Home Political News ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೋ ! ಭ್ರಾಂತಿಯೋ ?
Political NewsState News

ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೋ ! ಭ್ರಾಂತಿಯೋ ?

Share
Share

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ ಎರಡೂವರೆ ವರ್ಷ ಪೂರೈಸುತ್ತಿದೆ.ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ “ಮುಖ್ಯಮಂತ್ರಿ” ಬದಲಾಗುತ್ತಾರೆ ಎಂದು ಎರಡು ಬಣಗಳು ಬೊಬ್ಬೇ ಹೊಡೆಯುತ್ತಿವೆ.ಹೈಕಮಾಂಡ್ ಭಯ ಯಾವ ಬಣಕ್ಕೂ ಇಲ್ಲ.

ಮಾಜಿ ಮಂತ್ರಿ ಕೆ.ಎನ್.ರಾಜಣ್ಣ ” ನವೆಂಬರ್ ” ಕ್ರಾಂತಿಯ ಬಗ್ಗೆ ಹೇಳಕೆ ನೀಡಿದಾಗಿನಿಂದ ಅಧಿಕಾರ ಹಂಚಿಕೆ ಗದ್ದಲ ಹೆಚ್ಚಾಗಿದೆ. ನವೆಂಬರ್ ತಿಂಗಳಿಗೆ ಕಾಲಿಡಲಾಗಿದೆ ಈಗ ಬಿಹಾರ ಚುನಾವಣೆಯ ನಂತರ ಏನಾದರೂ ಆಗಬಹುದು ಎಂದು ರಾಜಕೀಯ ವಿಶ್ಲೇಷಣೆ ನಡೆದಿದೆ.

ದಿನಕ್ಕೊಂದು ದಾಳ ಉರುಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಿಮ್ಮೇಳನ ಹೆಚ್ಚು ಸೌಂಡ್ ಮಾಡುವಂತೆ ನೋಡಿಕೊಂಡರೆ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಹಿಂಭಾಲಕರನ್ನು ಛೂ ಬಿಟ್ಟು ಕುಣಿಸಿ ತಾವು ಮೌನವಾಗಿ ದಾಳ ಉರುಳಿಸುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರ ಬಣ,ಡಿ.ಕೆ.ಶಿ ಬಣ,ತಟಸ್ಥ ಬಣ ಎಂದು ಮೂರು ಗುಂಪು ಸ್ಪಷ್ಟವಾಗಿ ಕಾಣುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲೂ ” ಕಾಂಗ್ರೆಸ್ “ಶಾಸಕರುಗಳು ಗೆದ್ದಿದ್ದಾರೆ ಪಾಪ ಬಿಡುವಿಲ್ಲದೆ ಅಭಿವೃದ್ಧಿಗಾಗಿ ತಡಕಾಡುತ್ತಿದ್ದಾರೆ.ಒಬ್ಬೊಬ್ಬರದು ಒಂದೊಂದು ಕತೆ,ಮೂಡಿಗೆರೆ ಶಾಸಕಿ ನಯನಮೋಟಮ್ಮ ಭಿನ್ನಮತದ ಹೊಡೆತದಿಂದ ತತ್ತರಿಸುವ ಬದಲು ಮುತಾಲಿಕ್ ಕಾಂಗ್ರೆಸ್ ಕಡೆ ಕಣ್ಣು ಮಿಟುಕಿಸಿ ಡಿ.ಕೆ.ನನ್ನ ಗಾಡ್ ಫಾದರ್ ಎಂದು ಗುರ್ತಿಸಿ ಕೊಂಡಿದ್ದಾರೆ. ಟಿ.ಡಿ.ರಾಜೇಗೌಡರಿಗೆ ಬಿಜೆಪಿಯವರ ಕಾಟ ದಿನೆ,ದಿನೇ ಬಿಗಡಾಯಿಸುತ್ತಿದೆ ಇವರು ಕೂಡ ಡಿ.ಕೆ ಪರ.ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯಗೆ ಕಲ್ಯಾಣ ಯೋಗ ಶುರುವಾಗಿದ್ದರು ಸಾಲದ ಬಾದೆ,ಮುಂದಿನ ಚುನಾವಣೆಗೆ ಕಡಿಮೆ ಎಂದರು ಇಪ್ಪತೈದು ಕೋಟಿ ಬೇಕು ಎಂಬ ಕೊರಗು ಇವರ ನೋಟ ಕೂಡ ಡಿ.ಕೆ ಕಡೆಗೆ ಇದೆ.

ತರೀಕೆರೆ ಶಾಸಕ ಶ್ರೀನಿವಾಸ್ ಮಾತ್ರ ಕುಟುಂಬ ಕಲ್ಯಾಣವೇ ಮುಖ್ಯ ಎಂಬ ನಡೆಯಲ್ಲಿ ಧೃಡವಾದ ನಂಬಿಕೆ ಇಟ್ಟುಕೊಂಡು ಸಿದ್ದರಾಮಯ್ಯನವರ ಪರ ನಿಂತಿದ್ದಾರೆ.ಕಡೂರು ಆನಂದ್ ಮಾತ್ರ ಕ್ಷೇತ್ರದಲ್ಲಿ ಎಷ್ಟು ಗಲಾಟೆ ನಡೆಯಲಿ ರಾಜ್ಯದಲ್ಲಿ ಎರಡು ಗುಂಪು ಬೇಕು ಎಂಬ ಗೊಂದಲದಲ್ಲಿ ಇದ್ದು ಸಮಯ ನೋಡಿ ತೀರ್ಮಾನಕ್ಕೆ ಬರಬಹುದು ಎಂಬ ಸಾಧ್ಯತೆ ಎಂದು ರಾಜಕೀಯ ವಿಶ್ಲೇಷಕರ ಅನಿಸಿಕೆಯಾಗಿದೆ.ನವೆಂಬರ್ ನಲ್ಲಿ ಕಾಂತಿಯೋ ,ಭ್ರಾಂತಿಯೋ ಕಾದು ನೋಡಬೇಕು. ಒಟ್ಟಾರೆ ಹಲವು ರಾಜಕೀಯ ಬದಲಾವಣೆ ಆಗುವುದು ಖಚಿತ.

November revolution in the state! Misconceptions?

Share

Leave a comment

Leave a Reply

Your email address will not be published. Required fields are marked *

Don't Miss

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ...

ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವುದೇ ಚೈತ್ರೋತ್ಸವದ ಉದ್ದೇಶ

ಚಿಕ್ಕಮಗಳೂರು: ಜಿಲ್ಲೆಯರೈತರು ಮತ್ತು ಬೆಳೆಗಾರರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವುದೇಚೈತ್ರೋತ್ಸವದಉದ್ದೇಶಎಂದುಜಿಲ್ಲಾಧಿಕಾರಿಎಂ.ಎನ್ ನಾಗರಾಜ್ ತಿಳಿಸಿದರು. ಅವರುಇಂದು ನಗರದ ನೇತಾಜಿ ಸುಭಾಷ್‌ಚಂದ್ರಬೋಸ್‌ಜಿಲ್ಲಾಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು...

Related Articles

ರಾಮಚಂದ್ರ ರಾವ್ ಅಲಿಯಾಸ್ ಕಾಮುಕ ರಾವ್ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯ

ರಾಮಚಂದ್ರ ರಾವ್ ಅಲಿಯಾಸ್ ಕಾಮಚಂದ್ರ ರಾವ್ ನಿವೃತ್ತಿ ಅಂಚಿನಲ್ಲಿ ಕಾಮ ಪುರಾಣದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಮಾಡಿದ್ದು...

ಸಿ.ಟಿ.ರವಿ ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ

ಚಿಕ್ಕಮಗಳೂರು: ಸಿ.ಟಿ.ರವಿ ಅವರು ಸೋಲಿನ ಹತಾಶೆಯಿಂದ ಎಚ್.ಡಿ.ತಮ್ಮಯ್ಯ ವಿರುದ್ಧ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್‌...

20 ವರ್ಷ ಹೊರಗಿನವರೆ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದಾರೆ

ಮೂಡಿಗೆರೆ:‘ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿರೋಧ ಪಕ್ಷಗಳು ಹತಾಶೆಯಿಂದ ಬಾಯಿ ಚಪಲಕ್ಕಾಗಿ ಮಾತನಾಡುತ್ತಿವೆ’ ಎಂದು...

ಚಿಕಿತ್ಸೆ ಫಲಕಾರಿಯಾಗದೆ ಸಾಲುಮರದ ತಿಮ್ಮಕ್ಕ ನಿಧನ

ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ....