ. ಸ್ಥಳೀಯವಾಗಿ ನ್ಯಾಯಬೆಲೆ ಅಂಗಡಿಗೆ ಮಂಜೂರು ಮಾಡಿಕೊಡ ಬೇಕು ಎಂದು ತಿಳಿಸಿದರು.
ಇಂದಿರಾ ಬಡಾವಣೆಯಲ್ಲಿ ಹಲವು ವರ್ಷಗಳಿಂದ ಸಮುದಾಯ ಭವನವನ್ನು ನಿರ್ಮಾಣ ಮಾಡ ಲಾಗುತ್ತಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಯೇ ಇಲ್ಲ. ಸಾರ್ವಜನಿಕರು ಸಭೆ, ಸಮಾರಂಭ ಮಾಡಲು ತೀವ್ರ ತೊಂದರೆಯಾಗುತ್ತಿದ್ದು ಶೀಘ್ರವೇ ಕಾಮಗಾರಿ ಪೂರೈಸಬೇಕು ಹಾಗೂ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಯುವಘಟಕದ ಸತೀಶ್, ಉಪಾಧ್ಯಕ್ಷ ಪಾಪಣ್ಣ, ಮುಖಂಡರುಗಳಾದ ಪವನ್, ಶಂಕರೇ ಗೌಡ, ವನಿತಾ, ಸರಸ್ವತಿ, ದಾಕ್ಷಾಯಿಣಿ, ಪ್ರಸನ್ನ, ಪಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
Request to legislators to provide basic facilities to the district hospital
Leave a comment