Home namma chikmagalur ajjampura ಅಭಿವೃದ್ಧಿ ಕಾಣದ ಐತಿಹಾಸಿಕ ಅಂತರಘಟ್ಟೆ
ajjampuraHomeLatest Newsnamma chikmagalur

ಅಭಿವೃದ್ಧಿ ಕಾಣದ ಐತಿಹಾಸಿಕ ಅಂತರಘಟ್ಟೆ

Share
Share

ಅಜ್ಜಂಪುರ; ಅಜ್ಜಂಪುರ ಸಮೀಪದ ಅಂತರಘಟ್ಟೆ ಶ್ರೀ ದುರ್ಗಾಂಭ ದೇವಿಯ ಜಾತ್ರೆಗೆ ಪ್ರಖ್ಯಾತಿ ಪಡೆದಿದೆ. ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಮತ್ತು ರಾಜ್ಯದ ವಿವಿಧ ಕಡೆ ನೆಲೆಸಿರುವ ಲಕ್ಷಾಂತರ ಭಕ್ತರು ಪ್ರತಿ ವರ್ಷ ಜಾತ್ರೆಗೆ ದೇವಿಯ ರಥೋತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆಯುತ್ತಾರೆ.

ರಥೋತ್ಸವ ನಡೆಯುವ ಎರಡು ದಿನ ಭಕ್ತರು ಎತ್ತಿನ ಗಾಡಿ,ಟ್ರಾಕ್ಟರ್, ಬೈಕ್ ಮತ್ತು ಬಸ್ಸು ಗಳಲ್ಲಿ ಜಾಮಾಯಿಸುತ್ತಾರೆ.ಹೀಗಾಗಿ ಎರಡು ದಿನದಲ್ಲಿ ಕೋಟ್ಯಾಂತರ ವಹಿವಾಟು ನಡೆಯುತ್ತದೆ ಮತ್ತು ದೇವಿಗೆ ಕಾಣಿಕೆ ರೂಪದಲ್ಲಿ ಹಣ ಹರಿದು ಬರುತ್ತದೆ.ಜಾತ್ರೆಯ ದಿನಗಳಲ್ಲಿ ತಿಂಗಳು ಪೂರ್ತಿ ಭಕ್ತರು ಬಂದು ಹೋಗುತ್ತಾರೆ.

ವರ್ಷವೂ ಜನ ಜಂಗುಳಿ ಇದ್ದೇ ಇರುತ್ತದೆ.ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ,ಕೋಟಿ ಆದಾಯವಿದೆ ಆದರೂ ಅಭಿವೃದ್ಧಿ ಕಾಣದೆ ನಲುಗುತ್ತಿದೆ.ಭಕ್ತರು ಹಿಡಿ ಶಾಪ ಹಾಕುತ್ತಾರೆ.
ಹಳೆ ಕಾಲದ ದೇವಸ್ಥಾನವಾಗಿರುವುದರಿಂದ ಮಳೆ ಕಾಲದಲ್ಲಿ ಸೊರುತ್ತಿದೆ.ಮೇಲೆ ತಗಡು ಹಾಕಿ ರಕ್ಷಣೆ ಮಾಡುತ್ತಿದ್ದಾರೆ.

ದೇವಾಲಯದ ರಸ್ತೆ ಕಿರಿದಾಗಿದ್ದು ಜನ,ವಾಹನ, ಎತ್ತಿನ ಗಾಡಿಗಳು ಬಂದು ಹೋಗುವುದು ತುಂಬಾ ಕಷ್ಟ ವಾಗುತ್ತಿದೆ ಆದ್ದರಿಂದ ಡಬಲ್ ರಸ್ತೆ ಮಾಡಿ ಡಿವೈಡರ್ ಅಳವಡಿಸಿ ಕಾಂಕ್ರೀಟ್ ರಸ್ತೆ ಮಾಡಿ ಲೈಟ್ ಅಳವಡಿಸಿದರೆ ಶಾಶ್ವತ ಪರಿಹಾರ ಮಾಡಿದಂತೆ ಆಗುತ್ತದೆ.ಧೂಳು, ಧೂಳು ತುಂಬಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು ಈ ಬಗ್ಗೆ ಶಾಶ್ವತ ಪರಿಹಾರವನ್ನು ಮಾಡಬೇಕು ಅಂದರೆ ಆದಷ್ಟು ಕಾಂಕ್ರೀಟ್ ರಸ್ತೆಯ ಜೊತೆಗೆ ಚರಂಡಿ ಮಾಡಿದರೆ ಉತ್ತಮ ಎಂದು ಭಕ್ತರು ಹೇಳುತ್ತಿದ್ದಾರೆ.

ಜಾತ್ರೆ ಬಂದರೆ ಇಲ್ಲಿನ ಭಕ್ತರು ಲಕ್ಷ, ಲಕ್ಷ ಕೊಟ್ಟು ಎತ್ತು ಮತ್ತು ಗಾಡಿ ಖರೀದಿ ಮಾಡುವ ಕ್ರೇಜ್ ಹೊಂದಿದ್ದಾರೆ ಹೀಗಾಗಿ ಅಂತರಘಟ್ಟೆ ಸಂಪರ್ಕ ಮಾಡುವ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಡಾಂಬರ್ ರಸ್ತೆ ಮಾಡಿದರೆ ಒಳ್ಳೆಯದು.ಕುಡಿಯುವ ನೀರಿಗೆ ಹೆಚ್ಚಿನ ತೊಂದರೆ ಇದೆ ಇದಕ್ಕೆ ಶಾಶ್ವತ ಪರಿಹಾರವಾಗಿ ಭದ್ರ ಕಾಲುವೆಯ ನೀರು ಕೆರೆಗಳಿಗೆ ಹರಿಸುವುದರ ಜೊತೆಗೆ ಜನರಿಗೆ ಯೋಗ್ಯವಾದ ಕುಡಿಯುವ ನೀರು ಸಿಗುವಂತೆ ಮಾಡಬೇಕು .ರಸ್ತೆಗಳು ಗುಂಡಿ ಗೊಟರುಗಳಿಂದ ತುಂಬಿ ಆನೇಕ ಅಪಘಾತಗಳಿಗೆ ಕಾರಣವಾಗಿದೆ.ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಜನ ಪ್ರತಿನಿಧಿಗಳು ಗಮನ ಹರಿಸುವುದು ಒಳ್ಳೆಯದು.

ಪೊಲೀಸ್ ವ್ಯವಸ್ಥೆ ಹೆಚ್ಚಿಸುವ ಜೊತೆಗೆ ವೈದ್ಯರು ಮತ್ತು ಸಿಬ್ಬಂದಿ ಹೆಚ್ಚಿಸ ಬೇಕು.ಜಾತ್ರೆ ನಡೆಯುವ ಸಮಯದಲ್ಲಿ ತೇಪೆ ಹಾಕುವ ಬದಲು ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿ, ಗ್ಯಾರಂಟಿ ಎಂದು ಬೊಬ್ಬೆ ಹೊಡೆಯುವ ಬದಲು ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿರುವಂತಹ “ಗ್ಯಾರಂಟಿ” ಕೊಡಬೇಕು ಎಂದು ಇಲ್ಲಿನ ಭಕ್ತರ ಮತ್ತು ಅಂತರಘಟ್ಟೆ ಜನರ ಒತ್ತಾಯ ವಾಗಿದೆ.
ಕನ್ನಡದ ಸಾಹಿತಿ ಗೊ.ರು.ಚನ್ನಬಸಪ್ಪನವರು ಈ ಊರು ಕುರಿತು “ಸಾಕ್ಷಿ ಕಲ್ಲು” ಎಂಬ ಜನಪ್ರಿಯ ನಾಟಕ ಬರೆದು ಯಶಸ್ವಿ ಪ್ರದರ್ಶನ ಕಂಡಿತ್ತು ಈ ಸಾಕ್ಷಿ ಕಲ್ಲು ಉಳಿಸಲಾದರು ಅಂತರಘಟ್ಟೆ ಅಭಿವೃದ್ಧಿ ಹೊಂದಲಿ.

ಇದೇ ತಿಂಗಳು 25 ರಿಂದ ಜಾತ್ರೆ ಪ್ರಾರಂಭವಾಗಿ ರಥೋತ್ಸವ ನಡೆಯುತ್ತಿದೆ ಹೀಗಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಭಕ್ತರ ಬಯಕೆ.

An undeveloped historical crossroads

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...