Home namma chikmagalur ajjampura ಅಭಿವೃದ್ಧಿ ಕಾಣದ ಐತಿಹಾಸಿಕ ಅಂತರಘಟ್ಟೆ
ajjampuraHomeLatest Newsnamma chikmagalur

ಅಭಿವೃದ್ಧಿ ಕಾಣದ ಐತಿಹಾಸಿಕ ಅಂತರಘಟ್ಟೆ

Share
Share

ಅಜ್ಜಂಪುರ; ಅಜ್ಜಂಪುರ ಸಮೀಪದ ಅಂತರಘಟ್ಟೆ ಶ್ರೀ ದುರ್ಗಾಂಭ ದೇವಿಯ ಜಾತ್ರೆಗೆ ಪ್ರಖ್ಯಾತಿ ಪಡೆದಿದೆ. ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಮತ್ತು ರಾಜ್ಯದ ವಿವಿಧ ಕಡೆ ನೆಲೆಸಿರುವ ಲಕ್ಷಾಂತರ ಭಕ್ತರು ಪ್ರತಿ ವರ್ಷ ಜಾತ್ರೆಗೆ ದೇವಿಯ ರಥೋತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆಯುತ್ತಾರೆ.

ರಥೋತ್ಸವ ನಡೆಯುವ ಎರಡು ದಿನ ಭಕ್ತರು ಎತ್ತಿನ ಗಾಡಿ,ಟ್ರಾಕ್ಟರ್, ಬೈಕ್ ಮತ್ತು ಬಸ್ಸು ಗಳಲ್ಲಿ ಜಾಮಾಯಿಸುತ್ತಾರೆ.ಹೀಗಾಗಿ ಎರಡು ದಿನದಲ್ಲಿ ಕೋಟ್ಯಾಂತರ ವಹಿವಾಟು ನಡೆಯುತ್ತದೆ ಮತ್ತು ದೇವಿಗೆ ಕಾಣಿಕೆ ರೂಪದಲ್ಲಿ ಹಣ ಹರಿದು ಬರುತ್ತದೆ.ಜಾತ್ರೆಯ ದಿನಗಳಲ್ಲಿ ತಿಂಗಳು ಪೂರ್ತಿ ಭಕ್ತರು ಬಂದು ಹೋಗುತ್ತಾರೆ.

ವರ್ಷವೂ ಜನ ಜಂಗುಳಿ ಇದ್ದೇ ಇರುತ್ತದೆ.ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ,ಕೋಟಿ ಆದಾಯವಿದೆ ಆದರೂ ಅಭಿವೃದ್ಧಿ ಕಾಣದೆ ನಲುಗುತ್ತಿದೆ.ಭಕ್ತರು ಹಿಡಿ ಶಾಪ ಹಾಕುತ್ತಾರೆ.
ಹಳೆ ಕಾಲದ ದೇವಸ್ಥಾನವಾಗಿರುವುದರಿಂದ ಮಳೆ ಕಾಲದಲ್ಲಿ ಸೊರುತ್ತಿದೆ.ಮೇಲೆ ತಗಡು ಹಾಕಿ ರಕ್ಷಣೆ ಮಾಡುತ್ತಿದ್ದಾರೆ.

ದೇವಾಲಯದ ರಸ್ತೆ ಕಿರಿದಾಗಿದ್ದು ಜನ,ವಾಹನ, ಎತ್ತಿನ ಗಾಡಿಗಳು ಬಂದು ಹೋಗುವುದು ತುಂಬಾ ಕಷ್ಟ ವಾಗುತ್ತಿದೆ ಆದ್ದರಿಂದ ಡಬಲ್ ರಸ್ತೆ ಮಾಡಿ ಡಿವೈಡರ್ ಅಳವಡಿಸಿ ಕಾಂಕ್ರೀಟ್ ರಸ್ತೆ ಮಾಡಿ ಲೈಟ್ ಅಳವಡಿಸಿದರೆ ಶಾಶ್ವತ ಪರಿಹಾರ ಮಾಡಿದಂತೆ ಆಗುತ್ತದೆ.ಧೂಳು, ಧೂಳು ತುಂಬಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು ಈ ಬಗ್ಗೆ ಶಾಶ್ವತ ಪರಿಹಾರವನ್ನು ಮಾಡಬೇಕು ಅಂದರೆ ಆದಷ್ಟು ಕಾಂಕ್ರೀಟ್ ರಸ್ತೆಯ ಜೊತೆಗೆ ಚರಂಡಿ ಮಾಡಿದರೆ ಉತ್ತಮ ಎಂದು ಭಕ್ತರು ಹೇಳುತ್ತಿದ್ದಾರೆ.

ಜಾತ್ರೆ ಬಂದರೆ ಇಲ್ಲಿನ ಭಕ್ತರು ಲಕ್ಷ, ಲಕ್ಷ ಕೊಟ್ಟು ಎತ್ತು ಮತ್ತು ಗಾಡಿ ಖರೀದಿ ಮಾಡುವ ಕ್ರೇಜ್ ಹೊಂದಿದ್ದಾರೆ ಹೀಗಾಗಿ ಅಂತರಘಟ್ಟೆ ಸಂಪರ್ಕ ಮಾಡುವ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಡಾಂಬರ್ ರಸ್ತೆ ಮಾಡಿದರೆ ಒಳ್ಳೆಯದು.ಕುಡಿಯುವ ನೀರಿಗೆ ಹೆಚ್ಚಿನ ತೊಂದರೆ ಇದೆ ಇದಕ್ಕೆ ಶಾಶ್ವತ ಪರಿಹಾರವಾಗಿ ಭದ್ರ ಕಾಲುವೆಯ ನೀರು ಕೆರೆಗಳಿಗೆ ಹರಿಸುವುದರ ಜೊತೆಗೆ ಜನರಿಗೆ ಯೋಗ್ಯವಾದ ಕುಡಿಯುವ ನೀರು ಸಿಗುವಂತೆ ಮಾಡಬೇಕು .ರಸ್ತೆಗಳು ಗುಂಡಿ ಗೊಟರುಗಳಿಂದ ತುಂಬಿ ಆನೇಕ ಅಪಘಾತಗಳಿಗೆ ಕಾರಣವಾಗಿದೆ.ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಜನ ಪ್ರತಿನಿಧಿಗಳು ಗಮನ ಹರಿಸುವುದು ಒಳ್ಳೆಯದು.

ಪೊಲೀಸ್ ವ್ಯವಸ್ಥೆ ಹೆಚ್ಚಿಸುವ ಜೊತೆಗೆ ವೈದ್ಯರು ಮತ್ತು ಸಿಬ್ಬಂದಿ ಹೆಚ್ಚಿಸ ಬೇಕು.ಜಾತ್ರೆ ನಡೆಯುವ ಸಮಯದಲ್ಲಿ ತೇಪೆ ಹಾಕುವ ಬದಲು ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿ, ಗ್ಯಾರಂಟಿ ಎಂದು ಬೊಬ್ಬೆ ಹೊಡೆಯುವ ಬದಲು ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿರುವಂತಹ “ಗ್ಯಾರಂಟಿ” ಕೊಡಬೇಕು ಎಂದು ಇಲ್ಲಿನ ಭಕ್ತರ ಮತ್ತು ಅಂತರಘಟ್ಟೆ ಜನರ ಒತ್ತಾಯ ವಾಗಿದೆ.
ಕನ್ನಡದ ಸಾಹಿತಿ ಗೊ.ರು.ಚನ್ನಬಸಪ್ಪನವರು ಈ ಊರು ಕುರಿತು “ಸಾಕ್ಷಿ ಕಲ್ಲು” ಎಂಬ ಜನಪ್ರಿಯ ನಾಟಕ ಬರೆದು ಯಶಸ್ವಿ ಪ್ರದರ್ಶನ ಕಂಡಿತ್ತು ಈ ಸಾಕ್ಷಿ ಕಲ್ಲು ಉಳಿಸಲಾದರು ಅಂತರಘಟ್ಟೆ ಅಭಿವೃದ್ಧಿ ಹೊಂದಲಿ.

ಇದೇ ತಿಂಗಳು 25 ರಿಂದ ಜಾತ್ರೆ ಪ್ರಾರಂಭವಾಗಿ ರಥೋತ್ಸವ ನಡೆಯುತ್ತಿದೆ ಹೀಗಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಭಕ್ತರ ಬಯಕೆ.

An undeveloped historical crossroads

Share

Leave a comment

Leave a Reply

Your email address will not be published. Required fields are marked *

Don't Miss

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೆ...

Related Articles

ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ದೇಶದಲ್ಲೇ ನಂ.1ನೇ ಸ್ಥಾನ

ಚಿಕ್ಕಮಗಳೂರು: ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ...

ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಪ್ರಕರಣ ದಾಖಲು

ಚಿಕ್ಕಮಗಳೂರು: ಸೈಬರ್ ಕ್ರೈಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಶೋಷಣೆಯ ಅಶ್ಲೀಲ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಆಲ್ದೂರಿನ ಯುವಕನ ಸಾಧನೆ

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ ‘Pixxeಟ’ ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ...

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪದ ಬಳಸಲು ಮನವಿ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಶೇ.೬೦ರಷ್ಟು ಕನ್ನಡ ಪದಗಳ...