Home Latest News ಶ್ರೀರಾಮಸೇನೆ ಇಬ್ಬಾಗ : ಪ್ರತ್ಯೇಕ ದತ್ತಮಾಲೆ ಆಚರಣೆಗೆ ಒಂದು ಬಣ ಪಟ್ಟು
Latest NewsHomeState News

ಶ್ರೀರಾಮಸೇನೆ ಇಬ್ಬಾಗ : ಪ್ರತ್ಯೇಕ ದತ್ತಮಾಲೆ ಆಚರಣೆಗೆ ಒಂದು ಬಣ ಪಟ್ಟು

Share
Share

ಚಿಕ್ಕಮಗಳೂರು :

ಹಿಂದೂಪರ ಸಂಘಟನೆಗಳಲ್ಲಿ ಒಡಕು ಇಂದು ನೆನ್ನೆಯದಲ್ಲಾ ಇದಕ್ಕೆ ಮತ್ತೊಂದು ಹೊಸ ಸೇರ್ಪಡೆ‌ ಶ್ರೀರಾಮ ಸೇನೆಯಲ್ಲಿ ಉಂಟಾಗಿರುವ ಲೇಟೆಸ್ಟ್ ಭಿನ್ನಾಭಿಪ್ರಾಯ….

ಹೌದು ಕಳೆದ 20 ವರ್ಷಗಳ ಹಿಂದೆ ಸಂಘ ಪರಿವಾರದಿಂದ ಬೇರ್ಪಟ್ಟು ಪ್ರಮೋದ್ ಮುತಾಲಿಕ್ ಸಾರಥ್ಯದಲ್ಲಿ ಸ್ಥಾಪನೆಗೊಂಡ ಶ್ರೀರಾಮಸೇನೆಯಲ್ಲಿ ಇದೀಗ ಒಡಕು ಮೂಡಿದೆ. ಸೇನೆಯ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ವಿರುದ್ಧ ಇದೀಗ ಒಂದು ಗುಂಪು ಸಿಡಿದೆದ್ದಿದೆ. ಅದರಲ್ಲೂ ಶ್ರೀರಾಮ ಸೇನೆ ಪ್ರಬಲವಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಅಸಮಾಧಾನ ಬುಗಿಲೆದ್ದಿದೆ. ಇತ್ತೀಚೆಗೆ ಮುಂಬರುವ ದತ್ತಮಾಲಾ ಅಭಿಯಾನದ ಪತ್ರಿಕಾಗೋಷ್ಠಿಯ ನಂತರ ನಡೆದ ಬೆಳವಣಿಗೆಗಳು ಸಂಘಟನೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಭೀತು ಪಡಿಸಿದೆ.

ಇದೀಗ ಮತ್ತೊಂದು ಗುಂಪು ತಾವು ಪ್ರತ್ಯೇಕವಾಗಿ ದತ್ತಮಾಲಾ ಅಭಿಯಾನ ನಡೆಸುವುದಾಗಿ ಹೇಳಿಕೊಂಡಿದೆ. ಚಿಕ್ಕಮಗಳೂರು ಹಾಸನ ಶಿವಮೊಗ್ಗ ವಲಯ ಪ್ರಮುಖ್ ರಂಜಿತ್ ಶೆಟ್ಟಿ ನೇತೃತ್ವದ 20 ಕ್ಕೂ ಹೆಚ್ಚು ಜನ ಶ್ರೀರಾಮಸೇನೆ ಪದಾಧಿಕಾರಿಗಳ ತಂಡ ಜಿಲ್ಲಾಡಳಿತಕ್ಕೆ ಪ್ರತ್ಯೇಕ ಆಚರಣೆ ಮಾಡುವುದಾಗಿ ತಿಳಿಸಿದೆ.

ಮೂಲದ ಪ್ರಕಾರ ಪ್ರಸ್ತುತ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಮಗೆ ಬೇಕಾದವರನ್ನು ಮಾತ್ರ ಮುಂಚೂಣಿ ಸ್ಥಾನಗಳಲ್ಲಿ ಇಟ್ಟುಕೊಂಡು ಕೆಲವರನ್ನು ಜವಾಬ್ದಾರಿಯಿಂದ ವಿಮುಕ್ತಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ
ಇದರಿಂದ ಒಂದು ಗುಂಪು ಅದರಲ್ಲು ಚಿಕ್ಕಮಗಳೂರಿನ ರಂಜಿತ್ ಶೆಟ್ಟಿ ಹಾಗೂ ತಂಡ ಇದೀಗ ಕೆಂಡಾಮಂಡಲವಾಗಿದ್ದು ದತ್ತಮಾಲಾ ಅಭಿಯಾನವನ್ನೇ ಪ್ರತ್ಯೇಕವಾಗಿ ಮಾಡಲು ನಿರ್ಧರಿಸಿದೆ. ಮುಂದಿನ ತಿಂಗಳು ನವಂಬರ್ 4 ರಿಂದ ಆರಂಭಗೊಳ್ಳುವ ದತ್ತಮಾಲಾ ಅಭಿಯಾನ ನಾವು ಬೇರೆಯಾಗಿ ಮಾಡುತ್ತೇವೆ ಎಂದು ರಂಜಿತ್ ಶೆಟ್ಟಿ ಬಣ ಪೊಲೀಸರಿಗೆ ತಿಳಿಸಿದ್ದು ಶ್ರೀರಾಮ ಸೇನೆಯ ಈ ಒಡಕು ಇದೀಗ ಸಂಘಟನೆಯಲ್ಲಿ ಪ್ರತ್ಯೇಕತೆ ಜೊತೆಗೆ ಹಿಂದೂ ಬಾಂಧವರಲ್ಲಿ ಗೊಂದಲಕ್ಕೂ ಕಾರಣವಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...