Home namma chikmagalur chikamagalur ಪ್ರೇಮವಾಹಿನಿ ರಥಕ್ಕೆ ತರೀಕೆರೆಯಲ್ಲಿ ಭವ್ಯ ಸ್ವಾಗತ
chikamagalurHomeLatest Newsnamma chikmagalur

ಪ್ರೇಮವಾಹಿನಿ ರಥಕ್ಕೆ ತರೀಕೆರೆಯಲ್ಲಿ ಭವ್ಯ ಸ್ವಾಗತ

Share
Share

ಚಿಕ್ಕಮಗಳೂರು: ತರೀಕೆರೆಯ ಮೂಲಕ ಜಿಲ್ಲೆಯನ್ನು ಪ್ರವೇಶಿಸಿದ ‘ಶ್ರೀಸತ್ಯಸಾಯಿ ಪ್ರೇಮವಾಹಿನಿ’ ರಾಷ್ಟ್ರೀಯ ರಥಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು.

ಶಿವಮೊಗ್ಗಜಿಲ್ಲೆಯ ಮೂಲಕ ಶಿವಮೊಗ್ಗ ಜಿಲ್ಲಾ ಸತ್ಯಸಾಯಿ ಸೇವಾ ಸಮಿತಿಗಳ ಅಧ್ಯಕ್ಷ ಗೋಪಾಲ್ ನೇತೃತ್ವದಲ್ಲಿ ಇಂದು ಬೆಳಗು ೮.೩೦ಕ್ಕೆ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರವೇಶಿಸಿದ ರಥಯಾತ್ರೆಯನ್ನು ಜಿಲ್ಲೆಯ ಶ್ರೀ ಸತ್ಯಸಾಯಿ ಸೇವಾ ಸಮಿತಿಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ಅವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ರಾಜ್ಯ ಸೇವಾ ಸಂಯೋಜಕ ಪ್ರಭಾಕರ ಬೀರಯ್ಯ, ತರೀಕೆರೆ ಸಂಚಾಲಕ ಸಾಯಿರಾಮಭಟ್, ಟಿ.ಪಿ.ಭೋಜೇಗೌಡ, ವೆಂಕಟೇಶ್ ಮತ್ತಿತರರು ಸಾಕ್ಷಿಕರಿಸಿದರು.

ತರೀಕೆರೆಪಟ್ಟಣ ಪ್ರವೇಶಿದ ರಥ ಬಸವೇಶ್ವರರಸ್ತೆಯ ಬೂದಿಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಎಂ.ಜಿ.ರಸ್ತೆಯ ಶ್ರೀಸತ್ಯಸಾಯಿ ಮಂದಿರದ ಮೂಲಕ ಸಾಗಿ, ನಾಗಪ್ಪ ಕಾಲೋನಿಯ ತಿರುವಿನಲ್ಲಿ ಸಾಗಿತು.

ಮಧ್ಯಾಹ್ನ ಅಜ್ಜಂಪುರಕ್ಕೆ ಆಗಮಿಸಿದ ರಥಯಾತ್ರೆಯು ಗಾಂಧೀವೃತ್ತದ ಶ್ರೀಸತ್ಯಸಾಯಿ ಮಂದಿರದಿಂದ ಕೋಟೆ ಆಂಜನೇಯಸ್ವಾಮಿ ಗುಡಿ ಮುಖಾಂತರ ಚಲಿಸಿ, ಗ್ರಾಮದೇವತೆ ಕಿರಾಳಮ್ಮ ದೇವಸ್ಥಾನ ಹಾದು, ಶ್ರೀರಾಮ ಮಂದಿರದ ಮುಖಾಂತರ ಶ್ರೀಸತ್ಯಸಾಯಿ ಮಂದಿರಕ್ಕೆ ಹಿಂತಿರುಗಿತು. ಸಂಚಾಲಕ ಆರ್.ಮಂಜುನಾಥ್ ನೇತೃತ್ವದಲ್ಲಿ ನಾದಸ್ವರ, ಕೋಲಾಟ ಮತ್ತಿತರ ಸಾಂಸ್ಕೃತಿಕ ಕಲಾ ತಂಡಗಳು ಮೆರಗು ನೀಡಿತು.

ಅಜ್ಜಂಪುರ ತಾಲ್ಲೂಕಿನ ಬಗ್ಗವಳ್ಳಿಯ ಈಶ್ವರದೇವಸ್ಥಾನ ನಂತರ ಕುಡ್ಲೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರಥಯಾತ್ರೆ ದಿವ್ಯದರ್ಶನ ನೀಡಿತು. ಎಲ್ಲೆಡೆ ಮಹಿಳೆಯರು ಕಳಸ, ಪೂರ್ಣಕುಂಭ, ಮಂಗಳವಾದ್ಯ, ಭಜನೆ ಹಾಗೂ ಕಲಾತಂಡಗಳ ಪ್ರದರ್ಶನದೊಂದಿಗೆ ಸಾಗಿದ ರಥಯಾತ್ರೆಯಲ್ಲಿ ಸಾಯಿಭಕ್ತರು ಪಾದ ನಮಸ್ಕಾರ, ಆರತಿ ಮೂಲಕ ಗೌರವ ಸಲ್ಲಿಸುತ್ತಿದ್ದು ಭಕ್ತಿ ಭಾವದಿಂದ ಪ್ರಸಾದ ಸ್ವೀಕರಿಸುತ್ತಿದ್ದರು.

ಇಂದು ಸಂಜೆ ಚಿಕ್ಕಮಗಳೂರು ನಗರ ಪ್ರವೇಶಿಸಿದ ರಥಯಾತ್ರೆಯನ್ನು ಕೆ.ಎಂ.ರಸ್ತೆಯ ಕನಕಭವನದ ಮೂಲಕ ಬರಮಾಡಿಕೊಂಡು ಬೈಕ್ ರ್‍ಯಾಲಿಯೊಂದಿಗೆ ಚಂದ್ರಪ್ರಭ ಬಡಾವಣೆಯ ಟಿ.ಪಿ.ಭೋಜೇಗೌಡರ ಮನೆ ಆವರಣದ ಭಜನಾ ಕೇಂದ್ರ ತಲುಪಿ ಭಜನೆ ಸತ್ಸಂಗ ನಡೆಸಿ ವಾಸ್ತವ್ಯ ಹೂಡಿದೆ.

ಶ್ರೀಸತ್ಯಸಾಯಿ ಅವತಾರ ಶತಮಾನೋತ್ಸವದ ಸ್ಮರಣಾರ್ಥವಾಗಿ ಅವರ ದಿವ್ಯಾವತಾರದ ಸೌರಭವನ್ನು ಪಸರಿಸಲು ಮತ್ತು ದಿವ್ಯ ಪ್ರೇಮದ ಸಂದೇಶವನ್ನು ಸಾರಲು ಶ್ರೀಸತ್ಯಸಾಯಿ ಪ್ರೇಮವಾಹಿನಿ ರಥಯಾತ್ರೆಯನ್ನು ಆಯೋಜಿಸಲಾಗಿದೆ. ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಭಗವಾನರ ದಿವ್ಯಾನುಗ್ರಹವನ್ನು ಪಡೆದು ೨೦೨೫ರ ಏ.೨೫ರಂದು ಐದೂ ದಿವ್ಯ ರಥಗಳು ಹೊರಟ್ಟಿದೆ. ರಾಷ್ಟ್ರಾದ್ಯಂತ ೩.೫ಲಕ್ಷ ಕಿ.ಮೀ. ಸಂಚರಿಸಿ ವಿವಿಧ ರಾಜ್ಯಗಳ ೫೦೦೦ಕ್ಕೂ ಹೆಚ್ಚು ಗ್ರಾಮ-ಪಟ್ಟಣ-ನಗರಗಳಿಗೆ ಭೇಟಿ ನೀಡಲಿದೆ. ಐದೂರಥಗಳು ದೇಶಾದ್ಯಂತ ಸಂಚರಿಸಿ ೨೦೨೬ರ ನವೆಂಬರ್ ೨೩ರಂದು ಮರಳಿ ಪುಟ್ಟಪರ್ತಿಯಲ್ಲಿ ಸಮಾಪನಗೊಳ್ಳಲಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಪಿ.ಶಿವಮೂರ್ತಿ ಮಾಹಿತಿ ನೀಡಿದರು.

A grand welcome for the Prema Vahini chariot at Tarikere

Share

Leave a comment

Leave a Reply

Your email address will not be published. Required fields are marked *

Don't Miss

ಬಾಳೆಹೋನ್ನೂರಿನಲ್ಲಿ ಲಾಠಿ ಚಾರ್ಜ್ ಖಂಡಿಸಿ ಬೃಹತ್‌ ಪ್ರತಿಭಟನೆ

ಬಾಳೆಹೋನ್ನೂರು: ಕಾಡಾನೆ ದಾಳಿಗೆ ಮಹಿಳಾ ಕಾರ್ಮಿಕ ಬಲಿಯಾದ ವಿಚಾರಕ್ಕೆ ಪ್ರತಿಭಟನಾಕಾರರು ರಸ್ತೆಗಿಳಿದು ಭಾರೀ ಪ್ರತಿಭಟನೆ ನಡೆಸಿದಾಗ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಖಂಡಿಸಿ ಮಲೆನಾಡು ನಾಗರೀಕ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಸೊಮವಾರ...

ಕಾಡಾನೆ ದಾಳಿಗೆ ಮಹಿಳಾ ಬಲಿ-ಶೃಂಗೇರಿ ಕ್ಷೇತ್ರ ಬಂದ್‌ ಯಶಸ್ವಿ

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಇತ್ತೀಚಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳಾ ಕಾರ್ಮಿಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಇದಾದ ನಂತರ ಕಾಫಿನಾಡು ಚಿಕ್ಕಮಗಳೂರಲ್ಲಿ  ಪ್ರತಿಭಟನಾಕಾರರು ರಸ್ತೆಗಿಳಿದು ಭಾರೀ ಪ್ರತಿಭಟನೆ (Protest) ನಡೆಸಿದ್ದರು. ಈ...

Related Articles

ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ‘ಪೊಲೀಸ್ ಓಟ’

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಯೋಗದಲ್ಲಿ...

ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನ ರಕ್ಷಣೆ ಮಾಡಬೇಕು

ಬಾಳೆಹೊನ್ನೂರು : “ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಈಗ ನಡೆಯುತ್ತಿರುವ ಯುದ್ಧ ಸರಿಯಲ್ಲ. ವೈಮಾನಿಕ ದಾಳಿಯಲ್ಲಿ...

35 ಲಕ್ಷ ರೂ.ವೆಚ್ಚದ ಗ್ರಾಮಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಚಿಕ್ಕಮಗಳೂರು: ಗ್ರಾಮಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳು ತಮಗೆ ದೊರಕಿದ ಅವಕಾಶವನ್ನು ಜನರ ಕಲ್ಯಾಣಕ್ಕಾಗಿ ಸದ್ಬಳಕೆ...

ಮಾನವಧರ್ಮಕ್ಕೆ ಜಯವಾಗಲಿ- ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

ಬಾಳೆಹೊನ್ನೂರು: “ಧರ್ಮ,‌ ಪೂಜೆ, ಭಕ್ತಿ ಇವು ಪ್ರದರ್ಶನಕ್ಕೆ ಇರುವಂತಹ ಸಂಗತಿಗಳಲ್ಲ. ಇವು ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ...