ಚಿಕ್ಕಮಗಳೂರು: ನಗರದ ರತ್ನಗಿರಿ ರಸ್ತೆಯ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಮಾ.೧೪ ಮತ್ತು ೧೫ ರಂದು ಹೊನ್ನ ಬಿತ್ತೇವು ಹೊಲಕ್ಕೆಲ್ಲ ಸಂಘಟನೆಯಿಂದ ನವಮಾಧ್ಯಮಗಳ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಎನ್.ರಾಜು ತಿಳಿಸಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೃತಕ ಬುದ್ದಿಮತ್ತೆ ಹಾಗೂ ಸಾಮಾಜಿಕ ಮಾಧ್ಯಮಗಳ ಅರಿವು ಓರೆ-ಕೋರೆ ಕುರಿತು ಎರಡು ದಿನಗಳಕಾಲ ಬೆಳಿಗ್ಗೆ ೧೦:೩೦ ರಿಂದ ಸಂಜೆ ೪ ಗಂಟೆಯವರೆಗೆ ಶಿಬಿರ ನಡೆಯಲಿದೆ ಎಂದು ಹೇಳಿದರು.
ಶಿಬಿರ ಮಾ.೧೪ ರಂದು ಬೆಳಿಗ್ಗೆ ೧೦.೩೦ಕ್ಕೆ ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸು ವರು. ರೈತಮುಖಂಡ ಗುರುಶಾಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡುವರು. ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎನ್.ರಾಜು ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್, ಸೆನ್ ಡಿವೈಎಸ್ಪಿ ತಿಪ್ಪೇಸ್ವಾಮಿ, ಕೆಪಿಸಿಸಿ ರಾಜ್ಯ ವಕ್ತಾರ ಎಚ್.ಎಚ್.ದೇವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಭಾಗವಹಿಲಿದ್ದಾರೆ ಎಂದು ತಿಳಿಸಿದರು.
ಬೆಳಿಗ್ಗೆ ೧೧.೩೦ಕ್ಕೆ ಕೃತಕಬುದ್ದಿಮತ್ತೆಯಿಂದ ಉದ್ಯೋಗ ಕಡಿತದ ಸಾಧಕ-ಬಾಧಕ ಮತ್ತು ಪರಿಹಾರೋಪಾಯ ಕುರಿತು ನಂಜೇಶ್ ಬೆಣ್ಣೂರು ವಿಷಯ ಮಂಡಿಸುವರು. ಹಾಸನ ನವ್ಕಿಸ್ ಇಂಜಿನಿಯರಿಂಗ್ ಕಾಲೇಜಿನ ಎಐ ವಿಭಾಗದ ಮುಖ್ಯಸ್ಥ ವಿವಕಾನಂದ ಜೆನ್ಜಿ ಹೊಸ ತಲೆಮಾರಿನ ಪಲ್ಲಟಗಳು, ಅಂತರ್ಜಾಲದ ದುರುಪಯೋಗ-ಪರಿಹಾರ ವಿಷಯ ಕುರಿತು ಮಾತನಾಡುವರು. ದೈನಂದಿನ ಬದುಕಿನಲ್ಲಿ ಎಐ ಬಳಸುವಿಕೆ ಕುರಿತು ನಂಜೇಶ್ ಬೆಣ್ಣೂರು ಮಾತನಾಡುವುದಾಗಿ ಹೇಳಿದರು.
ಮಾ.೧೫ರಂದು ಬೆಳಿಗ್ಗೆ ೧೦.೩೦ಕ್ಕೆ ಬೆಂಗಳೂರು ಪತ್ರಕರ್ತ ಇಸ್ಮಾಯಿಲ್ ನವಮಾಧ್ಯಮಗಳಿಂದ ಅಪರಾಧಗಳು ಹೆಚ್ಚುತ್ತಿರುವ ಹಿನ್ನಲೆ ಮತ್ತು ಪರಿಹಾರ ಕುರಿತು ಮಾತನಾಡುವರು. ೧೧.೩೦ಕ್ಕೆ ಸೈಬರ್ ಕ್ರೈಮ್ ಸಮಕಾಲಿನ ಸವಾಲುಗಳು ಕುರಿತು ಡಿವೈಎಸ್ಪಿ ತಿಪ್ಪೇಸ್ವಾಮಿ ಉಪನ್ಯಾಸ ನೀಡುವರು. ಹಾಸನ ಇಂಜಿಯರಿಂಗ್ ಕಾಲೇಜಿನ ಉಪನ್ಯಾಸಕ ವಿವೇಕಾನಂದ ಅವರು ಪೋಷಕರ ಮೊಬೈಲ್ ಸುರಕ್ಷತಾ ಮಾರ್ಗದರ್ಶಿ ಕುರಿತು ಮಾತನಾಡುವರು ಎಂದರು.
ಸಮಾರೋಪ ಸಮಾರಂಭ ಮಾ.೧೫ರ ಸಂಜೆ ೪ ಗಂಟೆಗೆ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಸಿಡಿಎ ಅಧ್ಯಕ್ಷ ಎಚ್.ಪಿ.ನಂಜೇಗೌಡ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ಜಿಲ್ಲಾಧ್ಯಕ್ಷ ರವೀಶ್ಬಸಪ್ಪ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್, ಪ್ರೆಸ್ಕ್ಲಬ್ ಅಧ್ಯಕ್ಷ ಸಿ.ಡಿ.ಚಂದರೇಗೌಡ ಉಪಸ್ಥಿತ ರಿರುವರು ಎಂದರು.
ಸುದ್ದಿಗೋಷ್ಟಿಯಲ್ಲಿ ಡಿ.ಎಂ.ಮಂಜುನಾಥಸ್ವಾಮಿ, ನಂಜೇಶ್ ಬೆಣ್ಣೂರು, ಗುರುಶಾಂತಪ್ಪ, ನಟರಾಜ್ ಎಸ್.ಕೊಪ್ಪಲು, ವಿಜಯಕುಮಾರ್, ರವಿ ಜಾನ್ಸಾಲೆ ಇದ್ದರು.
New media training camp from March 14
Leave a comment