ಮೂಡಿಗೆರೆ: ಚಾಲಕನ ನಿಯಂ ತ್ರಣ ತಪ್ಪಿದ ಕ್ರೇನ್ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನ ಪ್ಪಿದ್ದ ಘಟನೆ ಬುಧವಾರ ಬೆಳಿಗ್ಗೆ ಪಟ್ಟಣದ ಕಾಲೇಜು ರಸ್ತೆಯಲ್ಲಿ ನಡೆದಿದೆ.
ತಾಲ್ಲೂಕಿನ ಹಳ್ಳದಗಂಡಿ ಗ್ರಾಮದ ಅಂಗನವಾಡಿ ಶಿಕ್ಷಕಿ ಸಂಪ್ರೀತ (21) ಮೃತಪಟ್ಟವರು. ಹೆಸ್ಗಲ್ ಗ್ರಾಮದ ಕಡೆಮಾಡ್ಕಲ್ ಅಂಗನವಾಡಿ ಶಿಕ್ಷಕಿ ಸುಜಾತ (28) ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೆಸ್ಗಲ್ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ತಯಾರಿ ನಡೆಸಿ, ಬಳಿಕ ಕಾರ್ಯಕ್ರಮಕ್ಕೆ ಕಾಲೇಜು ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕ್ರೇನ್, ಸ್ಕೂಟರ್ ಮೇಲೇರಿದ್ದು ಸ್ಕೂಟರ್ನಲ್ಲಿದ್ದ ಸಂಪ್ರೀತ ಕ್ರೇನ್ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಮೃತದೇಹವನ್ನು ಹೊರ ತೆಗೆಯಲು ಹರಸಾಹಸ ಪಡುವಂತಾಯಿತು. ಸ್ಕೂಟರ್ ನಜ್ಜುಗುಜ್ಜಾಗಿದ್ದು, ಗಾಯಗೊಂಡಿರುವ ಸುಜಾತ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟ ಸಂಪ್ರೀತ ಅವರು, ಕೆಲವು ದಿನಗಳ ಹಿಂದೆ ಮನೆ ನಿರ್ಮಿಸಿ ಗೃಹ ಪ್ರವೇಶ ನಡೆಸಿದ್ದರು. ಸುಜಾತ ಹೆಸ್ಗಲ್ ಗ್ರಾ.ಪಂ. ಕರವಸೂಲಿಗಾರ ರವಿ ಅವರ ಪತ್ನಿಯಾಗಿದ್ದು, ಒಂಬತ್ತು ತಿಂಗಳ ಮಗುವಿದೆ. ಆಸ್ಪತ್ರೆ ಆವರಣದಲ್ಲಿ ಸಂಬಂ ಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
Crane-scooter collision; Anganwadi teacher dies
Leave a comment