Home namma chikmagalur ಚಿಕ್ಕಮಗಳೂರಿನ ತ್ರಿಮೂರ್ತಿ ರಾಜಕಾರಣಿಗಳ ಕುಚಿಕು ಕುಚಿಕು
namma chikmagalurPolitical News

ಚಿಕ್ಕಮಗಳೂರಿನ ತ್ರಿಮೂರ್ತಿ ರಾಜಕಾರಣಿಗಳ ಕುಚಿಕು ಕುಚಿಕು

Share
Share

ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣ ಚಿತ್ರ ವಿಚಿತ್ರವಾದರೆ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ರಾಜಕಾರಣ ಮಜಾ ತರುತ್ತದೆ.
ಜಿಲ್ಲೆಯಲ್ಲಿ ಐದು ವಿಧಾನ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ರಾರಾಜಿಸುತ್ತಿದ್ದಾರೆ ಆದರೆ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಹೆಚ್.ಡಿ.ತಮ್ಮಯ್ಯನವರಿಗೆ ಜನತಾದಳದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮತ್ತು ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಪೈಪೋಟಿ ಎನ್ನುವುದಕ್ಕಿಂತ ಸಾಥ್ ಕೊಡುತ್ತಿದ್ದಾರ ಎಂಬ ಗೊಂದಲ,ಅನುಮಾನ,ಜನರನ್ನು ಕಾಡುವುದಿರಲಿ ಕಾಂಗ್ರೆಸ್ ನವರಿಗೆ ಕಾಡುತ್ತಿರುವುದು ಮಾತ್ರ ಸತ್ಯ.

ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅನಿವಾರ್ಯವಾಗಿ ಜೊತೆಗೆ ಸೇರಲೇ ಬೇಕು.ಆದರೆ ತಬ್ಬಿ ಒಬ್ಬರನ್ನೊಬ್ಬರು ಕೊಂಡಾಡುವುದು ನೋಡಿ ಆಶ್ಚರ್ಯ, ಅನುಮಾನ ಪಡುವುದಿಲ್ಲ ಏಕೆಂದರೆ ತಮ್ಮಯ್ಯ ಮೊದಲು ಬೋಜೇಗೌಡರ ಬಳಿ ಪಳಗಿ ನಂತರ ಸಿ.ಟಿ.ರವಿ ಹತ್ತಿರ ಪಟ್ಟುಗಳನ್ನು ಕಲಿತು ಈಗ ಶಾಸಕರಾಗಿ ಮಧ್ಯೆ ಕುಳಿತರೆ ಅಕ್ಕಪಕ್ಕದಲ್ಲಿ ವಿಧಾನ ಪರಿಷತ್ ಸದಸ್ಯರು ರಾರಾಜಿಸುತ್ತಿರುವುದು ಸಾಮಾನ್ಯವಾಗಿದೆ.

ರಾಜಕೀಯದಲ್ಲಿ ಬರೀ ದ್ವೇಷ ತುಂಬಿರುವ ಸಮಯದಲ್ಲಿ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ” ಕಲ್ಯಾಣ ಕಾರ್ಯಗಳನ್ನು ” ಜಾರಿಗೆ ತರಲು ಕೈ,ಕೈಹಿಡಿದು ಸಾಗುತ್ತಿರುವುದನ್ನು ನೋಡಿದರೆ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಕೈ,ಕೈ ಹಿಸುಕಿಕೊಳ್ಳುತ್ತಾ ಪೆಚ್ಚು ಮೋರೆ ಹಾಕಿಕೊಂಡು ಥೂ ನಿಮ್ಮಗಳಿಗೆ ನಾವು ಬಡಿದಾಡಿದವಲ್ಲಾ ಎನ್ನುತ್ತಿರುವುದು ಮಾತ್ರ ಸತ್ಯ.
ಲಾಸ್ಟ ಫಂಚ್:: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಿ.ಟಿ.ರವಿ ಸೋಲಿಸಲು ಬೋಜೇಗೌಡ ತಮ್ಮಯ್ಯಗೆ ಸಾಥ್ ನೀಡಿ ಹಾಲಿನ ಅಭಿಷೇಕ ಮಾಡಿಸಿಕೊಂಡ ಹಾಲು ಅರುವ ಮುನ್ನವೇ ಬೋಜೇಗೌಡರನ್ನು ಗೆಲ್ಲಿಸುವ ಮೂರು ದಿನ ಮುಂಚೆ ವಿಧಾನ ಪರಿಷತ್ ಸದಸ್ಯರಾಗಿ ಮೂರು ಜನರು ಕೈ,ಕೈ ಹಿಡಿದು ಕ್ಷೇತ್ರ ಸುತ್ತುವುದನ್ನು ನೋಡಿ ಗಾಬರಿ ಯಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...