Home namma chikmagalur chikamagalur ನಿವೃತ್ತ ಮಹಿಳಾ ನೌಕರಿಗೆ 1,50,000 ರೂ ವಂಚನೆ
chikamagalurCrime NewsHomeLatest Newsnamma chikmagalur

ನಿವೃತ್ತ ಮಹಿಳಾ ನೌಕರಿಗೆ 1,50,000 ರೂ ವಂಚನೆ

Share
Share

ಚಿಕ್ಕಮಗಳೂರು: ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಮಹಿಳಾ ನೌಕರರೊಬ್ಬರಿಗೆ ಫೇಸ್ ಬುಕ್ ನಲ್ಲಿ BOB PENSION CARD ಎಂಬ ಜಾಹೀರಾತು ಬಂದಿದ್ದು ಅದನ್ನು ಕ್ಲಿಕ್ಕಿಸಿದ್ದಾರೆ.

ಅದರಲ್ಲಿ ಕೇಳಿರುವಂತೆ ಪೋನ್ ನಂಬರ್ ಮತ್ತು ಕೆಲಸವನ್ನು ನಮೂದಿಸಿದ್ದಾರೆ .ನಂತರ ಅನುಮಾನ ಬಂದು ಸದರಿ ಅಪ್ಲೀಕೇಷನ್ ನಿಂದ ವಾಪಸ್ ಬಂದಿರುತ್ತಾರೆ.

ಮಧ್ಯಾಹ್ನದ ವೇಳೆಗೆ ಮೋಬೈಲ್ ನಂಬರ್ ಗೆ ಪೋನ್ ಬಂದಿದ್ದು ತನ್ನ ಹೆಸರು ಶ್ಯಾಮ್ ಎಂದೂ ಬ್ಯಾಂಕ್ ಆಫ್ ಬರೋಡಾದ ಪೆನ್ ಷನ್ ಕಾರ್ಡ್ ವಿಭಾಗದಿಂದ ಮಾತನಾಡುತ್ತಿದ್ದೇನೆ ಎಂದು ನಂಬಿಸಿದ್ದಾರೆ.

ಪೆನ್ ಷನ್ ಕಾರ್ಡ್ ಮಾಡಿಕೊಡುತ್ತೇನೆ ಎಂದು ಹೇಳಿ ವಾಟ್ಸ್ ಆಫ್ ಅನ್ನು ಸ್ಕ್ರೀನ್ ಶೇರಿಂಗ್ ಮಾಡಿಸಿಕೊಂಡಿದ್ದಾನೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಎಫ್ ಡಿ ಖಾತೆಯಲ್ಲಿ 5,00,000/- ರೂಗಳನ್ನು ಒಂದು ವಾರದ ಹಿಂದೆ ಡೆಪಾಸಿಟ್ ಮಾಡಿದ್ದು , ಈ ಎಫ್ ಡಿ ಖಾತೆಯಿಂದ ತನ್ನ ಬಾಬ್ತು ಬ್ಯಾಂಕ್ ಆಫ್ ಬರೋಡಾದ ಎಸ್ ಬಿ ಖಾತೆಗೆ 4,75,000/- ರೂ ಓವರ್ ಡ್ರಾಪ್ಟ್ ಆನ್ ಎಫ್ ಡಿ ಆಗಿರುವ ಬಗ್ಗೆ ಪೋನ್ ಗೆ ಮೆಸೇಜ್ ಬಂದಿದೆ.

ನಂತರ ಖಾತೆಯಿಂದ 1,50,000/- ರೂ ಡ್ರಾ ಆಗಿದ್ದು, ತಕ್ಷಣ ನನಗೆ ಇದು ಪ್ರಾಡ್ ಪೋನ್ ಕಾಲ್ ತಿಳಿದು ಪೋನ್ ಸಂಪರ್ಕ ಕಡಿತಗೊಳಿಸಿ ಬ್ಯಾಂಕ್ ಗೆ ಪೋನ್ ಮಾಡಿ ತನ್ನ ಅಕೌಂಟ್ ಅನ್ನು ಬ್ಲಾಕ್ ಮಾಡಿಸಿದ್ದಾರೆ.

ಪೆನ್ ಷನ್ ಕಾರ್ಡ್ ಮಾಡಿಸಿಕೊಡುವುದಾಗಿ ನಂಬಿಸಿ ವಾಟ್ಸ್ ಆಫ್ ಸ್ಕ್ರೀನ್ ಶೇರಿಂಗ್ ಮಾಡಿಸಿಕೊಂಡು ತನ್ನ ಎಫ್ ಡಿ ಖಾತೆಯಿಂದ 4,75,000/- ರೂ ಲೋನ್ ಮಾಡಿ ಅದರಲ್ಲಿ 1,50,000/- ರೂಗಳನ್ನು ಡ್ರಾ ಮಾಡಿಕೊಂಡು ಮೋಸ ಮಾಡಿ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Retired female employee cheated of Rs 150000

Share

Leave a comment

Leave a Reply

Your email address will not be published. Required fields are marked *

Don't Miss

ಪ್ರತ್ಯೇಕ ಪ್ರಕರಣಗಳಲ್ಲಿ 5.20 ಲಕ್ಷ ರೂ. ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಆಭರಣ ಸೇರಿದಂತೆ ೫.೨೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಅಪಹರಿಸಿದ್ದಾರೆ. ಕಡೂರು ಠಾಣಾ ವ್ಯಾಪ್ತಿಯ ವೆಂಕಟೇಶ್ವರ ನಗರದ...

ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಸಿಬ್ಬಂದಿಗಳ ಮನವಿ

ಚಿಕ್ಕಮಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯ ಮಕ್ಕಳ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಕ್ಕಳ ರಕ್ಷಣಾ ಸಿಬ್ಬಂದಿಗಳು ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮಕ್ಕಳ ರಕ್ಷಣಾ ಕಾರ್ಯಕ್ರಮಗಳು ಖಾಯಂ...

Related Articles

ಕಲ್ಲು ತೂರಾಟ ಪ್ರಕರಣದ ಎಸ್.ಐ.ಟಿ ತನಿಖೆಗೆ ಆಗ್ರಹ

ಚಿಕ್ಕಮಗಳೂರು: ಕಾಫಿನಾಡಿನ ವಿಜಯಪುರ ಬಡಾವಣೆಯ ಹಿಂದೂ ಮನೆಯೊಂದರ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ...

ನರಹಂತಕ ಆನೆ ಸೆರೆಗೆ ಸಾಕಾನೆಗಳ ತಂಡ ಆಗಮನ

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಕಾರ್ಮಿಕ ಬಲಿ; ಸೆರೆಗೆ ಸಾಕಾನೆಗಳ ತಂಡ ಆಗಮನ...

ನೈತಿಕ ಪೊಲೀಸ್ ಗಿರಿ ಪ್ರಕರಣ – ಗಂಭೀರವಾಗಿ ಪರಿಗಣನೆ

ಚಿಕ್ಕಮಗಳೂರು: ಕಾಫಿನಾಡಿನ ಸಂತೇ ಮೈದಾನದ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಜಿಲ್ಲಾ ಪೊಲೀಸ್...

ಕಲ್ಲು ಎಸೆತ ಪ್ರಕರಣ: ಇಬ್ಬರು ಹಿಂದೂ ಯುವಕರ ಬಂಧನ

ಚಿಕ್ಕಮಗಳೂರು: ಕಾಫಿನಾಡಿನ ವಿಜಯಪುರ ಬಡಾವಣೆಯಲ್ಲಿ ನಡೆದಿದ್ದ ಹಿಂದೂ ಮನೆಯೊಂದರ ಮೇಲೆ ನಡೆದಿದ್ದ ಕಲ್ಲು ಎಸೆತ ಪ್ರಕರಣಕ್ಕೆ...