ಬಾಳೆಹೊನ್ನೂರು: ಗಾಳಿ–ಮಳೆಗೆ ಬಾಳೆಹೊನ್ನೂರು ಸಮೀಪ ಮರದ ಕೊಂಬೆಯೊಂದು ಬಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ.
ಕಡಬಗೆರೆ ಬಿಳುಕೊಪ್ಪ ನಿವಾಸಿ ಅನಿಲ್ ರುಜಾರಿಯೊ(50) ಮೃತಪಟ್ಟವರು. ಇವರು ತಮ್ಮ ಗ್ರಾಮದಿಂದ ಬಾಳೆಹೊನ್ನೂರಿಗೆ ಬೈಕ್ನಲ್ಲಿ ತೆರಳುತ್ತಿದ್ದರು.
ಬಾಳೆಹೊನ್ನೂರು–ಚಿಕ್ಕಮಗಳೂರು ರಸ್ತೆಯ ಎಲೆಕ್ಲಲು ಬಳಿ ಮರದ ಕೊಂಬೆಯೊಂದು ಮುರಿದು ಅವರ ಮೇಲೆ ಬಿದ್ದಿದೆ.
ತಲೆಗೆ ತೀವ್ರವಾಗಿ ಪೆಟ್ಟಾಗಿದ್ದ ಅವರನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವೀಶ್, ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಅಷ್ಟರಲ್ಲಿ ಅವರ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Biker killed by falling tree branch
Leave a comment