ಶೃಂಗೇರಿ: ಹಾಡಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ದೂರುದಾರರಾದ ರವಿರಾಜ್ ಅವರು ಈ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿವರಾತ್ರಿ ಹಬ್ಬದ ಪ್ರಯುಕ್ತ ದಂಪತಿಗಳು ತಮ್ಮ ಒಡವೆಗಳ ಸಮೇತ ನೆಂಟರ ಮನೆಗೆ ಹೋಗಿದ್ದರು.
ಮರುದಿನ ಅಂದರೆ ಫೆಬ್ರವರಿ 18ರಂದು ಬೆಳಿಗ್ಗೆ 10 ಗಂಟೆಗೆ ಮನೆಗೆ ಹಿಂತಿರುಗಿದ ರೇಖಾ ಅವರು ಒಡವೆಗಳಿದ್ದ ಬ್ಯಾಗನ್ನು ಮನೆಯ ಕೋಣೆಯಲ್ಲಿಟ್ಟು, ನಂತರ ಮನೆಯ ಹಿಂಭಾಗದ ಕೆಲಸದಲ್ಲಿ ಮಗ್ನರಾಗಿದ್ದರು.
ಈ ಸಮಯದಲ್ಲಿ ರವಿರಾಜ್ ಅವರು ಕೆಲಸಕ್ಕೆಂದು ಶೃಂಗೇರಿಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ರೇಖಾ ಅವರು ಕೋಣೆಗೆ ಬಂದು ನೋಡಿದಾಗ ಇಟ್ಟಿದ್ದ ಒಡವೆಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.
ತಕ್ಷಣವೇ ಪತಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮನೆಯ ಬಾಗಿಲು ಮುರಿದಿರಲಿಲ್ಲ. ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಮಯವನ್ನು ಬಳಸಿಕೊಂಡ ಕಳ್ಳರು, ಒಳನುಗ್ಗಿ ಒಟ್ಟು 90 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಕಳುವಾದ ವಸ್ತುಗಳಲ್ಲಿ 16 ಗ್ರಾಂನ ನೆಕ್ಸಸ್, 25 ಗ್ರಾಂ ಹಾಗೂ 10 ಗ್ರಾಂನ ಎರಡು ಚೈನ್ಗಳು, 16 ಗ್ರಾಂನ ಬಳೆ, 15 ಗ್ರಾಂನ ಓಲೆ ಮತ್ತು 8 ಗ್ರಾಂ ತೂಕದ ನಾಲ್ಕು ಉಂಗುರಗಳು ಸೇರಿವೆ.
ಕಳುವಾದ ಆಭರಣಗಳ ಅಂದಾಜು ಮೊತ್ತ 10 ಲಕ್ಷ ರೂಪಾಯಿಗಳಾಗಿದ್ದು, ರವಿರಾಜ್ ನೀಡಿದ ದೂರಿನನ್ವಯ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Gold ornaments worth Rs 10 lakh stolen
Leave a comment