Home undercover police:ನಕ್ಸಲ್ ರವೀಂದ್ರ ಪತ್ತೆಗಾಗಿ ಮಾರುವೇಷ ಧರಿಸಿದ ಪೊಲೀಸರು
HomeLatest News

undercover police:ನಕ್ಸಲ್ ರವೀಂದ್ರ ಪತ್ತೆಗಾಗಿ ಮಾರುವೇಷ ಧರಿಸಿದ ಪೊಲೀಸರು

Share
????????????????????????????????????
Share

ಚಿಕ್ಕಮಗಳೂರು:  ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ ಎಂದು ಘೋಷಿಸಿಲು ಕೋಟೆ ತೋಟ ರವೀಂದ್ರ ಮತ್ತು ತೊಂಬಟ್ಟು ಲಕ್ಷ್ಮಿ ಎಂಬುವವರನ್ನು ಪತ್ತೆ ಹಚ್ಚ ಬೇಕಾಗಿತ್ತು.

ಅದು ಅಷ್ಟು ಸುಲಭವಾಗಿ ಇರಲಿಲ್ಲ ಕಾರಣ ರವೀಂದ್ರ ಪಶ್ಚಿಮ ಘಟ್ಟಗಳ ಕಾಡಿನ ಇಂಚು,ಇಂಚು ಮಾಹಿತಿ ಜೊತೆಗೆ ಪೊಲೀಸ್ ರಿಂದ ತಪ್ಪಿಸಿ ಕೊಳ್ಳುವ ಚಾಣಕ್ಯತೆ ಹೊಂದಿದ್ದ ಇದರಿಂದಾಗಿ ಪೊಲೀಸ್ ರು ಮಾರು ವೇಷಭದಲ್ಲಿ ಕಾಡು ಸುತ್ತಲೂ ಪ್ಲಾನ್ ಮಾಡಿಕೊಂಡಿದ್ದರು.

ಈ ವಿಚಾರ ಶಾಂತಿಗಾಗಿ ನಾಗರೀಕ ವೇದಿಕೆಯವರೆಗೆ ತಿಳಿದಿತ್ತು. ರವೀಂದ್ರ ಸಂಪರ್ಕ ಮಾಡಲು ಅಷ್ಟು ಸುಲಭವಿರಲಿಲ್ಲ ಏಕೆಂದರೆ ಕಾಡಿನ ಇಂಚು,ಇಂಚು ಜಾಗ ಮತ್ತು ಸ್ಥಳೀಯರ ಸಹಕಾರ ಪಡೆದಿದ್ದ

ಮುಂಡಗಾರು ಲತಾ ಟೀಮ್ ಜೊತೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಹೊಂದಿದ್ದರಿಂದ ಅವರ ಗುಂಪು ಬಿಟ್ಟು ಹೊರನಡೆದಿದ್ದ ಹೀಗಾಗಿ ಇವನನ್ನು ಸಂಪರ್ಕ ಮಾಡಲು ಸಮಸ್ಯೆ ಆಗಿತ್ತು. ಆದ್ದರಿಂದ ಪುನರ್ವಸತಿ ಸಮಿತಿ ಮತ್ತು ಶಾಂತಿಗಾಗಿ ನಾಗರೀಕ ವೇದಿಕೆಯವರಿಗೂ ತಲೆ ಬಿಸಿಯಾಗಿತ್ತು.

ಇದರ ಮಧ್ಯೆ ಗುಪ್ತಚರ ಇಲಾಖೆಯ ರಮೇಶ್ ರಾವ್ ಎಂಬುವರು ಗಡ್ಡ ಬಿಟ್ಟು ಮಾಸಿದ ಶರ್ಟ್, ಪಂಚೆ ಉಟ್ಟರೆ ಗಿರೀಶ್ ಎಂಬುವರು ಟೋಪಿ,ಕನ್ನಡಕ ನೀಟಾದ ಡ್ರೆಸ್ ಏಕೆಂದರೆ ಇವರು ಬುದ್ಧಿಜೀವಿ ರೀತಿಯಲ್ಲಿ ಕಾಣಿಸುವಂತೆ ಇದ್ದರು.

ಕಳೆದ ಒಂದು ತಿಂಗಳಿಂದ ಸುತ್ತಿ ರವೀಂದ್ರರ ಮನೆ ಮತ್ತು ಸಂಭಂಧಿಕರನ್ನು ಸಂಪರ್ಕ ಮಾಡಿ ಕೆಲ ಮಾಹಿತಿ ಪತ್ತೇಹಚ್ಚಿದರು ಶಾಂತಿಗಾಗಿ ನಾಗರೀಕ ವೇದಿಕೆ ಮತ್ತು ಪುನರ್ ವಸತಿ ಸಮಿತಿಯವರು ಸಹಕಾರ ಮತ್ತು ಸಲಹೆಗಳು ಅಂತಿಮವಾಗಿದ್ದವು ಎನ್ನಲಾಗಿದೆ ಅಂತೂ ಇಂತೂ ನಕ್ಸಲ್ ಕೊನೆಯ ಕೊಂಡಿ ಕಳಚಿ ಜಿಲ್ಲಾಡಳಿತ ಮುಂದೆ ತರುವಲ್ಲಿ  ಯಶಸ್ಸು ಸಾಧಿಸಿದರು.

Naxal Ravindra found by undercover police

Share

Leave a comment

Leave a Reply

Your email address will not be published. Required fields are marked *

Don't Miss

ಜೆಜೆಎಂನಲ್ಲಿ ನಕಲಿ ಛಾಪಾ ಕಾಗದ ಬಳಸಿ ಸರ್ಕಾರಕ್ಕೆ ವಂಚನೆ

ಶೃಂಗೇರಿ:  ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೆಜೆಎಂ (ಜಲ ಜೀವನ್ ಮಿಷನ್) ಹಾಗೂ ಟಾಸ್ಕ್ ಫೋರ್ಸ್ ಯೋಜನೆಯಡಿ ಬೋರ್‌ವೆಲ್ ಕಾಮಗಾರಿ ನಿರ್ವಹಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೊಂದಿಗೆ ಮಾಡಿಕೊಂಡಿದ್ದ...

ಅಕ್ರಮ ಮದ್ಯ ಮಾರಾಟ-ಐವರು ಆರೋಪಿ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದ ಅಡ್ಡೆಗಳ ಮೇಲೆ ಪೊಲೀಸರು ಬಿರುಗಾಳಿ ದಾಳಿ ನಡೆಸಿದ್ದು, ಮಹಿಳೆ ಸೇರಿ ಐವರು ಆರೋಪಿಗಳನ್ನು...

Related Articles

ವಿಶ್ವವಿದ್ಯಾಲಯ ವಿದ್ಯಾ ಶಾಲೆಯ ನವೀಕೃತ ಕಟ್ಟಡ ಲೋಕಾರ್ಪಣೆ

ಚಿಕ್ಕಮಗಳೂರು: 105 ವರ್ಷ ಹಳೆಯ ವಿಶ್ವವಿದ್ಯಾಲಯ ವಿದ್ಯಾ ಶಾಲೆಯ ನವೀಕೃತ ಕಟ್ಟಡ ಹಾಗೂ ಆಟದ ಮೈದಾನ...

ಎರಡು ದೇವಸ್ಥಾನಗಳ ಬೀಗ ಒಡೆದು ಚಿನ್ನಾಭರಣ ಕಳವು

ಚಿಕ್ಕಮಗಳೂರು: ಒಂದೇ ದಿನ ಎರಡು ದೇವಸ್ಥಾನಗಳ ಬೀಗ ಒಡೆದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿರುವ ಘಟನೆ...

ನಗರದಲ್ಲಿ ಗ್ಯಾಂಗ್ ವಾರ್ ಸ್ವಯಂಪ್ರೇರಿತ ಪ್ರಕರಣ ದಾಖಲು

ಚಿಕ್ಕಮಗಳೂರು: ನಗರದ ಐ.ಜಿ ರಸ್ತೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ಯುವಕರ ಗುಂಪೊಂದು ಭೀಕರವಾಗಿ ಬಡಿದಾಡಿಕೊಂಡಿರುವ...

ಸತ್ತಿಹಳ್ಳಿ ಗ್ರಾಮದಲ್ಲಿ ಪತಿಯಿಂದ ಪತ್ನಿಯ ಮೇಲೆ ಹಲ್ಲೆ

ಚಿಕ್ಕಮಗಳೂರು: ಕುಡಿತದ ದಾಸನಾಗಿ, ಹೆಂಡತಿಯ ನಡತೆಯ ಮೇಲೆ ಇಲ್ಲಸಲ್ಲದ ಅನುಮಾನ ಪಟ್ಟು ಸೌದೆ ಬಡಿಗೆ ಹಾಗೂ...