ಚಿಕ್ಕಮಗಳೂರು: ಚಿಕ್ಕಮಗಳೂರು ಕೆ,ಎಸ್,ಆರ್, ಟಿ ಸಿ ಬಸ್ಸುಗಳನ್ನು “ಡಕೋಟಾ” ಎಂದು ಜನ ಕರೆಯ ತೊಡಗಿದ್ದಾರೆ. ಕೆ,ಎಸ್,ಆರ್,ಟಿ ,ಸಿ ಬಸ್ಸುಗಳು ರಸ್ತೆಯಲ್ಲಿ ಕೆಟ್ಟು ನಿಂತಿರುವ ದೃಶ್ಯ ಕಾಣಬಹುದು.
ಚಿಕ್ಕಮಗಳೂರು ಮತ್ತು ಕಡೂರು ನಡುವೆ ಒಂದೇ ದಿನ ಮೂರ್ ನಾಲ್ಕು ಬಸ್ಸುಗಳು ಕೆಟ್ಟು ನಿಂತಿದ್ದು ಪ್ರಯಾಣಿಕರು ಉರಿ ಬಿಸಿಲು ತಾಳಲಾರದೆ ಚಡಪಡಿಸುತ್ತಿದ್ದರು.
ಒಂದೇ ದಿನ ಲಕ್ಯಾ ಕ್ರಾಸ್ ಬಳಿ ಮತ್ತು ಹಿರೇಗೌಜದ ಸಮೀಪ ಮತ್ತು ಸಖರಾಯಪಟ್ಟಣದ ಹತ್ತಿರ ಜೊತೆಗೆ ಮೂಡಿಗೆರೆ ರಸ್ತೆಯಲ್ಲಿ ಕೆ,ಎಸ್,ಆರ್, ಟಿ,ಸಿ ಬಸ್ಸುಗಳು ಕೆಟ್ಟು ನಿಂತಿವೆ .ಚಲಿಸುತ್ತಿದ್ದ ಕೆಂಪು ಬಸ್ಸಿನ ಚಕ್ರ ಕಳಚಿ ಬಿದ್ದು ಪ್ರಯಾಣಿಕರು ಉಸಿರು ಬಿಗಿ ಹಿಡಿದು ಕುಳಿತುಕೊಂಡು ಎದೆ ಉಸಿರು ಬಿಡುತ್ತಿರುವ ದೃಶ್ಯ ಇಲ್ಲಿನ ಕೆ,ಎಸ್,ಆರ್,ಟಿ,ಸಿ ಅಧಿಕಾರಿಗೆ ತಿಳಿಯದಿರುವುದು ಆಶ್ಚರ್ಯ ಉಂಟು ಮಾಡುತ್ತದೆ.
ಸಾಮಾನ್ಯ ಜನರ ಪ್ರಯಾಣ ಮಾಡಲು,ವಿದ್ಯಾರ್ಥಿಗಳು ಶಾಲೆಗೆ ಹೋಗಲು ಬಸ್ಸುಗಳು ಅನಿವಾರ್ಯ ಆದರೆ ಎಲ್ಲಿ ಯಾವಾಗ ಏನಾಗುತ್ತದೆ ಎಂಬ ಭಯ,ಅನುಮಾನ ಉಂಟಾಗುತ್ತಿದೆ.ಸರ್ಕಾರ ಗ್ಯಾರಂಟಿ, ಗ್ಯಾರಂಟಿ, ಎಂದು ಬಡಾಯಿ ಕೊಚ್ಚಿಕೊಂಡು ಪ್ರಚಾರ ಪಡೆಯುತ್ತಿದೆ ವಿನಹ ಬಸ್ಸುಗಳ ರಿಪೇರಿ ಮಾಡಿಸುವುದು ಗೊತ್ತಿಲ್ಲ. ಇಲ್ಲಿನ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ಬರೀ ತೇಪೆ ಕೆಲಸದಲ್ಲಿ ನಿರತರಾಗಿದ್ದಾರೆ.
ಸತೀಶ್ ಎಂಬ ಅಧಿಕಾರಿ ಬಸ್ ಡಿಪೋದಲ್ಲಿ ತೇಗದ ಮರ ಕಡಿದು ಸಾಗಿಸಿದವರಿಗೆ ಬಡ್ತಿ ನೀಡಿ ರಾಜಕಾರಣಿಗಳಿಂದ ಸೈ ಅನ್ನಿಸಿ ಕೊಳ್ಳಲು ಬಕೆಟ್ ಹಿಡಿದುಕೊಂಡು ನಿಂತಿದ್ದಾರೆ. ಜನರ,ಪ್ರಯಾಣಿಕರ ಜೀವ ಕಳೆದು ಕೊಳ್ಳುವ ಮೊದಲು ಕ್ರಮ ಕೈಗೊಳ್ಳದಿದ್ದರೆ ಜನ ಡಿಪೋದ ಬಳಿ ಬಂದು ಕ್ಯಾಕರಿಸಿ ಉಗಿಯುವ ಸಮಯ ಬರುತ್ತದೆ ಎಂದು ಜನ ಹೇಳುತ್ತಿದ್ದಾರೆ.
Dakota buses in Chikmagalur
Leave a comment