Home Crime News ಹೆತ್ತ ತಾಯಿಯ ಮರಣ ಪ್ರಮಾಣ ಪತ್ರ ಮಾಡಿ ಖಾತೆ ಮಾಡಿಕೊಂಡ ಪಾಪಿ ಮಕ್ಕಳು
Crime News

ಹೆತ್ತ ತಾಯಿಯ ಮರಣ ಪ್ರಮಾಣ ಪತ್ರ ಮಾಡಿ ಖಾತೆ ಮಾಡಿಕೊಂಡ ಪಾಪಿ ಮಕ್ಕಳು

Share
Share

ಚಿಕ್ಕಮಗಳೂರು : ಸಖರಾಯಪಟ್ಟಣದ ಸಮೀಪದ ಗುಂಡಸಾಗರದ ಗಂಗಮ್ಮ(90) ಈಗಲೂ ಬದುಕಿದ್ದಾರೆ. ಆಸ್ತಿ ಲಪಾಟಯಿಸಲು ನಕಲಿ ಮರಣ ಪತ್ರ ಸೃಷ್ಟಿಸಿ ಗಂಗಮ್ಮರನ್ನು ಜೀವಂತ ಸಾಯಿಸಿದ್ದಾರೆ. ರಾಮೇಗೌಡ, ಗುಡ್ಡಪ್ಪ ಮತ್ತು ಶಿವನಂಜಪ್ಪ ಎಂಬ ಮೂರು ಜನ ಅಣ್ಣ ತಮ್ಮಂದಿರು ಮರಣ ಹೊಂದಿದ್ದಾರೆ ಆದರೆ ಆಸ್ತಿ ವಿಭಾಗ ಮಾಡಿಕೊಂಡಿರುವುದಿಲ್ಲ. ಹೀಗಾಗಿ ಆಸ್ತಿ ಹಕ್ಕುಗಳು ರಾಮೇಗೌಡರ ಪತ್ನಿ ಗಂಗಮ್ಮ ಹೆಸರಿಗೆ ಬಂದಿದೆ.

ಈ ವಿಷಯ ಗೊತ್ತಿದ್ದ ಗುಡ್ಡಪ್ಪನ ಚಾಲ್ತಿ ಸೊಸೆ ಹೇಮಾವತಿ ಎಂಬುವಳ ಕಣ್ಣು ಆಸ್ತಿ ಲಪಾಟಯಿಸಲು ಖತರ್ ನಾಕ್ ಪ್ಲಾನ್ ಮಾಡಿ ದಳ್ಳಾಳಿಗಳ ಮೂಲಕ ಕಂದಾಯ ಇಲಾಖೆಯ ಕದ ತಟ್ಟಿದ್ದಾಳೆ. ಪಳಗಿರುವ ಕಂದಾಯ ಅಧಿಕಾರಿ ಜಿತೇಂದ್ರ ನಾಯಕ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ ವಿರೇಶ್ ಹಾಗೂ ರಘರಾಮ್ ಕೈ ಜೋಡಿಸಿದ್ದಾರೆ.

ಗಂಗಮ್ಮ ಮರಣ ಹೊಂದಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸುವುದರ ಜೊತೆಗೆ ನಕಲಿ ವಂಶವೃಕ್ಷ ಮಾಡಿಕೊಟ್ಟಿದ್ದಾರೆ ಆದರೆ ಆದೇ ಹೇಮಾವತಿ ಮನೆಯಲ್ಲಿ ಈಗಲೂ ಗಂಗಮ್ಮ ಬದುಕಿದ್ದಾರೆ. ಈ ಬಗ್ಗೆ ಇಲಾಖೆ ಗಮನಕ್ಕೆ ಬಂದ ಮೇಲೆ ಸ್ವಯಂ ದೂರು ದಾಖಲಿಸಿಕೊಂಡು ಯಥಾಸ್ಥಿತಿಯಲ್ಲಿ ಇಡಲಾಗಿದೆ ಆದರೆ ಯಾರ ಮೇಲೂ ಕ್ರಮಕೈಗೊಂಡಿಲ್ಲದಿರುದು ಸಂಶಯಮೂಡಿಸುತ್ತದೆ. ನಕಲಿ ದಾಖಲೆ ನೀಡಿ ಹೇಮಾವತಿ 5,32 ಗುಂಟೆ ಜಮೀನು ತನ್ನ ಹೆಸರಿಗೆ ಮಾಡಿಸಿಕೊಂಡು ಗಂಗಮ್ಮ ಮೊಮ್ಮಗ ಕುಪ್ಪಾಳದ ಉಮೇಶ್ ಹೆಸರಿಗೆ ಮೂರು ಎಕರೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ದಾನಪತ್ರ ಮಾಡಿಸಿಕೊಡಲಾಗಿದೆ.

ಜಿತೇಂದ್ರ ಎಂಬ ಕಂದಾಯ ಅಧಿಕಾರಿ ಹಲವು ವರ್ಷಗಳಿಂದ ಸಖರಾಯಪಟ್ಟಣದಲ್ಲಿ ಪಟ್ಟಾಗಿ ಕುಳಿತಿರುವುದಲ್ಲದೆ ತಿನ್ನಬಾರದ ಕಡೆಯಲ್ಲಿ ತಿನ್ನುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಇದ್ದರು ಯಾರಿಗೂ ಕೇರ್ ಮಾಡದೆ ನಕಲಿ ದಂಧೆ ಮುಂದುವರೆಸಿದ್ದಾನೆ ಎಂದು ರೈತ ಸಂಘದ ಜಲ್ಲಾ ಅಧ್ಯಕ್ಷ ಗುರುಶಾಂತಪ್ಪ ದೂರಿದ್ದಾರೆ.

ಇವನ ಗುರು ನಕಲಿ ಸಾಗುವಳಿ ಚೀಟಿ ನೀಡಿ ಅಮಾನತು ಆಗಿದ್ದ ಉಮೇಶ್ ಈತನನ್ನು ಮೀರಿಸುವ ಜಿತೇಂದ್ರ ಹಳ್ಳಿಕೆರೆ ಕಾವಲ್ ನ 1600 ಎಕರೆಗಳಷ್ಟು ನಕಲಿ ಸಾಗುವಳಿ ನೀಡುವಲ್ಲಿ ಪ್ರಮುಖ ಪಾತ್ರದಾರಿ ಆದರೆ ಇವನ ಮೇಲೆ ಯಾವ ಕ್ರಮ ಆಗದಿರುವುದೆ ಬದುಕಿದವರನ್ನು ಸಾಯಿಸಿ, ಸತ್ತವರನ್ನು ಬದುಕಿಸುವಷ್ಟು ಚಾಲ್ತಿ ದಂಧೆಗೆ ರಹದಾರಿ ಮಾಡಿಕೊಂಡಿದ್ದಾನೆ ಎಂದು ಗುರುಶಾಂತಪ್ಪ ಆರೋಪಿಸಿದ್ದಾರೆ. ಈಗಲಾದರೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಚಿಕ್ಕಮಗಳೂರು:  ಜಿಲ್ಲಾ ನ್ಯಾಯಾಲಯಕ್ಕೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ 1.30 ರಿಂದ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ...

ಗಾಂಜಾ ಸೇವಿಸಿ ರಂಪಾಟ – ಏಳು ಮಂದಿ ಬಂಧನ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಾದಕ ದ್ರವ್ಯ ಸೇವನೆ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ಚುರುಕುಗೊಳಿಸಿದ್ದು ಸಾರ್ವಜನಿಕ ಸ್ಥಳಗಳಲ್ಲಿ...

ಎಐಟಿ ವೃತ್ತದ ಬಳಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಎಐಟಿ ವೃತ್ತದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಚೇರಿಯಿಂದ ಮೋಟಾರ್ ಸೈಕಲ್‌ನಲ್ಲಿ...