Home Latest News ನೌಕರರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೆದ್ದು ಬೀಗಿದ ದೇವೇಂದ್ರ
Latest News

ನೌಕರರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೆದ್ದು ಬೀಗಿದ ದೇವೇಂದ್ರ

Share
Share

ಚಿಕ್ಕಮಗಳೂರು : ಗುಡ್ಡದ ತುದಿಯಲ್ಲಿ ನಿಂತರೆ ಮಾತ್ರ ಮತ್ತೊಂದು ಗುಡ್ಡದ ತುದಿ ಕಾಣುವುದು. ನಾನು ಗುಡ್ಡದ ಕೆಳಗೆ ನಿಂತು ನೋಡಿದರೆ ಏನು ಕಾಣಲಿಲ್ಲ ಎಂಬಂತ ಫಲಿತಾಂಶ ಚಿಕ್ಕಮಗಳೂರು ನೌಕರರ ಸಂಘದ ಚುನಾವಣೆಯಲ್ಲಿ ಬಂದಿದೆ.

ಕಳೆದ ಒಂದು ತಿಂಗಳಿಂದ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನೌಕರರಿಗಿಂತ ರಾಜಕಾರಣಿಗಳು ಆಟ ಆಡ್ಡಿದ್ದು ಮಾತ್ರ ನಿಜ.
73 ಮತದಾರರಲ್ಲಿ 72 ಜನ ಮತ ಚಲಾವಣೆ ಮಾಡಿದ್ದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ದೇವೇಂದ್ರ ಅತ್ಯಧಿಕ 46 ಮತ ಪಡೆದು ಅಯ್ಕೆ ಆದರೆ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪೂರ್ಣೇಶ್ 45 ಪಡೆದರೆ ರಾಜ್ಯ ಪರಿಷತ್ ಸ್ಥಾನಕ್ಕೆ ಮಂಜುನಾಥ್ ಎರಡು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಹೇಮಂತ್ ಬಣದ ಇಬ್ಬರು ಸೋತರೆ ಒಬ್ಬರು ಗೆದ್ದಿದ್ದಾರೆ.
ಕಳೆದ ಒಂದು ತಿಂಗಳಿಂದ ಜಿದ್ದಾ,ಜಿದ್ದಿನಲ್ಲಿ ಪೈಪೋಟಿ ನಡೆಸಿ ಆರೋಪ ,ಪ್ರತ್ಯಾರೋಪದಲ್ಲಿ ಮುಳುಗಿದ್ದ ಚುನಾವಣೆಯಲ್ಲಿ ನೌಕರರು ಸ್ವಾಭಿಮಾನ ಮೆರೆದಿದ್ದಾರೆ ಎಂದು ಹೇಳುವುದರ ಜೊತೆಗೆ ಕುತಂತ್ರಕ್ಕೆ ಉತ್ತರ ಕೊಟ್ಟಿದ್ದಾರೆ ಎಂದು ನೂತನವಾಗಿ ಅಯ್ಕೆಯಾಗಿರುವ ಅಧ್ಯಕ್ಷ ದೇವೇಂದ್ರ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ರಾದ ಎಸ್,ಎಲ್,ಬೋಜೇಗೌಡ ಮತ್ತು ಮಾಜಿ ಎಂ,ಎಲ್,ಸಿ ಗಾಯಿತ್ರಿ ಶಾಂತೇಗೌಡ ಹೇಮಂತ್ ಕುಮಾರ್ ಪರ ಬ್ಯಾಟಿಂಗ್ ಮಾಡಿ ಕ್ಲೀನ್ ಬೋಲ್ಡ್ ಆದರೆ ಕಾಂಗ್ರೆಸ್ ವಕ್ತಾರ ಹೆಚ್,ಹೆಚ್.ದೇವರಾಜ್ ಮ್ಯಾನ್ ಅಫ್ ದ ಮ್ಯಾಚ್ ಆಗಿದ್ದಾರೆ.

ರೆಸಾರ್ಟ್, ಗುಂಡು,ತುಂಡುಗಳಿಗೆ ನೌಕರರು ಬಲಿಯಾಗದೆ ಹೀಗೂ ಉಂಟೇ ಎಂಬ ಫಲಿತಾಂಶ ಬಂದಿದೆ.
ರಾಜಕಾರಣಿಗಳ ವಿರುದ್ದ ಶೆಡ್ಡು ಹೊಡೆದ ದೇವೇಂದ್ರನ ಶಕ್ತಿ ಮಾತ್ರ ನಿಗೂಢ. ಮಂಜುನಾಥ್ ಸ್ವಾಮಿಯನ್ನು ಗೌರವ ಅಧ್ಯಕ್ಷ ರನ್ನಾಗಿ ರಾಜ್ಯ ಪರಿಷತ್ ನಲ್ಲಿ ಸೋತ ಅಭ್ಯರ್ಥಿ ಚೇತನ್ ರಾಜ್ಯ ಮಂಡಳಿಗೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಅವರನ್ನು ನೇಮಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ, ದೇಶದ ಸಾಧನೆಗಳನ್ನು ಸ್ಮರಿಸುವ, ಸ್ವಾತಂತ್ರ್ಯದ ಮೌಲ್ಯಗಳನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು...

ಕಸ್ತೂರಿ ರಂಗನ್ ವರದಿ ಮರುಪರಿಶೀಲಿಸಲು ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ತಕ್ಷಣವೇ ಬರಗಾಲವೆಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮಲೆನಾಡಿನ 137 ಗ್ರಾಮಗಳಿಗೆ ಕಂಟಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಪುನಃ ಪರಿಶೀಲಿಸಿ ಜನವಸತಿ...

Related Articles

ಅಧಿಕಾರ ಎಂಬ ಮಾಯಾ ಜಿಂಕೆ ಮರೆಯಾಗಿದ್ದು ಏಕೆ ?

ಚಿಕ್ಕಮಗಳೂರು: ಕಳೆದ ನಾಲ್ಕು ವರೆ ವರ್ಷಗಳ ಹಿಂದೆಯೇ ವಿಧಾನ ಪರಿಷತ್ ಸದಸ್ಯರಾಗ ಬೇಕಿದ್ದ ಗಾಯಿತ್ರಿ ಶಾಂತೇಗೌಡ...

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ-ಲೂಟಿಗಾಗಿ ಪೈಪೋಟಿ

ಚಿಕ್ಕಮಗಳೂರು: ಬಿಜೆಪಿ ಸರ್ಕಾರದಲ್ಲಿ ಶಾಸಕರ ನಡುವೆ ಕ್ಷೇತ್ರದ ಅಭಿವೃದ್ಧಿಗೆ ಪೈಪೋಟಿ ನಡೆದರೆ, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ,ಲೂಟಿಗಾಗಿ...

ಸ್ವಾವಲಂಬನೆ-ಸಮಾಜ ಅವಕಾಶವೇ ಸಹಕಾರಿ ಚಳುವಳಿ ಉದ್ದೇಶ

ಚಿಕ್ಕಮಗಳೂರು: ಸಹಕಾರಿ ಚಳುವಳಿಯ ಮೂಲತತ್ವವೇ ಸ್ವಾವಲಂಬನೆ, ಪರಸ್ಪರ ಸಹ ಕಾರ, ಸಮಾನ ಅವಕಾಶ ಹಾಗೂ ಸಾಮಾಜಿಕ...

ಅಕ್ರಮ ಮರಳು ಸಾಗಾಟ: 407 ಲಾರಿ ವಶ, ಚಾಲಕ ಪೊಲೀಸ್ ವಶಕ್ಕೆ

ಶೃಂಗೇರಿ: ಪರವಾನಗಿ ಇಲ್ಲದೆ 407 ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇಲೆ ಶೃಂಗೇರಿ ಪೊಲೀಸರು...