ಚಿಕ್ಕಮಗಳೂರು: ‘ಶ್ರೀ ಗುರುದತ್ತಾತ್ರೇಯ ಪೀಠದ ವ್ಯಾಜ್ಯ ಇರುವುದು ಶಾಖಾದ್ರಿ ವಂಶಸ್ಥರಿಗೂ ಹಾಗೂ ದತ್ತಪೀಠ ಸಂವರ್ಧನಾ ಸಮಿತಿಯ ನಡುವೆ. ಹಿಂದೂ–ಮುಸ್ಲಿಮರ ನಡುವೆ ಅಲ್ಲ’ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ ತಿಳಿಸಿದರು.
ಇನಾಂ ದತ್ತಾತ್ರೇಯ ಪೀಠದ ಒಟ್ಟು ಆಸ್ತಿ 1861 ಎಕರೆ ಇದ್ದು, ಹಿಂದೆ ಇದ್ದ ಗೌಸ್ ಮೊಹಿದ್ದೀನ್ ಶಾಖಾದ್ರಿ ಹಾಗೂ ಪೀರ್ ಮೊಹಿದ್ದೀನ್ ಶಾಖಾದ್ರಿ ಈ ಆಸ್ತಿಯಲ್ಲಿ ಸಾಕಷ್ಟು ಪರಭಾರೆ ಮಾಡಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದತ್ತಪೀಠವು ಮತ್ತು ಬಾಬಾಬುಡನ್ ದರ್ಗಾವು ಬೇರೆ ಬೇರೆ ಕಡೆ ಇರುವುದರಿಂದ ದತ್ತಪೀಠಕ್ಕೂ ಬಾಬಾಬುಡನ್ ದರ್ಗಾಕ್ಕೂ ಯಾವುದೇ ಸಂಬಂಧ ಇಲ್ಲ. ಬಾಬಾಬುಡನ್ ದರ್ಗಾ ಚಿಕ್ಕಮಗಳೂರು ತಾಲ್ಲೂಕು, ಜಾಗರ ಹೋಬಳಿ, ನಾಗೇನಹಳ್ಳಿ ಗ್ರಾಮದ ಸರ್ವೆ ನಂಬರ್– 57ರಲ್ಲಿ 111 ಎಕರೆ ಇದೆ.
ಈ ಆಸ್ತಿಗಳಲ್ಲಿ ಅನೇಕ ಆಸ್ತಿಗಳನ್ನು ಶಾ–ಖಾದ್ರಿಗಳು ಮಾರಾಟ ಮಾಡಿದ್ದಾರೆ ಎಂದು ದೂರಿದರು. ಡಿ.4 ರಂದು ದತ್ತಜಯಂತಿ ನಡೆಸಲಾಗುತ್ತಿದೆ. ಡಿ.2 ರಂದು ಅನುಸೂಯದೇವಿ ಅವರ ಪೂಜೆ ಹಾಗೂ ಸಂಕೀರ್ತನಾ ಯಾತ್ರೆ ನಡೆಯಲಿದೆ. ಡಿ.3 ರಂದು ನಗರದಲ್ಲಿ ಶೋಭಾಯಾತ್ರೆ ನಡೆಯುತ್ತದೆ.
ಡಿ.4 ರಂದು ದತ್ತಪೀಠದಲ್ಲಿ ದತ್ತಹೋಮ, ಪಾದುಕೆ ಪೂಜೆ, ಔದುಂಬರ ವೃಕ್ಷದ ಪೂಜೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷದ್ ಉಪಾಧ್ಯಕ್ಷ ಯೋಗರಾಜ್ ಅರಸ್, ಮಠ ಮಂದಿರಗಳ ಪ್ರಮುಖ್ ಶಿವಣ್ಣ, ಪುಷ್ಪ, ನಯನ್, ಸುನೀಲ್ ಉಪಸ್ಥಿತರಿದ್ದರು.
The dispute over the Sri Guru Dattatreya Peetha – not between Hindus and Muslims
Leave a comment