Home Latest News ನಗರಸಭೆ ಅಧ್ಯಕ್ಷರ “ರಾಜೀನಾಮೆ” ಹೈ ಡ್ರಾಮ… ?
Latest NewschikamagalurHomenamma chikmagalur

ನಗರಸಭೆ ಅಧ್ಯಕ್ಷರ “ರಾಜೀನಾಮೆ” ಹೈ ಡ್ರಾಮ… ?

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷರಾದ ಸುಜಾತ ಮಾತುಕತೆಯಂತೆ ಕಳೆದ ಹತ್ತು ದಿನಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ವಾಪಸ್ ಪಡೆದಿದ್ದರಿಂದ ಬಿಜೆಪಿ ಶಿಸ್ತಿನ ಪಕ್ಷ ಎನ್ನುವವರೆಗೆ ಮುಖ ಭಂಗವಾಗಿದೆ.

ವಿಧಾನ ಪರಿಷತ್ ಸದಸ್ಯರು ಪಕ್ಷದ ಉನ್ನತ ಮುಖಂಡರಾದ ಸಿ.ಟಿ.ರವಿಯವರಿಗೆ ಮಾತ್ರ ಮತ್ತೆ, ಮತ್ತೆ ಹಿನ್ನಡೆಯಾಗುತ್ತಿದೆ.ಈ ಹಿಂದೆ ವರಸಿದ್ದಿ ವೇಣುಗೋಪಾಲ ನೀಡಿದ ರಾಜಕೀಯ ಹೊಡೆತ ಸಹಿಸಿಕೊಳ್ಳುವ ಮುನ್ನವೇ ಸುಜಾತ ಕೊಡುತ್ತಿರುವ ಕಾಟ ರಾಜಕೀಯ ಹಿನ್ನಡೆ ಎಂದು ಭಾವಿಸಲಾಗಿದೆ.

ಜೂನ್ 10 ರ ಸಂಜೆ ವಕೀಲರೊಬ್ಬರ ಜೊತೆಗೆ ಹೋಗಿ ಸುಜಾತರವರು ರಾಜೀನಾಮೆ ವಾಪಸ್ ಪಡೆದು ಯಾರ ಕೈಗೂ ಸಿಗದೆ ಸತಾಯಿಸಿರುವುದು ಬಿಜೆಪಿಯವರಿಗೆ ತಲೆನೋವು ತಂದಿದೆ. ರಾಜೀನಾಮೆ ವಾಪಸ್ ಪಡೆದ ಸುಜಾತ ಬಿಜೆಪಿ ಮುಖಂಡರ ಮನೆಯಲ್ಲಿದ್ದು ಬೆಳಗ್ಗೆ ಕಡೂರು ರೈಲು ನಿಲ್ದಾಣ ದಲ್ಲಿದ್ದರು ಎನ್ನಲಾಗಿದೆ.ಅದು ಪೊಲೀಸರು ಜಿಪಿಎಸ್ ನೆರವಿನಿಂದ ಗೊತ್ತಾಗಿರುವುದು.

ನಿನ್ನೆ ರಾತ್ರಿ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ದೇವರಾಜ್‌ ಶೆಟ್ಟಿ ಹಾಗೂ ನಗರಸಭಾ ಸದಸ್ಯರು ಮುಖಂಡರು ಮನವೊಲಿಸಲು ಭಾರಿ ಕಸರತ್ತು ನಡೆಸಿದ್ದಾರೆ.ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ನಾನು ಖರ್ಚು ಮಾಡಿದ ಹಣ ಕೂಡ ಬಂದಿಲ್ಲ ಎಂದು ರಾಗ ತೆಗೆದಿರುವ ಸುಜಾತರನ್ನು ಸಮಾಧಾನ ಮಾಡಲು ಸುಸ್ತಾಗಿ ಅಂತೂ ಇಂದು ಮತ್ತೆ ರಾಜೀನಾಮೆ ನೀಡಲು ಒಪ್ಪಿಸಿದ್ದಾರೆ.ಆದರೆ ಇನ್ನೂ ಹತ್ತು ದಿನದಲ್ಲಿ ಮತ್ತೆ ಏನು ರಾಜಕೀಯ ನಡೆಯುತ್ತದೆ ಎಂಬ ಅನುಮಾನ ಇದೆ.

ಬಿಜೆಪಿ ಮತ್ತು ದಳದವರ ಒಪ್ಪಂದದ ಪ್ರಕಾರ ದಳದ ಶೀಲಾ ದಿನೇಶ್ ಅಧ್ಯಕ್ಷರಾಗ ಬೇಕು.ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡರಿಗೆ ಪ್ರತಿಷ್ಠೆಯಾಗಿದ್ದು ಕಾಂಗ್ರೆಸ್ ನವರು ನಮಗೆ ಏಕೆ ಬೇಕು ಎನ್ನುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...