Home namma chikmagalur chikamagalur ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?
chikamagalurHomeLatest Newsnamma chikmagalur

ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?

Share
Share

ಚಿಕ್ಕಮಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಮೂರು ಬಣವಾಗಿರುವುದು ಸ್ಪಷ್ಟವಾಗಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಣ ,ಇನ್ನೊಂದು ಬಣದ ನಾಯಕತ್ವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇದೆ,ಮತ್ತೊಂದಿಷ್ಟು ಜನ ತಟಸ್ಥವಾಗಿದ್ದಾರೆ.ಇನ್ನೂ ಸ್ವಲ್ಪ ಜನ ಮೂರು ಕೊಟ್ಟರೆ ಮಾವನ ಕಡೆ,ಆರು ಕೊಟ್ಟರೆ ಆತ್ತೆ ಕಡೆ ಎನ್ನುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರದಲ್ಲಿ ಐದು ಜನರು ಕಾಂಗ್ರೆಸ್ ಶಾಸಕರಿದ್ದಾರೆ. ಮನೆಯೊಂದು ಮೂರು ಬಾಗಿಲು ಎನ್ನುವ ದುಸ್ಥಿತಿಯಲ್ಲಿ ಇದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಹೇಳುತ್ತಿದ್ದಾರೆ.

ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ತೀರ ಇಕ್ಕಟ್ಟಿಗೆ ಸಿಲುಕಿದ್ದಾರೆ.ಒಮ್ಮೆ ಡಿ.ಕೆ.ಗೆ ಜೈ ಅಂದರೆ ಮತ್ತೊಮ್ಮೆ ಸಿದ್ದರಾಮಯ್ಯನವರು ಬೇಕು ಎನ್ನುವ ಖಾಯಿಲೆ ಬಂದಿದೆ.
ಡಿ.ಕೆ.ಸೀಟು ಕೊಟ್ಟು ನೋಟು ಕೊಟ್ಟರೆ ಸಿದ್ದರಾಮಯ್ಯನವರ ಅಹಿಂದ ಮತದಾರರು ಗೆಲ್ಲಿಸಿದ್ದಾರೆ.

ಹೀಗಾಗಿ ಎರಡು ಕಡೆ ಸಲ್ಲಲು ಹೋಗಿ ನಗೆಪಾಟಲಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಡಿ.ಕೆ.ಕೈ ಬಿಟ್ಟರೆ ನೆಕ್ಟ್ ತರಕಾರಿ ಹರೀಶ್,ಸಿದ್ದರಾಮಯ್ಯನವರ ಕಡೆಯವರು ಕೈ ಬಿಟ್ಟರೆ ಸೋಲು ಖಚಿತ. ಇದರಿಂದಾಗಿ ತಮ್ಮಯ್ಯ ಎಲ್ಲಾ ಕಡೆ ಸಲ್ಲಲು ಹೋಗಿ ಏಡವಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರ ಹಿಂಬಾಲಕರ ವಿಶ್ಲೇಷಣೆ.

ಮೂಡಿಗೆರೆ ಶಾಸಕಿ ನಯನ ಖುಲ್ಲಾ,ಖುಲ್ಲಾ.ಮೊದಲಿಂದ ಡಿ.ಕೆ.ಶಿವಕುಮಾರ್ ಪರಮ ಹಿಂಬಾಲಕರು. ಕ್ಷೇತ್ರದಲ್ಲಿ ತನ್ನದೇ ಸ್ಟೈಲ್ ಉಳಿಸಿಕೊಂಡು ಕಾಂಗ್ರೆಸ್ ನ ಬಹುತೇಕ ಮುಖಂಡರ ವಿರೋಧ ಕಟ್ಟಿಕೊಂಡು ವಿನಯ್ ಗುರೂಜಿ ಆರ್ಶೀವಾದ ಸಾಕು ಎಂದು ಬಹಿರಂಗವಾಗಿ ಹೇಳುವ ನಯನ ಕೇವಲ ಏಳು ನೂರು ಚಿಲ್ಲರೆ ಮತಗಳಲ್ಲಿ ಗೆಲ್ಲಲು ಅಹಿಂದ ಮತಗಳು ಅದರಲ್ಲೂ ಅಂಬಳೆ ಹೋಬಳಿಯ ಅಹಿಂದ ಮತದಾರರು ಮೂರು ಸಾವಿರ ಲೀಡ್ ಕೊಟ್ಟದ್ದನ್ನು ಮರೆತು ಡಿ.ಕೆ.,ಡಿ.ಕೆ ಎಂಬ ಜಪದಲ್ಲಿ ಲೀನವಾಗಿ ಹೋದಂತೆ ಮುಂದಿನ ಚುನಾವಣೆಯಲ್ಲಿ ಕಳೆದು ಹೋಗುವುದು ಖಚಿತ ಎಂದು ಅವರ ಗೆಲುವಿಗೆ ದುಡಿದವರ ಅನಿಸಿಕೆ.

ಕಡೂರು ಶಾಸಕ ಆನಂದ್ ಪಕ್ಕಪಕ್ಕಾ ಯಾರ ಟೀಮ್ ನಲ್ಲಿ ಇದ್ದಾರೆ ಎಂಬ ಸಂಶಯವಿದೆ.ಮತದಾರರಿಗೊಸ್ಕರ ಸಿದ್ದರಾಮಯ್ಯನವರ ಗುಂಪಿನಲ್ಲಿ ಕಾಣಿಸಿದಂತೆ ಕಂಡರೆ ಒರಿಜಿನಲ್ ಡಿ.ಕೆ.ಬ್ರ್ಯಾಂಡ್ ಎನ್ನುತ್ತಾರೆ .ಇವರು ಕ್ಷೇತ್ರದಲ್ಲಿ ಇವರಿಗಿಂತ ಇವರ ಪಿ.ಎ.ಮಂಜುನಾಥ್ ನ ಆಡಳಿತ ಹೆಚ್ಚು. ಕೊಡುವುದು ತೆಗೆದುಕೊಳ್ಳುವ ವ್ಯವಹಾರದಲ್ಲಿ ಇದ್ದರೆ ಇವರ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಮೊದಲ ಆದ್ಯತೆ ಜೊತೆಗೆ ಇವರ ವಿರೋಧಿಗಳ ಹಣಿಯಲು ಎಲ್ಲಾ ರೀತಿಯ ಮಾಸ್ಟರ್ ಪ್ಲಾನ್ ಬ್ಲೂ ಪ್ರಿಂಟ್ ರೆಡಿಯಿರುವಂತೆ ರಾಜಕೀಯ ವಾಗಿ ಬ್ಲೂ ಪ್ರಿಂಟ್ ತಯಾರಿಸಿಲ್ಲಾ ಆದರೂ ಡಿ.ಕೆ.ಲೆಕ್ಕದಲ್ಲಿ ಇದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಮಾತನಾಡುತ್ತಿದ್ದಾರೆ.

ತರೀಕೆರೆ ಕ್ಷೇತ್ರದಲ್ಲಿ ಶ್ರೀನಿವಾಸ್ ಮತ್ತೊಂದು ತಿರುಪತಿ ತಿಮ್ಮಪ್ಪನ ಹುಂಡಿ ತೆರೆದುಕೊಂಡಿದ್ದು ಹುಂಡಿ ತುಂಬಿಸಲು ಕುಟುಂಬಸ್ಥರು ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ .ರಾಜಕೀಯವಾಗಿ ಸಿದ್ದರಾಮಯ್ಯನವರ ಪರಮ ಶಿಷ್ಯ ಎನ್ನಿಸಿ ಕೊಂಡು ಡಿ.ಕೆ.ಆವಾಜ್ ಗೆ ತತ್ತರಿಸುತ್ತಿದ್ದಾರೆ ಡಿ.ಕೆ.ಮುಖ್ಯ ಮಂತ್ರಿ ಆದರೆ ಶ್ರೀನಿವಾಸ್ ಪರಿಸ್ಥಿತಿ ಕಷ್ಟ .

ಅದಕ್ಕೆ ಬ್ಯಾಲೆನ್ಸ್ ಮಾಡಲೂ ಹೋಗಿ ಸಿಕ್ಕಿ ಕೊಂಡು ಪೇಚಾಡಿದ್ದು ಉಂಟು ಹುಂಡಿ ತುಂಬಿಸುವ ಸಲವಾಗಿ ಡಿಕೆ.ಡಿಕೆ ಎಂದು ಹೇಳಿದರು ಆಶ್ಚರ್ಯವಿಲ್ಲ ರಚನಾತ್ಮಕ ಕೆಲಸಗಳ ಬದಲಿಗೆ ಕ್ಷೇತ್ರದಲ್ಲಿ ಮುಖಂಡರನ್ನು ಬಿಟ್ಟು ಚುನಾವಣೆ ಮಾಡ ಬೇಕೆಂಬ ಮಹದಾಸೆಗೆ ಮತದಾರರು ತಿರುಪತಿ ಯಾತ್ರೆಗೆ ಕಳಿಸ ಬಹುದು. ಡಿ.ಕೆ.ಸಿ.ಎಂ ಆದರೆ ಶ್ರೀನಿವಾಸ್ ಕತೆ ಕಷ್ಟ.

ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡರು ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿರುವುದು ಮೂರನೇ ಬಾರಿ ಗೆಲ್ಲ ಬೇಕು ಎಂಬ ಹಂಬಲದಿಂದ ಡಿ.ಕೆ.ಶಿವಕುಮಾರ್ ಪಕ್ಕ ಬೆಂಬಲಿಗರು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇವರಿಗೆ ಆನೆ ಕಾಟಕ್ಕಿಂತ ಬಿಜೆಪಿಯವರ ಕಾಟ ಹೆಚ್ಚಾಗಿದೆ.ಪೊಗರ್ ದಸ್ತು ಕ್ರೆಡಿಲ್ ಎಂಬ ಬೋರ್ಡ್ ಸಿಕ್ಕಿದೆ.ಕಿವಿ,ಕಣ್ಣು ಮೂಗು ಇಲ್ಲದ ಜಿಲ್ಲಾ ಉಸ್ತುವಾರಿ ಸಚಿವರಾದ ಜಾರ್ಜ್ ರ ಆಪ್ತ ರಾಗಿರುವುದು ಹೈಕಮಾಂಡ್ ಇವರಿಗೆ ಮಣಿ ಹಾಕುವ ನಿರೀಕ್ಷೆಯಲ್ಲಿ ಇದ್ದಾರೆ.

ಡಿ.ಕೆ.ಸಿ.ಎಂ ಆದರೆ ರಾಜೇಗೌಡರು ಮತ್ತಷ್ಟು ರಾಜಕೀಯ ಪ್ರಬಲರಾಗುತ್ತಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಲ್ಲಿ ರಾಜೇಗೌಡ ಮತ್ತು ನಯನ ಡಿ.ಕೆ ಪರವಾದರೆ ಶ್ರೀನಿವಾಸ್ ಮಾತ್ರ ಸಿದ್ದರಾಮಯ್ಯನವರ ಪರ .ತಮ್ಮಯ್ಯ ಎಲ್ಲಿ ಸಲ್ಲ ಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಆನಂದ್ ಎಲ್ಲಿಯಾದರೂ ಸರಿ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ನಲ್ಲಿ ಪಿಸುಗುಡುತ್ತಿದ್ದಾರೆ.

Nayana Out – H.D. Thammaiah in trouble?

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...