Home namma chikmagalur chikamagalur ಬಾಳೆಹೊನ್ನೂರಿನ ವ್ಯಕ್ತಿಗೆ ಆನ್‌ಲೈನ್ ಫಿಶಿಂಗ್ ಫ್ರಾಡ್
chikamagalurHomeLatest Newsnamma chikmagalur

ಬಾಳೆಹೊನ್ನೂರಿನ ವ್ಯಕ್ತಿಗೆ ಆನ್‌ಲೈನ್ ಫಿಶಿಂಗ್ ಫ್ರಾಡ್

Share
Share

ಚಿಕ್ಕಮಗಳೂರು: ಕಸ್ಟಮರ್‌ಕೇರ್‌ನಿಂದ ದೂರವಾಣಿ ಕರೆಮಾಡಿರುವ ವ್ಯಕ್ತಿ ಬಾಳೆಹೊನ್ನೂರು ವ್ಯಕ್ತಿಯೊಬ್ಬರಿಗೆ ೧,೯೭,೮೪೧ ರೂ.ಗಳನ್ನು ವಂಚಿಸಿದ್ದಾರೆ. ಬಾಳೆಹೊನ್ನೂರು ಠಾಣೆ ವ್ಯಾಪ್ತಿಯ ಎಂ. ಅಕ್ಷಯ್ ಎಂಬುವರು ವ್ಯವಹಾರಕ್ಕೆಂದು ಬೆಂಗಳೂರು ಹಲಸೂರಿನ ಬ್ಯಾಂಕೊದರ ಶಾಖೆಯಲ್ಲಿ ಖಾತೆ ತೆರೆದಿದ್ದಾರೆ.

ಕ್ರೆಡಿಟ್‌ಕಾರ್ಡ್‌ಗೆ ಹೆಚ್ಚಿನ ವ್ಯಹಹಾರದ ಪರಿಮಿತಿ ಪಡೆದುಕೊಳ್ಳಲು ಬಳಸುತ್ತಿದ್ದ ಮೊಬೈಲ್ ಬ್ಯಾಂಕಿಂಗ್ ಆಪ್‌ಗೆ ಹೋಗಿ ಪರಿಶೀಲಿಸಿದಾಗ ಆಪ್ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ.ನನ್ನ ಮೊಬೈಲ್‌ಗೆ ಸಂಜೀವ ಎಂಬಾತ ಆಕ್ಸಿಸ್ ಬ್ಯಾಂಕ್ ಕಸ್ಟೂಮರ್ ಕೇರ್ ನಿಂದ ಪೋನ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಕ್ರೆಡಿಟ್ ಕಾರ್ಡನ ಕೊನೆಯ ೪ ನೇ ಸಂಖ್ಯೆ ಕೇಳಿದ್ದು ನಾನು ಸಂಖ್ಯೆ ಸರಿಯಿದ್ದುದರಿಂದ ಹೆಚ್ಚಿನ ಪರಿಮಿತಿ ಪಡೆಯಲು ಮೊಬೈಲ್ ಬ್ಯಾಂಕಿಂಗ್ ಆಪ್‌ಗೆ ಹೋಗಲು ಹೇಳಿದ್ದು, ಆಗ ಕೂಡ ಆಪ್ ಒಪನ್ ಆಗದ ಕಾರಣ ಲಿಂಕ್ ಗೆ ಹೋಗಲು ತಿಳಿಸಿದಾಗ ನಾನು ಗೂಗಲ್ ಕ್ರೋಮ್ ನಲ್ಲಿ ಲಿಂಕ್ ನ್ನು ಓಪನ್ ಮಾಡಿ ನೋಡಿದ್ದು ಆಕ್ಸಿಸ್ ಬ್ಯಾಂಕ್ ನ ವೆಬ್ ಅಪ್ಲಿಕೇಷನ್ ರೀತಿಯೇ ಇದ್ದು ಅದರೊಳಗೆ ಹೋಗಲು ಲಾಗಿನ್ ಆಪ್ಷನ್ ಬಂದಿದ್ದು ಲಾಗಿನ್ ಆಗಲು ನನ್ನ ಮೊಬೈಲ್ ಸಂಖ್ಯೆ ಮತ್ತು ಕ್ರೇಡಿಟ್ ಕಾರ್ಡ ಸಂಖ್ಯೆ ನಮೂದಿಸಿರುತ್ತೇನೆ.

ನಂತರ ಇನ್‌ಕರೆಕ್ಷನ್ ಸಪೋರ್ಟ್ ಎಂದು ಮೆಸೇಜ್ ಬಂದಿದ್ದು ನಂತರ ಕೇವಲ ೧ ನಿಮಿಷದೊಳಗೆ ನನ್ನ ಕ್ರೆಡಿಟ್ ಕಾರ್ಡ ನಿಂದ ೧,೯೭,೮೪೧ ರೂ ಹಣವು ರಿಲೆಯನ್ಸ ರಿಟೈಲ್‌ಗೆ ಕಟ್ ಆಗಿದ್ದು ಕೂಡಲೇ ಪೋನ್ ಲೈನಿನಲ್ಲಿದ್ದ ವ್ಯಕ್ತಿಯು ಪೋನ್ ಕಾಲ್ ಕಟ್ ಮಾಡಿರುತ್ತಾನೆ.

ನಂತರ ನಾನು ಮೋಸ ಹೋಗಿರುವುದು ತಿಳಿಯಿತು. ನನ್ನಿಂದ ಲಿಂಕ್ ಓಪನ್ ಮಾಡಿಸಿ ಮೋಸದಿಂದ ಹಣವನ್ನು ಪಡೆದಿರುವ ಸಂಜೀವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಹಣವನ್ನು ವಾಪಾಸ್ ಕೊಡಿಸಬೇಕಾಗಿ ಕೋರಿ ಅಕ್ಷಯ್ ಬಾಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದಾರೆ.

Online phishing fraud for a person from Balehonnur

Share

Leave a comment

Leave a Reply

Your email address will not be published. Required fields are marked *

Don't Miss

ಹೇಮಾವತಿ ನದಿಯಲ್ಲಿ ಬಳಿ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಮೂಡಿಗೆರೆ: ಹೇಮಾವತಿ ನದಿಯಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೋಣಿಗಂಡಿ ಬಳಿ ನಡೆದಿದೆ. ನದಿ ತೀರದಲ್ಲಿ ತುಂಡಾಗಿ ಬಿದ್ದಿದ್ದ ಸಜೀವ ವಿದ್ಯುತ್...

ಜಿಲ್ಲೆಯಲ್ಲಿ “ಅಡ್ಜಸ್ಟ ಮೆಂಟ್ ಜನಪ್ರತಿನಿಧಿಗಳು. ಜಿಲ್ಲೆ ದೋಚುತ್ತಿರುವ ಖದೀಮರು ?

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನಿತ್ಯ ದರೋಡೆ ನಡಯುತ್ತಿವೆ.ಜೊತೆಗೆ ಡ್ರಗ್ಸ್ ಮಾಫಿಯಾ ಕೂಡ ಎಂಟ್ರಿ ಕೊಟ್ಟಿದೆ. ಜಿಲ್ಲೆಯ ಸಮಸ್ಯೆಗಳ ವಿಷಯಗಳ ಮೇಲೆ ನಿಗಾ ವಹಿಸದೆ ಇರುವುದರಿಂದ ರಾಜ್ಯದ ವಿವಿಧ ಭಾಗದಿಂದ ಮತ್ತು...

Related Articles

ನಗರಸಭೆಯಿಂದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್ ಗೆ ಬೀಗ

ನಗರಸಭೆ ನಿಗದಿಪಡಿಸಿದ ಗಾಡಿಗೆ ಕಸ ನೀಡದೆ ಚರಂಡಿಗೆ ಹಾಕುತ್ತಿದ್ದ ನಗರದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್...

ಮೂರು ಲಕ್ಷ ರೂ. ಮೌಲ್ಯದ ಗಾಂಜಾ ವಶ

ಚಿಕ್ಕಮಗಳೂರು, ಎನ್ ಡಿಪಿಎಸ್ ಪ್ರಕರಣದಲ್ಲಿ ಆರೋಪಿತನೋರ್ವನನ್ನು ಬಂಧಿಸಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆತನಿಂದ ಮೂರು...

ಕಬಡ್ಡಿ-ಖೋಖೋ ಗ್ರಾಮೀಣ ಸೊಗಡಿನ ಕ್ರೀಡೆಗಳು

ಚಿಕ್ಕಮಗಳೂರು: ಕಬಡ್ಡಿ, ಖೋಖೋ ಹಾಗೂ ವಾಲಿಬಾಲ್ ಗ್ರಾಮೀಣ ಸೊಗಡಿನ ಅ ಮೂಲ್ಯವಾದ ಕ್ರೀಡೆಗಳು. ಇವುಗಳನ್ನು ಮುಂದಿನ...

ಗುತ್ತಿಗೆದಾರರ ಬಾಕಿ ಹಣ ಮರುಪಾವತಿಗಾಗಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ೩೭ ಸಾವಿರ ಕೋಟಿರೂ. ಹಣ ಮರುಪಾವತಿಗೆ ಒತ್ತಾಯಿಸಿ ಮಾರ್ಚ್ ೦೫...