ತರೀಕೆರೆ: ಇಲ್ಲಿಗೆ ಸಮೀಪದ ನಂದಿ ಹೊಸಹಳ್ಳಿಯ ಕಿತ್ತೂರು ಚೆನ್ನಮ್ಮವಸತಿ ಶಾಲೆಯಲ್ಲಿ ಗೋಧಿ ತಿನ್ನುವ ಹೆಗ್ಗಣಗಳಿವೆ.ಮಕ್ಕಳ ಆಹಾರ ಕದ್ದು ತಿನ್ನುವ ಹೆಗ್ಗಣಗಳು 70 ಕ್ವಿಂಟಾಲ್ ನಷ್ಟು ಗೋಧಿಯನ್ನು ಶಾಲೆಯ ಬಳಿ ಗುಂಡಿ ತೆಗೆಸಿ ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.
ಹರೀಶ್ ಎಂಬುವನು ಈ ಶಾಲೆಯಲ್ಲಿ ಮುಖ್ಯಸ್ಥನಾದ ಸಮಯದಲ್ಲಿ ಕಳ್ಳತನ ಮಾಡಿ ರಾತ್ರೋರಾತ್ರಿ ಗೋಧಿಯನ್ನು ಮಾರಲು ಗುಂಡಿ ತೆಗೆಸಿ ಮುಚ್ಚಿಟ್ಟದ್ದಾನೆ ಎನ್ನಲಾಗುತ್ತಿದೆ.ಈ ವಿಷಯ ಗ್ರಾಮದ ಹಲವರಿಗೆ ತಿಳಿದಿದ್ದು ಸಂಭಂಧ ಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ಬಂದ ಅಧಿಕಾರಿಗಳು ಗುಂಡಿ ತೆಗೆಸಿದ್ದ ಜಾಗದ ಬಳಿ ಆಗೆಸಿ ನೋಡಿದಾಗ ಗೋಧಿ ಮುಚ್ಚಿಟ್ಟಿರುವುದು ಪತ್ತೆಯಾಗಿದೆ.ಮಕ್ಕಳಿಗೆ ಚಾಪತಿ ಮಾಡಿಕೊಡಬೇಕಾದ ಗೋಧಿಯನ್ನು ಮಾರಾಟ ಮಾಡಲು ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಗುಂಡಿ ಅಗೆಯಲು ಸ್ಥಳೀಯರನ್ನು ಬಳಸಿಕೊಂಡು ಈ ರೀತಿಯ ಕೃತ್ಯ ನಡೆಸಿರುವ ಹರೀಶ್ ಮೇಲೆ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಸ್ಥಳೀಯರ ಜೊತೆಗೆ ಪೋಷಕರು ಒತ್ತಾಯ ಮಾಡಿದ್ದಾರೆ.
ಹರೀಶ್ ಒಬ್ಬನೇ ಈ ಕೃತ್ಯ ನಡೆಸಿಲ್ಲ ಸಿಬ್ಬಂದಿ ಕೈ ಜೋಡಿಸಿ ದ್ದಾರೆ ಎನ್ನಲಾಗಿದೆ. ಮಕ್ಕಳ ಆಹಾರ ಕದಿಯುವ ಖದೀಮರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯ ಮಾಡಿದ್ದಾರೆ.
Wheat fields of Kitturchennamma School
Leave a comment