Home namma chikmagalur chikamagalur ಅಫ್ ರೇಟ್-ಚೀಫ್ ರೇಟ್ ಅಜ್ಜಂಪುರದಲ್ಲಿ ವಂಚಕರು ಜಾಲ
chikamagalurHomeLatest Newsnamma chikmagalur

ಅಫ್ ರೇಟ್-ಚೀಫ್ ರೇಟ್ ಅಜ್ಜಂಪುರದಲ್ಲಿ ವಂಚಕರು ಜಾಲ

Share
Share

ಅಜ್ಜಂಪುರ: ಅಫ್ ರೇಟ್ ಚೀಫ್ ರೇಟ್ ಎಂದು ಜನರನ್ನು ನಂಬಿಸಿ ವಂಚನೆ ಮಾಡುವವರು ಅಂಗಡಿ ತೆರೆದು ಕುಳುತ್ತಿದ್ದಾರೆ ಎಂದು ಹೇಳುತ್ತಲೇ ಖರೀದಿಗೆ ಮುಂದಾಗಿರುವುದು ತಿಳಿದುಬಂದಿದೆ.

ಅಜ್ಜಂಪುರದ ಶಿವಾನಂದ ಆಶ್ರಮದ ಮುಂಭಾಗದ ರಸ್ತೆಯಲ್ಲಿ ಎಸ್.ಆರ್.ಎಂಬ ಅಂಗಡಿ ಪ್ರಾರಂಭಿಸಿ ಮುಂಗಡವಾಗಿ ಹಣ ಪಡೆದು ಚೀಟಿ ನೀಡಿ ಜನರನ್ನು ಗುಂಡಿಗೆ ಬೀಳಿಸುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯಲ್ಲಿ ಹೊಸದುರ್ಗದಲ್ಲಿ ಅಂಗಡಿ ತೆರೆದು ಜನರಿಗೆ ಎಳ್ಳು ನೀರು ಬಿಟ್ಟು ರಾತ್ರೋರಾತ್ರಿ ಹಣ ದೋಚಿಕೊಂಡು ಓಡಿ ಹೋಗಿರುವ ಘಟನೆ ಕಣ್ಣು ಮುಂದಿರುವಾಗ ಜನ ಮರೂಳೋ ಜಾತ್ರೆ ಮರೂಳೋ ಎಂಬ ಗಾದೆ ನೆನಪಾಗುತ್ತದೆ.

ಎಸ್.ಆರ್.ಟ್ರೇಡರ್ಸ್ ಗೆ ಹಣ ಕಟ್ಟಿ ಕೈ,ಕೈ ಹಿಸುಕಿಕೊಳ್ಳುತ್ತಿರುವ ಜನರ ಮಧ್ಯೆ ಪೊಲೀಸರು ಆತನ ಜಾಲ ಶೋಧಿಸ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಹದಿನೈದು ದಿನಗಳಿಂದ ವಂಚನೆ ಮಾಡುತ್ತಿದ್ದ ಅಸಾಮಿ 150 ಕ್ಕೂ ಹೆಚ್ಚು ಜನರಿಗೆ ಟೋಪಿ ಹಾಕಿ ಲಕ್ಷಂತರ ಹಣ ದೋಚಿದ್ದಾರೆ ಎನ್ನಲಾಗಿದೆ.

ಕಳೆದ ಎರಡು ದಿನದ ಹಿಂದೆ ರಾತ್ರೋರಾತ್ರಿ ಪರಾರಿಯಾಗಿರುವ ವಂಚಕರಿಗೆ ಮೊಬೈಲ್ ಕರೆ ಮಾಡಿದರೆ ಸದ್ಯಕ್ಕೆ ಸ್ವಿಚ್ ಅಫ್ ಎಂಬ ಮೆಸೇಜ್ ಬರುತ್ತಿದ್ದು ಪೋಲಿಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.ಕೊಟ್ಟವ ಕೋಡಂಗಿ ಇಸುಕೊಂಡವ ವೀರಭದ್ರ ಎನ್ನ ಬೇಕಾಗಿದೆ.

ಜನ ಮತ್ತೆ,ಮತ್ತೆ ಇಂತಹ ಚೀಫ್ ಗಿರಾಕಿಗಳ ಕೈಗೆ ಸಿಕ್ಕಿ ಕೊಳ್ಳುವುದು ನಡೆದಿದೆ ನಡೆಯುತ್ತಲೇ ಇವೆ.ಜನ ಎಚ್ಚರಿಕೆವಹಿಸುವುದರ ಜೊತೆಗೆ ಪೊಲೀಸರು ಗಮನ ಹರಿಸಿದರೆ ಅನಾಹುತ ತಪ್ಪಿಸಬಹುದು.

Off-rate-Chief Rate Ajjampura is a network of fraudsters

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...