Home namma chikmagalur ಗಡಿನಾಡು ಕಾಸರಗೋಡಿನಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ನಲ್ಲಿ ಚಿಣ್ಣರ ಕನ್ನಡ ಕಲರವ
namma chikmagalur

ಗಡಿನಾಡು ಕಾಸರಗೋಡಿನಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ನಲ್ಲಿ ಚಿಣ್ಣರ ಕನ್ನಡ ಕಲರವ

Share
Share

ಚಿಕ್ಕಮಗಳೂರು : ಗಡಿನಾಡು ಕಾಸರಗೋಡಿನಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕೇರಳದ ಕನ್ನಡ ಮಕ್ಕಳಿಗೆ ಕನ್ನಡ ಗೀತೆಗಳ ಶಿಬಿರ ನಡೆಸಲಾಯಿತು. ಈ ಕಾರ್ಯಾಗಾರವನ್ನು ಚಿಕ್ಕಮಗಳೂರಿನ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಲ್ಲಿಗೆ ಸುಧೀರ್ ನಡೆಸಿಕೊಟ್ಟರು ಸಮ್ಮೇಳನದಲ್ಲಿ 500 ಹೆಚ್ಚು ಮಕ್ಕಳು ಭಾಗವಹಿಸಿದ್ದರು. ರಾಜ್ಯಾಧ್ಯಕ್ಷ ಸಾಲುಮರದ ಚ .ನ.ಅಶೋಕ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಟಿ ಎಂ ಶಾಹಿದ್ ಸಿದ್ದೇಶ್,ಮಹದೇವ್ ಸಚ್ಚಿನ್ ನೀಲ ಸ್ವಾಮಿ ಪಾಲ್ಗೊಂಡಿದ್ದರು.

ಚಿಕ್ಕಮಗಳೂರಿಂದ ಕಾಸರಗೋಡಿಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಲ್ಲಿಗೆ ಸುಧೀರ್ ತಮ್ಮ ಭೇಟಿಯ ಅನುಭವ ಹಂಚಿಕೊಂಡಿದ್ದು, ಈ ರೀತಿ

ಕನ್ನಡ ಭಾಷೆಯ ಅಸ್ಮಿತೆಯ ಸಂಕೇತವಾದ ಕಾಸರಗೋಡು ನಮ್ಮನ್ನು ಪುನೀತಗೊಳಿಸಿತು. ಕಯ್ಯಾರ ಕಿಞ್ಞಣ್ಣ ರೈ ರವರ ಜನ್ಮ ಭೂಮಿಯಲ್ಲಿ ಅವರದ್ದೇ ಕವನದ ಸಾಲು ಬೆಂಕಿ ಬಿದ್ದಿದೆ ಮನೆಗೆ ಹೋ ಬೇಗ ಬನ್ನಿ ಎನ್ನುತ್ತಾ ನಮ್ಮ ಮನದಲ್ಲಿ ಮಿಡಿದು ಕನ್ನಡದ ಕಿಚ್ಚು ಹುಚ್ಚು ಹೊಳೆಯಾಗಿ ಹರಿಯುವುದು ನೋಡಾ ಎಂದು, ಮಕ್ಕಳ ಕಲರವ ಹಕ್ಕಿಗಳಂತೆ ವಿಜೃಂಭಣೆಗೊಂಡಿತು. ಜೊತೆಗೆ ಯಕ್ಷಗಾನದ ವೇಶಭೂಷಣಗಳು ನೋಡಿ ಮೈ ಮನ ರೋಮಾಂಚನ ಗೊಂಡಿತು ಅದನ್ನೊಮ್ಮೆ ಹಾಕಿಕೊಂಡು ಸಂಭ್ರಮಿಸಬೇಕು ಎನಿಸಿತ್ತು, ಕಾಡುಗಳಿಂದ ಆವೃತಗೊಂಡ ನಾಡು ಕನ್ನಡ ನಾಡು ನಮ್ಮ ಕನ್ನಡದ ಅಸ್ಮಿತೆಯ ಸಂಕೇತವೇ ಈ ಕಾಸರಗೋಡು ಅತ್ಯಂತ ಸಂಭ್ರಮವಾಯಿತು ಕನ್ನಡದ ನೆಲವೊಮ್ಮೆ ಪಾದಸ್ಪರ್ಶಿಸಿ ಪಾವನವಾಯಿತು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕಲಾವಿದರು ಕಳೆದ ಅತ್ಯಂತ ಸಂಭ್ರಮದ ಕ್ಷಣವಾಗಿತ್ತು, ಅದ್ಭುತವಾದ ವೇದಿಕೆ ಜೊತೆಗೆ ಕಲಾತಂಡ ವಿವಿಧ ರೀತಿಯ ಕಲೆಗೆ ರಸದೌತಣ ಉಣಬಡಿಸಿತ್ತು.

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....