ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಡಿ.ರಾಮೇಗೌಡ ಕಲ್ಲಹಳ್ಳಿ ಅಯ್ಕೆಯಾಗಿದ್ದಾರೆ ಎಂದು ಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಕೆ. ಕೃಷ್ಣಗೌಡ ತಿಳಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷರಾಗಿ 2 ವರ್ಷ ಸುನಿಲ್ಕುಮಾರ್ ಕೆಲಸ ಮಾಡಿದ್ದಾರೆ. ಈಗ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ರಾಮೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.
ರಾಮೇಗೌಡ ಅವರು ರೈತ ಸಂಘದ ಸಕ್ರಿಯ ಕಾರ್ಯಾಧ್ಯಕ್ಷರಾಗಿದ್ದರು. ತಾಲ್ಲೂಕು ಸಮಿತಿಯಲ್ಲಿ ಕೆಲಸ ಮಾಡಿರುವ ಅನುಭವ ಇದೆ ಎಂದರು.
ಕೆ.ಕೆ. ರಾಮೇಗೌಡ, ಗೌರವ ಅಧ್ಯಕ್ಷ ಮಲ್ಲುಂಡಪ್ಪ, ಮುಖಂಡರಾದ ಲಕ್ಷ್ಮಣರಾಜ್, ನೀಲಕಂಠಪ್ಪ, ಹುಲಿಯಪ್ಪಗೌಡ, ಪರ್ವತೇಗೌಡ, ಕಾಂತರಾಜು, ಸುನಿಲಕುಮಾರ್ ಇದ್ದರು.
Ramegowda becomes president of the taluk unit of the Farmers’ Association
Leave a comment