Home namma chikmagalur chikamagalur ಬಾಳೆಹೊನ್ನೂರಿನ ವ್ಯಕ್ತಿಗೆ ಆನ್‌ಲೈನ್ ಫಿಶಿಂಗ್ ಫ್ರಾಡ್
chikamagalurHomeLatest Newsnamma chikmagalur

ಬಾಳೆಹೊನ್ನೂರಿನ ವ್ಯಕ್ತಿಗೆ ಆನ್‌ಲೈನ್ ಫಿಶಿಂಗ್ ಫ್ರಾಡ್

Share
Share

ಚಿಕ್ಕಮಗಳೂರು: ಕಸ್ಟಮರ್‌ಕೇರ್‌ನಿಂದ ದೂರವಾಣಿ ಕರೆಮಾಡಿರುವ ವ್ಯಕ್ತಿ ಬಾಳೆಹೊನ್ನೂರು ವ್ಯಕ್ತಿಯೊಬ್ಬರಿಗೆ ೧,೯೭,೮೪೧ ರೂ.ಗಳನ್ನು ವಂಚಿಸಿದ್ದಾರೆ. ಬಾಳೆಹೊನ್ನೂರು ಠಾಣೆ ವ್ಯಾಪ್ತಿಯ ಎಂ. ಅಕ್ಷಯ್ ಎಂಬುವರು ವ್ಯವಹಾರಕ್ಕೆಂದು ಬೆಂಗಳೂರು ಹಲಸೂರಿನ ಬ್ಯಾಂಕೊದರ ಶಾಖೆಯಲ್ಲಿ ಖಾತೆ ತೆರೆದಿದ್ದಾರೆ.

ಕ್ರೆಡಿಟ್‌ಕಾರ್ಡ್‌ಗೆ ಹೆಚ್ಚಿನ ವ್ಯಹಹಾರದ ಪರಿಮಿತಿ ಪಡೆದುಕೊಳ್ಳಲು ಬಳಸುತ್ತಿದ್ದ ಮೊಬೈಲ್ ಬ್ಯಾಂಕಿಂಗ್ ಆಪ್‌ಗೆ ಹೋಗಿ ಪರಿಶೀಲಿಸಿದಾಗ ಆಪ್ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ.ನನ್ನ ಮೊಬೈಲ್‌ಗೆ ಸಂಜೀವ ಎಂಬಾತ ಆಕ್ಸಿಸ್ ಬ್ಯಾಂಕ್ ಕಸ್ಟೂಮರ್ ಕೇರ್ ನಿಂದ ಪೋನ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಕ್ರೆಡಿಟ್ ಕಾರ್ಡನ ಕೊನೆಯ ೪ ನೇ ಸಂಖ್ಯೆ ಕೇಳಿದ್ದು ನಾನು ಸಂಖ್ಯೆ ಸರಿಯಿದ್ದುದರಿಂದ ಹೆಚ್ಚಿನ ಪರಿಮಿತಿ ಪಡೆಯಲು ಮೊಬೈಲ್ ಬ್ಯಾಂಕಿಂಗ್ ಆಪ್‌ಗೆ ಹೋಗಲು ಹೇಳಿದ್ದು, ಆಗ ಕೂಡ ಆಪ್ ಒಪನ್ ಆಗದ ಕಾರಣ ಲಿಂಕ್ ಗೆ ಹೋಗಲು ತಿಳಿಸಿದಾಗ ನಾನು ಗೂಗಲ್ ಕ್ರೋಮ್ ನಲ್ಲಿ ಲಿಂಕ್ ನ್ನು ಓಪನ್ ಮಾಡಿ ನೋಡಿದ್ದು ಆಕ್ಸಿಸ್ ಬ್ಯಾಂಕ್ ನ ವೆಬ್ ಅಪ್ಲಿಕೇಷನ್ ರೀತಿಯೇ ಇದ್ದು ಅದರೊಳಗೆ ಹೋಗಲು ಲಾಗಿನ್ ಆಪ್ಷನ್ ಬಂದಿದ್ದು ಲಾಗಿನ್ ಆಗಲು ನನ್ನ ಮೊಬೈಲ್ ಸಂಖ್ಯೆ ಮತ್ತು ಕ್ರೇಡಿಟ್ ಕಾರ್ಡ ಸಂಖ್ಯೆ ನಮೂದಿಸಿರುತ್ತೇನೆ.

ನಂತರ ಇನ್‌ಕರೆಕ್ಷನ್ ಸಪೋರ್ಟ್ ಎಂದು ಮೆಸೇಜ್ ಬಂದಿದ್ದು ನಂತರ ಕೇವಲ ೧ ನಿಮಿಷದೊಳಗೆ ನನ್ನ ಕ್ರೆಡಿಟ್ ಕಾರ್ಡ ನಿಂದ ೧,೯೭,೮೪೧ ರೂ ಹಣವು ರಿಲೆಯನ್ಸ ರಿಟೈಲ್‌ಗೆ ಕಟ್ ಆಗಿದ್ದು ಕೂಡಲೇ ಪೋನ್ ಲೈನಿನಲ್ಲಿದ್ದ ವ್ಯಕ್ತಿಯು ಪೋನ್ ಕಾಲ್ ಕಟ್ ಮಾಡಿರುತ್ತಾನೆ.

ನಂತರ ನಾನು ಮೋಸ ಹೋಗಿರುವುದು ತಿಳಿಯಿತು. ನನ್ನಿಂದ ಲಿಂಕ್ ಓಪನ್ ಮಾಡಿಸಿ ಮೋಸದಿಂದ ಹಣವನ್ನು ಪಡೆದಿರುವ ಸಂಜೀವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಹಣವನ್ನು ವಾಪಾಸ್ ಕೊಡಿಸಬೇಕಾಗಿ ಕೋರಿ ಅಕ್ಷಯ್ ಬಾಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದಾರೆ.

Online phishing fraud for a person from Balehonnur

Share

Leave a comment

Leave a Reply

Your email address will not be published. Required fields are marked *

Don't Miss

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಸೋಮವಾರ ಕೆರೆಯ...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನೊಂದ ಕುಟುಂಬಕ್ಕೆ ಸರ್ಕಾರಿ ಹುದ್ದೆ ಕಲ್ಪಿಸಿಕೊಡಬೇ ಕು ಎಂದು ಆಗ್ರಹಿಸಿ ದಸಂಸ ಮುಖಂಡರುಗಳು...

Related Articles

ನಗರದಲ್ಲಿ ಅವಿಧಿ ಮುಗಿದ ಚಾಕೊಲೇಟ್ ಸಾಸ್ ಬಳಸಿ ಕೇಕ್ ….?

ಚಿಕ್ಕಮಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್‌ ಹಾಗೂ ಬೇಕರಿಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ...

ಬಿಜೆಪಿ-ಸಂಘಪರಿವಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ಉತ್ತರಾಖಾಂಡ ರಾಜ್ಯದ ಹಾಲದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನವನ್ನು...

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ...

ರಾಷ್ಟ್ರಧ್ವಜ ಅವಮಾನ ಆರೋಪ: ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿ, ಮಧ್ಯಾಹ್ನದ ವೇಳೆಗೆ ಧ್ವಜವನ್ನು ಅವರೋಹಣ ಮಾಡಿರುವ ಘಟನೆಗೆ...