Home namma chikmagalur chikamagalur ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು
chikamagalurCrime NewsHomeLatest Newsnamma chikmagalur

ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು

Share
Share

ಚಿಕ್ಕಮಗಳೂರು:  ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಸಾವಪ್ಪಿದ್ದಾರೆ.

ಶಾರದಾ ಎಂಬುವರ ಮಗ ಪ್ರದೀಪ್ ಬೈಕಿನಲ್ಲಿ ಮನೆಯಿಂದ ಕಾರ್ಕಳಕ್ಕೆ ಸಂಬಂಧಿಕರ ಮನೆಯಲ್ಲಿ ದೇವತಾ ಕಾರ್ಯಕ್ಕೆ ಹೋಗಲು ವಿದ್ಯಾರಣ್ಯಪುರ ದುರ್ಗಾದೇವಸ್ಥಾನ ಬಂದಿದ್ದು ಅಲ್ಲಿಂದ ಮಹೇಶ್ ಎಂಬುವರ ಜೊತೆಗೆ ಬೈಕಿನಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದಾಗ ತನಿಕೋಡು ಗೇಟಿಂದ ಸುಮಾರು ೪ ಕಿಲೋಮೀಟರ್ ದೂರದ ಸುಂಕದಮಕ್ಕಿ ಗ್ರಾಮದ ಗೋಪಾಲ್ ಅವರ ಮನೆಯ ಮುಂಭಾಗ ಕಾರ್ಕಳ ಕಡೆಯಿಂದ ಯಾವುದೋ ಒಂದು ಲಾರಿ ಬಂದಿದ್ದು, ಆ ಲಾರಿಗೆ ಸೈಡ್ ಕೊಡಲು ಹೋಗಿದ್ದರಿಂದ ಚಾಲಕ ಮಹೇಶ್ ಅವರ ಅಜಾಗರುಕತೆ ಚಾಲನೆಯಿಂದ ಎಡಬದಿಗೆ ಅಯಾತಪ್ಪಿ ಬೈಕಿನ ಸಮೇತವಾಗಿ ಇಬ್ಬರು ಬಿದ್ದ ಪರಣಾಮ ಬೈಕಿನ ಹಿಂಭಾಗ ಕುಳಿತ್ತಿದ್ದ ಪ್ರದೀಪ್‌ನ ತಲೆ ಹಿಂಭಾಗಕ್ಕೆ ರಸ್ತೆಯ ಅಂಚು ತಾಗಿ ಬಲವಾದ ಪೆಟ್ಟುಬಿದ್ದು ರಕ್ತಗಾಯವಾಗಿರುತ್ತದೆ ಬೈಕಿನ ಚಾಲಕ ಮಹೇಶನಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತದೆ.

ಕೂಡಲೇ ಸಾರ್ವಜನಿಕರು ಯಾವುದೋ ವಾಹನದಲ್ಲಿ ಶೃಂಗೇರಿ ಅಭಿನವ ವಿದ್ಯಾತೀರ್ಥ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು ನಂತರ ಚಿಕಿತ್ಸೆ ಫಲಕಾರಿಯಾಗದೆ ಪ್ರದೀಪ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಮೃತರ ತಾಯಿನೀಡಿರುವ ದೂರನ್ನು ಶೃಂಗೇರಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ನಗರದ ಮೊಹಮ್ಮದ್ ಹಿಮರೂಜ್ ಎಂಬುವರು ಮನೆಯಿಂದ ೬೦ ಅಡಿ ರಸ್ತೆಯಲ್ಲಿರುವ ಪಂಚರ್ ಅಂಗಡಿಗೆ ಕೆಲಸಕ್ಕೆಂದು ಹೋಗಿದ್ದು ಲಾರಿಗೆ ಪಂಕ್ಚರ್ ಹಾಕುತ್ತಿದ್ದಾಗ ಹಿಂಬದಿಯಿಂದ ರಿವರ್ಸ್ ಬಂದ ಮಹೀಂದ್ರಾ ಪಿಕ್‌ಅಪ್ ವಾಹನ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ವಾಹನ ಚಲಾಯಿಸಿಕೊಂಡು ಬಂದು ಮೊಹಮ್ಮದ್ ಹಿಮರೂಜ್ ಅವರ ಮೇಲೆ ವಾಹನ ಹತ್ತಿರುತ್ತದೆ.

ನಂತರ ಅಲ್ಲೆ ಸ್ಥಳದಲ್ಲಿದ್ದ ಲಾರಿಯ ಡೈವರ್ ಹಾಗೂ ಸ್ಥಳೀಯ ಸಾರ್ವಜನಿಕರು ಯಾವುದೋ ಆಟೋದಲ್ಲಿ ಮೊಹಮ್ಮದ್ ಹಿಮರೂಜ್ ಅವರನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಮೊಹಮ್ಮದ್ ಹಿಮರೂಜ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಮೃತರ ಪತ್ನಿ ಶಾಬಿನಾನಾಜ್ ನೀಡಿರುವ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

Two killed in separate accidents

Share

Leave a comment

Leave a Reply

Your email address will not be published. Required fields are marked *

Don't Miss

ಕಾಂಗ್ರೆಸ್‌ ಅಭ್ಯರ್ಥಿ ಟಿ.ಡಿ.ರಾಜೇಗೌಡ ಮತ್ತೆ ಶಾಸಕರಾಗಿ ಮುಂದುವರಿಕೆ

ನವದೆಹಲಿ:  ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಿಂದ ಶಾಸಕ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರಿಗೆ ಸುಪ್ರಿಂ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದ್ದು, ಹೈಕೋರ್ಟ್‌ನ ಆದೇಶಕ್ಕೆ ಮಧ್ಯಂತರ ತಡೆ ನೀಡಿ...

ರಾಜೇಗೌಡರಿಗೆ ರಾಜಕೀಯ ಮೈಲೇಜ್ – ಜೀವರಾಜ್ ಗೆ ಕೊನೆ ಮೊಳೆ ?

ಶೃಂಗೇರಿ: ಕಳೆದ ಹತ್ತು ದಿನಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ” ಶಾಸಕತ್ವ” ದ ಬಗ್ಗೆ ಎರಡು ಪಕ್ಷದವರಿಂದ ಪಟಾಕಿ,ಮೆರವಣಿಗೆ, ವಿಜಯೋತ್ಸವ ಸಾಲು ಸಾಲಾಗಿ ನಡೆಸಿ ರಾಜಕೀಯ ಜಿದ್ದಾ ಜಿದ್ದಿಗೆ ಈಗ...

Related Articles

ಅರಣ್ಯದಲ್ಲಿ ಅಪರಿಚಿತ ವೃದ್ಧನ ಶವ ಪತ್ತೆ 

ಕೊಟ್ಟಿಗೆಹಾರ : ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಅರಣ್ಯ ಪ್ರದೇಶದಲ್ಲಿ ಸುಮಾರು 65 ರಿಂದ...

ಭಾರತದ ಹಿಂದು ಸಂಸ್ಕೃತಿಗೆ ಮುಂಡಾಲ ಸಮಾಜದ ಕೊಡುಗೆ ಅಪಾರ

ಚಿಕ್ಕಮಗಳೂರು: ಭಾರತದ ಹಿಂದು ಸಂಸ್ಕೃತಿಗೆ ಮುಂಡಾಲ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಕಚ್ಚೂರು ಕ್ಷೇತ್ರದ ಧರ್ಮದರ್ಶಿ...

ರೈತರ ತೋಟ-ಜಮೀನುಗಳಿಂದ ಮೋಟಾರ್ ಕಳ್ಳತನ

ಚಿಕ್ಕಮಗಳೂರು: ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ರೈತರ ತೋಟ ಹಾಗೂ ಜಮೀನುಗಳಿಂದ ಮೋಟಾರ್,ಸ್ಟಾರ್ಟರ್ ಬಾಕ್ಸ್ ಮತ್ತು...

ಮರಗಸಿ ಕೆಲಸ ಮಾಡುವಾಗ ಬಿದ್ದು ಕಾರ್ಮಿಕ ಸಾವು

ಚಿಕ್ಕಮಗಳೂರು: ಮರಗಸಿ ಕೆಲಸ ಮಾಡುವಾಗ 25 ಅಡಿ ಎತ್ತರದಿಂದ ಬಿದ್ದು ಕಾರ್ಮಿಕನೊಬ್ಬ ಅಂತ್ಯ ಕಂಡಿರುವ ಘಟನೆ...