Home namma chikmagalur chikamagalur 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು
chikamagalurHomeLatest Newsnamma chikmagalur

10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

Share
Share

ಶೃಂಗೇರಿ: ಹಾಡಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ದೂರುದಾರರಾದ ರವಿರಾಜ್ ಅವರು ಈ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿವರಾತ್ರಿ ಹಬ್ಬದ ಪ್ರಯುಕ್ತ ದಂಪತಿಗಳು ತಮ್ಮ ಒಡವೆಗಳ ಸಮೇತ ನೆಂಟರ ಮನೆಗೆ ಹೋಗಿದ್ದರು.

ಮರುದಿನ ಅಂದರೆ ಫೆಬ್ರವರಿ 18ರಂದು ಬೆಳಿಗ್ಗೆ 10 ಗಂಟೆಗೆ ಮನೆಗೆ ಹಿಂತಿರುಗಿದ ರೇಖಾ ಅವರು ಒಡವೆಗಳಿದ್ದ ಬ್ಯಾಗನ್ನು ಮನೆಯ ಕೋಣೆಯಲ್ಲಿಟ್ಟು, ನಂತರ ಮನೆಯ ಹಿಂಭಾಗದ ಕೆಲಸದಲ್ಲಿ ಮಗ್ನರಾಗಿದ್ದರು.

ಈ ಸಮಯದಲ್ಲಿ ರವಿರಾಜ್ ಅವರು ಕೆಲಸಕ್ಕೆಂದು ಶೃಂಗೇರಿಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ರೇಖಾ ಅವರು ಕೋಣೆಗೆ ಬಂದು ನೋಡಿದಾಗ ಇಟ್ಟಿದ್ದ ಒಡವೆಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.

ತಕ್ಷಣವೇ ಪತಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮನೆಯ ಬಾಗಿಲು ಮುರಿದಿರಲಿಲ್ಲ. ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಮಯವನ್ನು ಬಳಸಿಕೊಂಡ ಕಳ್ಳರು, ಒಳನುಗ್ಗಿ ಒಟ್ಟು 90 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ.

ಕಳುವಾದ ವಸ್ತುಗಳಲ್ಲಿ 16 ಗ್ರಾಂನ ನೆಕ್ಸಸ್, 25 ಗ್ರಾಂ ಹಾಗೂ 10 ಗ್ರಾಂನ ಎರಡು ಚೈನ್‌ಗಳು, 16 ಗ್ರಾಂನ ಬಳೆ, 15 ಗ್ರಾಂನ ಓಲೆ ಮತ್ತು 8 ಗ್ರಾಂ ತೂಕದ ನಾಲ್ಕು ಉಂಗುರಗಳು ಸೇರಿವೆ.

ಕಳುವಾದ ಆಭರಣಗಳ ಅಂದಾಜು ಮೊತ್ತ 10 ಲಕ್ಷ ರೂಪಾಯಿಗಳಾಗಿದ್ದು, ರವಿರಾಜ್ ನೀಡಿದ ದೂರಿನನ್ವಯ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Gold ornaments worth Rs 10 lakh stolen

Share

Leave a comment

Leave a Reply

Your email address will not be published. Required fields are marked *

Don't Miss

ನಗರಸಭೆಯಿಂದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್ ಗೆ ಬೀಗ

ನಗರಸಭೆ ನಿಗದಿಪಡಿಸಿದ ಗಾಡಿಗೆ ಕಸ ನೀಡದೆ ಚರಂಡಿಗೆ ಹಾಕುತ್ತಿದ್ದ ನಗರದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್ ಮಳಿಗೆ ಬಾಗಿಲಿಗೆ ನಗರಸಭೆ ಅಧಿಕಾರಿ, ಸಿಬ್ಬಂದಿ ಕಸ ತಂದು ಸುರಿದು ದಂಡ ಹಾಕಿದ್ದಾರೆ. ಅಲ್ಲದೆ,...

ಮೂರು ಲಕ್ಷ ರೂ. ಮೌಲ್ಯದ ಗಾಂಜಾ ವಶ

ಚಿಕ್ಕಮಗಳೂರು, ಎನ್ ಡಿಪಿಎಸ್ ಪ್ರಕರಣದಲ್ಲಿ ಆರೋಪಿತನೋರ್ವನನ್ನು ಬಂಧಿಸಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆತನಿಂದ ಮೂರು ಲಕ್ಷ ರೂ. ಮೌಲ್ಯದ 5ಕೆಜಿ 850 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಎನ್ ಡಿಪಿಎಸ್...

Related Articles

ಎಂ.ಎಲ್.ಸಿ ಪ್ರಾಣೇಶ್ ಗೆ ಪ್ರಾಣ ಸಂಕಟ.! – ಗಾಯತ್ರಿ ಶಾಂತೇಗೌಡಗೆ ಅಧಿಕಾರ ಗ್ಯಾರಂಟಿನಾ ?

ಚಿಕ್ಕಮಗಳೂರು: ಚಿಕ್ಕ ಮಗಳೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್...

ಪರಿಶಿಷ್ಠ ಪಂಗಡ ಒಳ ಮೀಸಲಾತಿ ಆಯೋಗ ರಚನೆ ಆಗ್ರಹ

ಚಿಕ್ಕಮಗಳೂರು: ರಾಜ್ಯದ ಪರಿಶಿಷ್ಠ ಜಾತಿ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಿದಂತೆ ಪರಿಶಿಷ್ಠ ಪಂಗಡದ ಸಮುದಾಯಕ್ಕೂ ಒಳ ಮೀಸಲಾತಿ ಕಲ್ಪಿಸಲು...

ವಿಮಾ ಕಂಪನಿಗೆ ಪಾಲಿಸಿದಾರರ ಕಂತು ಸ್ವೀಕೃತಿಗೆ ಆದೇಶ

ಚಿಕ್ಕಮಗಳೂರು: ವಿಮಾ ಕಂತು ಪಾವತಿಯನ್ನು ಸ್ವೀಕರಿಸದೆ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಇನ್ಶೂರೆನ್ಸ್ ಕಂಪನಿಯ ವಿರುದ್ಧ...

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು...