ಚಿಕ್ಕಮಗಳೂರು : ಅಧಿಕಾರಿಗಳು ನೌಕರರ ಅಸಹಕಾರ ಹಾಗೂ ಗೈರು ಹಾಜರಿಯಿಂದ ಬೇಸತ್ತು ಸರ್ವ ಸದಸ್ಯರು ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ ಘಟನೆ ಕಳಸ ತಾಲೂಕಿನ ಸಂಸೆಯಲ್ಲಿ ನಡೆದಿದೆ.
3 ಬಾರಿ ಗ್ರಾಮಸಭೆ ಕರೆದರೂ ಸಭೆಯ ದಿನ ಅಧಿಕಾರಿಗಳು ಬರಲ್ಲಿಲ್ಲ ಫೋನ್ ನಾಟ್ ರೀಚಬಲ್ ಆಗಿರುತ್ತದೆ ಪಿಡಿಓ, ಕಾರ್ಯದರ್ಶಿ, ಅಕೌಂಟೆಂಟ್, ಇಓ ಯಾರೂ ರೆಸ್ಪಾನ್ಸ್ ಮಾಡ್ತಿಲ್ಲ ಎಂದು ಆರೋಪಿಸಿರು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗಾಗಿ ಅವರು ಹೇಳಿದ ದಿನವೇ ಗ್ರಾಮ ಸಭೆ ಆಯೋಜಿಸಿದ್ದರು ಬರಿತ್ತಿಲ್ಲ, ಈ ನಡುವೆ, ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಯಾವುದೇ ಕೆಲಸಗಳು ಆಗ್ತಿಲ್ಲ ಜೊತೆಗೆ ಈಗಾಗಲೇ ಪ್ರಗತಿಯಲ್ಲಿರುವ ಕೆಲಸಗಳಿಗೆ ಹಣ ಕೂಡಾ ಬಿಡುಗಡೆಯಾಗಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ. ಸಂಸೆ ಗ್ರಾಮ ಪಂಚಾಯಿತಿ ಕಳಸ ತಾಲೂಕಿನಲ್ಲೇ ದೊಡ್ಡ ಗ್ರಾಮ ಪಂಚಾಯಿತಿ ನಾವು ಕೆಲಸ ಮಾಡದ ಹಿನ್ನೆಲೆ ಜನರಿಂದ ನಿತ್ಯ ಬೈಸಿಕೊಳ್ತಿವಿ ಎಂದು ತಮ್ಮ ರಾಜೀನಾಮೆ ಗೆ ಕಾರಣ ನೀಡುತ್ತಿದ್ದಾರೆ. ಈ ರೀತಿಯ ಅಧಿಕಾರಿಗಳ ಬೇಜವಾಬ್ದಾರಿಗೆ ಬೇಸತ್ತು ಪಂಚಾಯಿತಿಗೆ ಸಮೂಹಿಕ ರಾಜೀನಾಮೆ ಕೊಟ್ಟಿದ್ದೇವೆ.
ಅಧಿಕಾರಿಗಳು 2 ಪಂಚಾಯಿತಿಗೆ ಕೆಲಸ ಮಾಡುವುದರಿಂದ ಇಂದು ಪಂಚಾಯಿತಿಗೆ ಎಲ್ಲರೂ ಗೈರಾಗಿದ್ದಾರೆ ಎಂಬುದು ಗೊತ್ತಾಗಿದ್ದು ಕೂಡಲೇ ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕೆಂದು ಎಲ್ಲರೂ ಒತ್ತಾಯಿಸಿದ್ದಾರೆ.
Leave a comment