Home Crime News ಹೆತ್ತ ತಾಯಿಯ ಮರಣ ಪ್ರಮಾಣ ಪತ್ರ ಮಾಡಿ ಖಾತೆ ಮಾಡಿಕೊಂಡ ಪಾಪಿ ಮಕ್ಕಳು
Crime News

ಹೆತ್ತ ತಾಯಿಯ ಮರಣ ಪ್ರಮಾಣ ಪತ್ರ ಮಾಡಿ ಖಾತೆ ಮಾಡಿಕೊಂಡ ಪಾಪಿ ಮಕ್ಕಳು

Share
Share

ಚಿಕ್ಕಮಗಳೂರು : ಸಖರಾಯಪಟ್ಟಣದ ಸಮೀಪದ ಗುಂಡಸಾಗರದ ಗಂಗಮ್ಮ(90) ಈಗಲೂ ಬದುಕಿದ್ದಾರೆ. ಆಸ್ತಿ ಲಪಾಟಯಿಸಲು ನಕಲಿ ಮರಣ ಪತ್ರ ಸೃಷ್ಟಿಸಿ ಗಂಗಮ್ಮರನ್ನು ಜೀವಂತ ಸಾಯಿಸಿದ್ದಾರೆ. ರಾಮೇಗೌಡ, ಗುಡ್ಡಪ್ಪ ಮತ್ತು ಶಿವನಂಜಪ್ಪ ಎಂಬ ಮೂರು ಜನ ಅಣ್ಣ ತಮ್ಮಂದಿರು ಮರಣ ಹೊಂದಿದ್ದಾರೆ ಆದರೆ ಆಸ್ತಿ ವಿಭಾಗ ಮಾಡಿಕೊಂಡಿರುವುದಿಲ್ಲ. ಹೀಗಾಗಿ ಆಸ್ತಿ ಹಕ್ಕುಗಳು ರಾಮೇಗೌಡರ ಪತ್ನಿ ಗಂಗಮ್ಮ ಹೆಸರಿಗೆ ಬಂದಿದೆ.

ಈ ವಿಷಯ ಗೊತ್ತಿದ್ದ ಗುಡ್ಡಪ್ಪನ ಚಾಲ್ತಿ ಸೊಸೆ ಹೇಮಾವತಿ ಎಂಬುವಳ ಕಣ್ಣು ಆಸ್ತಿ ಲಪಾಟಯಿಸಲು ಖತರ್ ನಾಕ್ ಪ್ಲಾನ್ ಮಾಡಿ ದಳ್ಳಾಳಿಗಳ ಮೂಲಕ ಕಂದಾಯ ಇಲಾಖೆಯ ಕದ ತಟ್ಟಿದ್ದಾಳೆ. ಪಳಗಿರುವ ಕಂದಾಯ ಅಧಿಕಾರಿ ಜಿತೇಂದ್ರ ನಾಯಕ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ ವಿರೇಶ್ ಹಾಗೂ ರಘರಾಮ್ ಕೈ ಜೋಡಿಸಿದ್ದಾರೆ.

ಗಂಗಮ್ಮ ಮರಣ ಹೊಂದಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸುವುದರ ಜೊತೆಗೆ ನಕಲಿ ವಂಶವೃಕ್ಷ ಮಾಡಿಕೊಟ್ಟಿದ್ದಾರೆ ಆದರೆ ಆದೇ ಹೇಮಾವತಿ ಮನೆಯಲ್ಲಿ ಈಗಲೂ ಗಂಗಮ್ಮ ಬದುಕಿದ್ದಾರೆ. ಈ ಬಗ್ಗೆ ಇಲಾಖೆ ಗಮನಕ್ಕೆ ಬಂದ ಮೇಲೆ ಸ್ವಯಂ ದೂರು ದಾಖಲಿಸಿಕೊಂಡು ಯಥಾಸ್ಥಿತಿಯಲ್ಲಿ ಇಡಲಾಗಿದೆ ಆದರೆ ಯಾರ ಮೇಲೂ ಕ್ರಮಕೈಗೊಂಡಿಲ್ಲದಿರುದು ಸಂಶಯಮೂಡಿಸುತ್ತದೆ. ನಕಲಿ ದಾಖಲೆ ನೀಡಿ ಹೇಮಾವತಿ 5,32 ಗುಂಟೆ ಜಮೀನು ತನ್ನ ಹೆಸರಿಗೆ ಮಾಡಿಸಿಕೊಂಡು ಗಂಗಮ್ಮ ಮೊಮ್ಮಗ ಕುಪ್ಪಾಳದ ಉಮೇಶ್ ಹೆಸರಿಗೆ ಮೂರು ಎಕರೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ದಾನಪತ್ರ ಮಾಡಿಸಿಕೊಡಲಾಗಿದೆ.

ಜಿತೇಂದ್ರ ಎಂಬ ಕಂದಾಯ ಅಧಿಕಾರಿ ಹಲವು ವರ್ಷಗಳಿಂದ ಸಖರಾಯಪಟ್ಟಣದಲ್ಲಿ ಪಟ್ಟಾಗಿ ಕುಳಿತಿರುವುದಲ್ಲದೆ ತಿನ್ನಬಾರದ ಕಡೆಯಲ್ಲಿ ತಿನ್ನುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಇದ್ದರು ಯಾರಿಗೂ ಕೇರ್ ಮಾಡದೆ ನಕಲಿ ದಂಧೆ ಮುಂದುವರೆಸಿದ್ದಾನೆ ಎಂದು ರೈತ ಸಂಘದ ಜಲ್ಲಾ ಅಧ್ಯಕ್ಷ ಗುರುಶಾಂತಪ್ಪ ದೂರಿದ್ದಾರೆ.

ಇವನ ಗುರು ನಕಲಿ ಸಾಗುವಳಿ ಚೀಟಿ ನೀಡಿ ಅಮಾನತು ಆಗಿದ್ದ ಉಮೇಶ್ ಈತನನ್ನು ಮೀರಿಸುವ ಜಿತೇಂದ್ರ ಹಳ್ಳಿಕೆರೆ ಕಾವಲ್ ನ 1600 ಎಕರೆಗಳಷ್ಟು ನಕಲಿ ಸಾಗುವಳಿ ನೀಡುವಲ್ಲಿ ಪ್ರಮುಖ ಪಾತ್ರದಾರಿ ಆದರೆ ಇವನ ಮೇಲೆ ಯಾವ ಕ್ರಮ ಆಗದಿರುವುದೆ ಬದುಕಿದವರನ್ನು ಸಾಯಿಸಿ, ಸತ್ತವರನ್ನು ಬದುಕಿಸುವಷ್ಟು ಚಾಲ್ತಿ ದಂಧೆಗೆ ರಹದಾರಿ ಮಾಡಿಕೊಂಡಿದ್ದಾನೆ ಎಂದು ಗುರುಶಾಂತಪ್ಪ ಆರೋಪಿಸಿದ್ದಾರೆ. ಈಗಲಾದರೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಸೋಮವಾರ ಕೆರೆಯ...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನೊಂದ ಕುಟುಂಬಕ್ಕೆ ಸರ್ಕಾರಿ ಹುದ್ದೆ ಕಲ್ಪಿಸಿಕೊಡಬೇ ಕು ಎಂದು ಆಗ್ರಹಿಸಿ ದಸಂಸ ಮುಖಂಡರುಗಳು...

Related Articles

ಸಹೋದರನ ಮೇಲೆಯೇ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿ ಕೊಲೆ

ಲಿಂಗದಹಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಹೋದರನ ಮೇಲೆಯೇ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...