Home namma chikmagalur Banagalore ಕಿಸಿಂಗ್, ಕಿಸಿಂಗ್ ರಾಮಚಂದ್ರ -ಸ್ಮಗ್ಲಿಂಗ್, ಸ್ಮಗ್ಲಿಂಗ್ ರನ್ಯಾ ರಾವ್‌
BanagaloreState News

ಕಿಸಿಂಗ್, ಕಿಸಿಂಗ್ ರಾಮಚಂದ್ರ -ಸ್ಮಗ್ಲಿಂಗ್, ಸ್ಮಗ್ಲಿಂಗ್ ರನ್ಯಾ ರಾವ್‌

Share
Share

ಅಪ್ಪ ರಾಮಚಂದ್ರ ರಾವ್ ಗೆ ಚಿನ್ನವೀಡು ಕಾಟ,ಮಲ ಮಗಳು ರನ್ಯಾ ರಾವ್ ಗೆ ಚಿನ್ನ ಕಳವಿನ ವ್ಯಾಮೋಹ .ಅಪ್ಪ ಕಡ್ಡಾಯ ರಜೆಯ ಮೇಲೆ ಮನೆ ಸೇರಿ ಗೃಹ ಮಂತ್ರಿ ಪರಮೇಶ್ವರ್ ಕೃಪೆಗಾಗಿ ದಾರಿ ಕಾಯುತ್ತಿದ್ದಾರೆ. ರನ್ಯಾರಾವ್ ಅಲಿಯಾಸ್ ಹರ್ಷವರ್ಧಿನಿ ಚಿನ್ನ ಕದ್ದು ಕಳೆದ ಐದಾರು ತಿಂಗಳಿಂದ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ವರಿಷ್ಠಧಿಕಾರಿಯಾಗಿದ್ದ ರಾಮಚಂದ್ರ ರಾವ್ ಗೆ ಹಗ್ಗ ಕಡಿಯುವ ಚಾಳಿ ಇತ್ತು ಈ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಬಂದಿತ್ತು.ಇದೇ ಚಾಳಿ ಬೆಳೆಸಿ ಕೊಂಡು ರೋಹಿಣಿ ಎಂಬ ಮಹಿಳೆಯ ಜೊತೆಗೆ ಹಲವಾರು ಹೆಸರುಗಳು ಇವೆ.ಮದುವೆಯಾಗಿದ್ದ ರೋಹಿಣಿಗೆ ವಿಚ್ಛೇದನ ಕೊಡಿಸಿ ಮಡಗಿ ಕೊಂಡು ಕೋಟ್ಯಂತರ ಆಸ್ತಿ ಮಾಡಿಕೊಟ್ಟಿರುವುದು ಗುಟ್ಟೇನಲ್ಲಾ .

ಇಷ್ಟಾದರೂ ನಿವೃತ್ತಿ ಇನ್ನೂ ಕೆಲ ದಿನಗಳಿರುವಾಗ ಕಛೇರಿಯಲ್ಲಿ ಕಿಸಿಂಗ್,ಕಿಸಿಂಗ್ ಎಂದು ದೊಡ್ಡ ಸುದ್ದಿಯಾದ ನಂತರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ.

ಮಲ ತಂದೆ ಮತ್ತು ತಾಯಿ ಯ ವ್ಯಾಮೋಹ ರನ್ಯಾ ರಾವ್‌ ಮೂರ್ನಾಲ್ಕು ಚಲನಚಿತ್ರದಲ್ಲಿ ನಟಿಸಿ ಚಿನ್ನ ಕಳವು ದಂಧೆಯಲ್ಲಿ ಪಳಗುತ್ತಿರುವಾಗ ಡಿ.ಆರ್.ಐ. ನವರು ವಿಮಾನ ನಿಲ್ದಾಣದಲ್ಲಿ ಬಂಧಿಸಿ ಜೈಲಿನ ಹಾದಿ ತೋರಿಸಿದ್ದಾರೆ. ಈಗ ಡಿ.ಆರ್.ಐ ಮತ್ತು ಸಿ.ಬಿ.ಐ ನವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ರನ್ಯಾ ರಾವ್ ಒಂದು ವರ್ಷದಲ್ಲಿ 127 ಕೆಜಿಯಷ್ಟು ಚಿನ್ನ ಸಾಗಣೆ ಮಾಡಿರುವುದನ್ನು ಖಚಿತ ಪಡಿಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಇದರ ಬೆಲೆ 102 ಕೋಟಿಯಷ್ಟು ಎಂದು ಹೇಳಲಾಗಿದೆ.
ವಿದೇಶದಿಂದ ಅದರಲ್ಲೂ ದುಬೈನಿಂದ 14 ಕೆಜಿಯಷ್ಟು ಚಿನ್ನ ತರುವಾಗ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಆಗ ರನ್ಯಾ ರಾವ್ ಮನೆಯ ಮೇಲೆ ದಾಳಿ ನಡೆಸಿದಾಗ 2.06 ಕೋಟಿಯ ಚಿನ್ನ ಮತ್ತು 2.67 ಕೋಟಿ ನಗದು ಪತ್ತೆಯಾಗಿತ್ತು.ಇದರ ಜೊತೆಗೆ 34 ಕೋಟಿಯಷ್ಟು ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

Kissing- kissing Ramachandra -smuggling- smuggling Ranya Rao

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಯಗಟಿ ಸಮೀಪದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಬಲಿ

ಚಿಕ್ಕಮಗಳೂರು: ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು...

ಮೌಲ್ಯ – ಸೇವೆ ಮರೆತು ಹಣ ದೂಚಲು ಪ್ರಜಾಪ್ರಭುತ್ವದ ಕಗ್ಗೂಲೆ…

ಅದಲು-ಬದಲು ಯಾವ ಪಕ್ಷಗಳಿಗೆ ಸಿದ್ದಾಂತ, ನೈತಿಕತೆ ಇದೆ ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಬೆರಿಕೆಯ ತುರಿಕೆಯಲ್ಲಿವೆ.ಅದರಲ್ಲೂ...

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...