ಕೊಪ್ಪ: ಅತಿ ವೇಗ ಮತ್ತು ಹೆಲ್ಮಟ್ ಧರಿಸದ ನಿರ್ಲಕ್ಷ್ಯಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಕೊಪ್ಪದ ಕುಂಬ್ರಿಹುಬ್ಬು ಬಳಿ ನಡೆದಿದೆ.
ಮೃತ ಕಿರಣ್ ಎಂ.ಸಿ (30) ಅವರು ತಮ್ಮ ಪತ್ನಿ ಲಕ್ಷ್ಮಿ ಅವರೊಂದಿಗೆ ಸೋಮವಾರ ರಾತ್ರಿ ಬೈಕ್ನಲ್ಲಿ ತೆರಳುತ್ತಿದ್ದಾಗ ಕಾಚಗಲ್ ರಸ್ತೆಯ ಗ್ಯಾಸ್ ಗೋಡೌನ್ ದಾಟಿದ ಬಳಿಕ ದನವೊಂದು ಅಡ್ಡ ಬಂದಿದೆ.
ದನವನ್ನು ತಪ್ಪಿಸಲು ಹೋದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಹೆಲ್ಮಟ್ ಧರಿಸದ ಕಾರಣ ಕಿರಣ್ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು.
ತಕ್ಷಣ ಅವರನ್ನು ಕೊಪ್ಪದ ಸರ್ಕಾರಿ ಆಸ್ಪತ್ರೆಗೆ, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾರೆ.
ಪತ್ನಿ ಲಕ್ಷ್ಮಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Biker dies in road accident
Leave a comment