Home namma chikmagalur chikamagalur ಚಿಕ್ಕಮಗಳೂರಿನಲ್ಲಿ ಡಕೋಟಾ ಬಸ್ಸುಗಳು
chikamagalurHomeLatest Newsnamma chikmagalur

ಚಿಕ್ಕಮಗಳೂರಿನಲ್ಲಿ ಡಕೋಟಾ ಬಸ್ಸುಗಳು

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಕೆ,ಎಸ್,ಆರ್, ಟಿ ಸಿ ಬಸ್ಸುಗಳನ್ನು “ಡಕೋಟಾ” ಎಂದು ಜನ ಕರೆಯ ತೊಡಗಿದ್ದಾರೆ. ಕೆ,ಎಸ್,ಆರ್,ಟಿ ,ಸಿ ಬಸ್ಸುಗಳು ರಸ್ತೆಯಲ್ಲಿ ಕೆಟ್ಟು ನಿಂತಿರುವ ದೃಶ್ಯ ಕಾಣಬಹುದು.

ಚಿಕ್ಕಮಗಳೂರು ಮತ್ತು ಕಡೂರು ನಡುವೆ ಒಂದೇ ದಿನ ಮೂರ್ ನಾಲ್ಕು ಬಸ್ಸುಗಳು ಕೆಟ್ಟು ನಿಂತಿದ್ದು ಪ್ರಯಾಣಿಕರು ಉರಿ ಬಿಸಿಲು ತಾಳಲಾರದೆ ಚಡಪಡಿಸುತ್ತಿದ್ದರು.

ಒಂದೇ ದಿನ ಲಕ್ಯಾ ಕ್ರಾಸ್ ಬಳಿ ಮತ್ತು ಹಿರೇಗೌಜದ ಸಮೀಪ ಮತ್ತು ಸಖರಾಯಪಟ್ಟಣದ ಹತ್ತಿರ ಜೊತೆಗೆ ಮೂಡಿಗೆರೆ ರಸ್ತೆಯಲ್ಲಿ ಕೆ,ಎಸ್,ಆರ್, ಟಿ,ಸಿ ಬಸ್ಸುಗಳು ಕೆಟ್ಟು ನಿಂತಿವೆ .ಚಲಿಸುತ್ತಿದ್ದ ಕೆಂಪು ಬಸ್ಸಿನ ಚಕ್ರ ಕಳಚಿ ಬಿದ್ದು ಪ್ರಯಾಣಿಕರು ಉಸಿರು ಬಿಗಿ ಹಿಡಿದು ಕುಳಿತುಕೊಂಡು ಎದೆ ಉಸಿರು ಬಿಡುತ್ತಿರುವ ದೃಶ್ಯ ಇಲ್ಲಿನ ಕೆ,ಎಸ್,ಆರ್,ಟಿ,ಸಿ ಅಧಿಕಾರಿಗೆ ತಿಳಿಯದಿರುವುದು ಆಶ್ಚರ್ಯ ಉಂಟು ಮಾಡುತ್ತದೆ.

ಸಾಮಾನ್ಯ ಜನರ ಪ್ರಯಾಣ ಮಾಡಲು,ವಿದ್ಯಾರ್ಥಿಗಳು ಶಾಲೆಗೆ ಹೋಗಲು ಬಸ್ಸುಗಳು ಅನಿವಾರ್ಯ ಆದರೆ ಎಲ್ಲಿ ಯಾವಾಗ ಏನಾಗುತ್ತದೆ ಎಂಬ ಭಯ,ಅನುಮಾನ ಉಂಟಾಗುತ್ತಿದೆ.ಸರ್ಕಾರ ಗ್ಯಾರಂಟಿ, ಗ್ಯಾರಂಟಿ, ಎಂದು ಬಡಾಯಿ ಕೊಚ್ಚಿಕೊಂಡು ಪ್ರಚಾರ ಪಡೆಯುತ್ತಿದೆ ವಿನಹ ಬಸ್ಸುಗಳ ರಿಪೇರಿ ಮಾಡಿಸುವುದು ಗೊತ್ತಿಲ್ಲ. ಇಲ್ಲಿನ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ಬರೀ ತೇಪೆ ಕೆಲಸದಲ್ಲಿ ನಿರತರಾಗಿದ್ದಾರೆ.

ಸತೀಶ್ ಎಂಬ ಅಧಿಕಾರಿ ಬಸ್ ಡಿಪೋದಲ್ಲಿ ತೇಗದ ಮರ ಕಡಿದು ಸಾಗಿಸಿದವರಿಗೆ ಬಡ್ತಿ ನೀಡಿ ರಾಜಕಾರಣಿಗಳಿಂದ ಸೈ ಅನ್ನಿಸಿ ಕೊಳ್ಳಲು ಬಕೆಟ್ ಹಿಡಿದುಕೊಂಡು ನಿಂತಿದ್ದಾರೆ. ಜನರ,ಪ್ರಯಾಣಿಕರ ಜೀವ ಕಳೆದು ಕೊಳ್ಳುವ ಮೊದಲು ಕ್ರಮ ಕೈಗೊಳ್ಳದಿದ್ದರೆ ಜನ ಡಿಪೋದ ಬಳಿ ಬಂದು ಕ್ಯಾಕರಿಸಿ ಉಗಿಯುವ ಸಮಯ ಬರುತ್ತದೆ ಎಂದು ಜನ ಹೇಳುತ್ತಿದ್ದಾರೆ.

Dakota buses in Chikmagalur

Share

Leave a comment

Leave a Reply

Your email address will not be published. Required fields are marked *

Don't Miss

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ ಘಟನೆ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಳದಾಳ್ ಪಾಳ್ಯದಲ್ಲಿ ನಡೆದಿದೆ. ತ್ಯಾಗರಾಜ್ ಗೌಡ ಎಂಬುವವರ...

ಎಮ್ಮೆದೊಡ್ಡಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ವೃದ್ಧನ ಸಾವು

ಕಡೂರು: ತಾಲ್ಲೂಕಿನ ಎಮ್ಮೆದೊಡ್ಡಿ ರಸ್ತೆಯ ಕರಿಯಮ್ಮ ದೇವಸ್ಥಾನದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಶೇಖರಪ್ಪ ಎಂದು ಗುರುತಿಸಲಾಗಿದ್ದು, ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಡೂರು...

Related Articles

ಜಿಲ್ಲೆಯಲ್ಲಿ ಜನನ-ಮರಣ ನೋಂದಣಿ ಕಡ್ಡಾಯ

ಚಿಕ್ಕಮಗಳೂರು:  ಭಾರತದ ನಾಗರಿಕ ನೋಂದಣಿ ನಿಯಮದ ಪ್ರಕಾರ ಜನನ-ಮರಣ ನೋಂದಣಿಯನ್ನು ಪ್ರತಿಯೊಬ್ಬರೂ ತಪ್ಪದೇ ಮಾಡಿಸಬೇಕು ಎಂದು...

ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ

ಚಿಕ್ಕಮಗಳೂರು: ಲ್ಲೆಯಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಇಲ್ಲ; ಬುಕಿಂಗ್ ಮಾಡಿದವರಿಗೆ ನಿಯಮಾನುಸಾರ ಗ್ಯಾಸ್...

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ-ಸವಾರ ಸಾವು

ಕಡೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...

ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ – 48.50 ಲಕ್ಷ ರೂ. ವಂಚನೆ

ಚಿಕ್ಕಮಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧಗಳ ಅಬ್ಬರ ಮುಂದುವರಿದಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ ಎಂಬ...