ಚಿಕ್ಕಮಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಹಾಗೂ ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವಿಜಯ ಪತಾಕೆ ಹಾರಿಸಿದ ಹಿನ್ನೆಲೆಯಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಈ ವೇಳೆ ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ ಸಿದ್ದರಾಮಯ್ಯ ನಾಯಕತ್ವ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಪ್ರಾಮಾಣಿಕವಾಗಿ ತಲುಪಿದ ಹಿನ್ನೆಲೆಯಲ್ಲಿ ರಾಜ್ಯದ ಎರಡು ಕ್ಷೇತ್ರದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಅತ್ಯುತ್ತಮವಾಗಿ ಗೆಲುವು ಸಾಧಿಸಲು ಕಾರಣವಾ ಗಿದೆ ಎಂದು ಹೇಳಿದರು.
ಬಿಜೆಪಿ ನೈತಿಕ ಸಿದ್ದಾಂತ ಹಾಗೂ ಜನಪರ ಆಲೋಚನೆ ಇಲ್ಲದ ಪಕ್ಷ. ಕೇವಲ ಸಿದ್ದರಾಮಯ್ಯರಿಗೆ ಟೀಕೆ ಮಾಡುವುದೇ ನಿತ್ಯದ ಕಾಯಕವಾಗಿದೆ ಹೊರತು, ಜನಪರ ಆಡಳಿತ ಮತ್ತು ಕಾಳಜಿಯು ಇಲ್ಲವಾಗಿದೆ ಎಂ ದ ಅವರು ರೈತರು, ಕಾರ್ಮಿಕರು, ದಲಿತರು ಹಾಗೂ ಅಲ್ಪಸಂಖ್ಯಾತರ ವಿರೋಧಿಯಾಗಿ ಬಿಜೆಪಿ ಆಟಕ್ಕುಂ ಟು, ಲೆಕ್ಕಕ್ಕಿಲ್ಲದಂತಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರು ಜನಪರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕೇವಲ ಯಡಿಯೂರಪ್ಪನವರ ಹೆಸರಿನಲ್ಲೇ ರಾಜಕೀಯ ಮಾಡುತ್ತಿದ್ದಾರೆ. ಪ್ರಸ್ತುತ ಬಿಜೆಪಿ ನಾಯಕರಾದ ಬಸವಗೌಡ ಪಾಟೀಲ್, ಸೂರಪ್ಪ ಸೇರಿದಂತೆ ಅನೇಕರಲ್ಲಿ ಒಗ್ಗಟ್ಟಿನ ಕೊರತೆಯಿಂದ ಪಕ್ಷ ತ್ಯಜಿಸಿದ್ದು, ಒಟ್ಟಾರೆ ಬಿಜೆಪಿ ಒಡೆದ ಮನೆಯಂತಾಗಿದೆ. ಆದರೆ ಕಾಂಗ್ರೆಸ್ ಸರ್ವ ಧರ್ಮ, ಜಾತಿ ಒಂದೂಗೂಡಿಸುವ ಮೂಲಕ ಒಗ್ಗಟ್ಟಿನ ಪಕ್ಷವಾಗಿದೆ ಎಂದರು.
ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ್ಧ ಬಿಜೆಪಿ ನಾಯಕರು, ಪಂಚ ರಾಜ್ಯ ಚುನಾವಣೆಗ ಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ನಕಲಿಸಿಕೊಂಡು ಚುನಾವಣೆ ನಡೆಸಿದೆ. ಆದರೆ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಮತದಾರರು ಬಿಜೆಪಿ ತಿರಸ್ಕರಿಸಿದ್ದು, ಉಳಿದ ಪಶ್ಚಿಮ ಬಂಗಾಳ, ಪುದುಚೇರಿ ಹಾ ಗೂ ಅಸ್ಸಾಂ ರಾಜ್ಯದಲ್ಲಿ ವಾಮಮಾರ್ಗದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಹಾಗೂ ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಗ್ಯಾರಂಟಿ ಯೋಜನೆಗ ಳು ಜನರನ್ನು ಸೋಮಾರಿ ಮಾಡಲಿವೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಆದರೆ ರಾಜ್ಯದ ಪ್ರಜ್ಞಾ ವಂತ ಮತದಾರರು ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಬಿಜೆಪಿ ಕುತಂತ್ರದ ನಡು ವೆಯು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಹುಲ್ಗಾಂಧಿ ಹಾಗೂ ಪಕ್ಷದ ಕಾ ರ್ಯಕರ್ತರು ಕೆಲಸ ನಿರ್ವಹಿಸಿದ ಪರಿಣಾಮ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಇದು ಮುಂದಿನ ೨೦೨೮ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಮತ್ತೊಮ್ಮೆ ಕರ್ನಾಟಕದಲ್ಲಿ ಕಾಂ ಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜನಪರ ಕೆಲಸ ಮಾಡಲಿದೆ ಎಂದರು.
ದೇಶದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಜನರ ಮುಗ್ದ ಮನಸ್ಸಿಗೆ ಮಂಕುಬೂದಿ ಎರಚಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಆದರೆ ಮತದಾನ ಮರುದಿನವೇ ಹೋಟೆಲ್ ಅಡುಗೆ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ ದಿಡೀರನೇ ೧೦೦೦ ರೂ.ಗೆ ಏರಿಸುವ ಮೂಲಕ ನಾಚಿಕೇಡಿನ ರಾಜಕಾರಣ ಬಿಜೆಪಿ ಮಾಡಿದೆ ಎಂದು ಆರೋಪಿಸಿದರು.
ಶೃಂಗೇರಿ ಶಾಸಕ ರಾಜೇಗೌಡರ ಅಂಚೆ ಮತಗಳಲ್ಲಿ ಬಿಜೆಪಿ ತಿರುಚುವಂಥ ಕೆಲಸ ಮಾಡಿ ಕುತಂತ್ರದಿಂ ದ ಗೆಲುವು ಸಾಧಿಸಿದ್ದು, ನೈಜವಾಗಿ ಬಿಜೆಪಿ ಗೆಲುವಲ್ಲ. ವಾಮಮಾರ್ಗದಲ್ಲಿ ಮಾಡಿರುವ ಅಕ್ರಮವಾಗಿದೆ. ಈ ಇವೆಲ್ಲದರ ನಡುವೆಯು ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷವು ಜನಾರ್ಶೀವಾದದಿಂದ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕೇರಳ ರಾಜ್ಯದ ಫಲಿತಾಂಶವೇ ಕಾರಣವಾಗಿದೆ ಎಂದರು.
ಕಾಂಗ್ರೆಸ್ ಕಿಸಾನ್ ಸೆಲ್ ಮುಖಂಡ ಸಿ.ಎನ್.ಅಕ್ಮಲ್ ಮಾತನಾಡಿ ಭಾರತ ಅಭಿವೃದ್ದಿಗೊಳ್ಳಲು ವಿದ್ಯಾ ವಂತ ವ್ಯಕ್ತಿ ಪ್ರಧಾನಿಯಾಗಬೇಕು ಎಂದು ನೆಹರುರವರು ಏಳುವರೆ ದಶಕಗಳ ಮೊದಲೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ ಇಂದಿನ ದೇಶದ ಪ್ರಧಾನಿಗಳು ಹೆಬ್ಬಿಟ್ಟಿನ ಪ್ರಧಾನಿಯಾಗಿ ದೇಶ ಅಭಿವೃದ್ಧಿಯಿಂ ದ ಕುಂಠಿತವಾಗುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ತಾಲ್ಲೂಕು ಅಧ್ಯಕ್ಷ ಬೆಟ್ಟಗೆರೆ ಪ್ರವೀಣ್, ನಗರಸಭೆ ಸದಸ್ಯ ರಾದ ಲಕ್ಷ್ಮಣ್, ಪರಮೇಶ್ವರ್ ರಾಜ್ ಅರಸ್, ಮುಖಂಡರುಗಳಾದ ಹೆಚ್.ಎಸ್.ಶಿವಕುಮಾರ್, ಪ್ರಸಾದ್ ಅಮೀನ್, ಹುಣಸೇಮಕ್ಕಿ ಲಕ್ಷ್ಮಣ್, ಎನ್.ಎಂ.ನಾಗೇಶ್, ರಾಜೇಶ್ ಥಾಯಿರ್ ಅಹ್ಮದ್, ರಾಘವೇಂದ್ರ, ಶ್ರೀ ಕಾಂತ್, ಮಧು, ಅಭಿ, ಅನ್ಸರ್ ಆಲಿ, ಸಿಲ್ವೆಸ್ಟರ್, ಸಂತೋಷ್ ಲಕ್ಯಾ, ಸಚಿನ್ಸಿಂಗ್ ಮತ್ತಿತರರಿದ್ದರು
Celebration by distributing sweets by Block Congress workers.
Leave a comment