Home ತಂದೆಗೆ ತಕ್ಕ ಮಗ ಸಚಿವ ಕೃಷ್ಣ ಬೈರೇಗೌಡ
HomechikamagalurLatest Newsnamma chikmagalur

ತಂದೆಗೆ ತಕ್ಕ ಮಗ ಸಚಿವ ಕೃಷ್ಣ ಬೈರೇಗೌಡ

Share
Share

ಚಿಕ್ಕಮಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ತಂದೆಗೆ ತಕ್ಕ ಮಗ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ.

80 ರ ದಶಕದಲ್ಲಿ ಜನತಾಪಕ್ಷದ ಮುಖಂಡರಾಗಿ ಕೋಲಾರ ಜಿಲ್ಲೆಯ ವೇಮಗಲ್ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಸತತವಾಗಿ ಅಯ್ಕೆಯಾಗುತ್ತಿದ್ದ ಬೈರೇಗೌಡರು ಮಂತ್ರಿಯಾಗಿ ದಕ್ಷತೆಗೆ ಹೆಸರುವಾಸಿಯಾಗಿದ್ದವರು. ಬೈರೇಗೌಡರು ಪ್ರವಾಸ ಮಾಡಿದ ಕಡೆ ಮತ್ತು ಕಛೇರಿಗೆ ಭೇಟಿ ಕೊಟ್ಟ ಕಡೆ ಅಧಿಕಾರಿಗಳು ಮತ್ತು ನೌಕರರಿಗೆ ಚಳಿ ಬಿಡಿಸುತ್ತಿದ್ದರು.ಹೀಗಾಗಿ ಬೈರೇಗೌಡರನ್ನು ಬೆಂಕಿ ಬೈರೇಗೌಡ ಎಂದು ಕರೆಯುತ್ತಿದ್ದರು.

ಬೈರೇಗೌಡರ ಮಗ ಕೃಷ್ಣ ಬೈರೇಗೌಡ ಇಂದು ಕಂದಾಯ ಸಚಿವರಾಗಿ ತಂದೆಯ ಸಾಲಿನಲ್ಲಿ ಸಾಗುತ್ತಿದ್ದಾರೆ.ಕೃಷ್ಣ ಬೈರೇಗೌಡ ಕೂಡ ಕಛೇರಿಗೆ ಭೇಟಿ ಕೊಡುವುದು ಅಲ್ಲಿನ ನ್ಯೂನತೆ ಬಗ್ಗೆ ಕೆಲಸದ ವೈಖರಿ ಯ ಬಗ್ಗೆ ಅಧಿಕಾರಿಗಳಿಗೆ ಬೆಂಡ್ ಎತ್ತುತ್ತಿದ್ದಾರೆ.ಮೀಟಿಂಗ್ ನಲ್ಲಿ ಅಧಿಕಾರಿ ನೌಕರರಿಗೆ ಚಳಿ ಜ್ವರ ಖಚಿತ.

ಕಂದಾಯ ಇಲಾಖೆ ಎಂದರೆ ಕಾಸಿನ ಕಣಜ ಎಂದು ಬಹುತೇಕ ಅಧಿಕಾರಿ ನೌಕರರು ಹಿಂದೆ ಮುಂದೆ ಒಂದೇ ಸಮನೆ ತಿನ್ನುತ್ತಿದ್ದಾರೆ ಎಂಬುದು ಸತ್ಯ.

ಗ್ರಾಮ ಸೇವಕನಿಂದ ತಹಶಿಲ್ದಾರ ಎ,ಸಿ.ಡಿ,ಸಿ ಸೆಕ್ರೆಟರಿ ವರೆಗೆ ಹೆಗ್ಗಿಲ್ಲದೆ ತಿನ್ನಬಹುದಾದ ಇಲಾಖೆ ಸ್ವಲ್ಪವಾದರು ಸ್ವಚ್ಛ ಮಾಡುವ ಕೆಲಸದಲ್ಲಿ ಸಚಿವರು ನಿರತರಾಗಿದ್ದಾರೆ.ಇಂದು ಚಿಕ್ಕಮಗಳೂರಿಗೆ ಬಂದು ಸಭೆ ನಡೆಸಿದ ಕೃಷ್ಣ ಬೈರೇಗೌಡ ಹಿಗ್ಗಮುಗ್ಗ ಬೆವರು ಇಳಿಸಿದ್ದಾರೆ.

ಕೃಷ್ಣ ಬೈರೇಗೌಡ ವಿದೇಶದಲ್ಲಿ ಕೆಲಸದಲ್ಲಿದ್ದವರು ತಂದೆಯ ಸಾವಿನ ನಂತರ ಊರಿಗೆ ಬಂದು ಕೃಷಿ ಕೆಲಸದ ಜೊತೆಗೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು ಆದರೆ ವೇಮಗಲ್ ಕ್ಷೇತ್ರ ರದ್ದಾಗಿದ್ದರಿಂದ ಕಣ್ಣು ಬೆಂಗಳೂರು ಕಡೆ ಬಿತ್ತು ಅದೇ ಬ್ಯಾಟರಾಯನಪುರ ಕ್ಷೇತ್ರದಿಂದ ಸತತ ಮೂರನೇ ಬಾರಿ ಗೆಲುವು ಸಾಧಿಸಿರುವ ಕೃಷ್ಣ ಬೈರೇಗೌಡ ಹಿಂದೆ ಕೂಡ ಸಚಿವರಾಗಿದ್ದರು ಪ್ರಸ್ತುತ ಕಂದಾಯ ಸಚಿವರಾಗಿ ಇಲಾಖೆಗೆ ಘನತೆ ತಂದು ಕೊಡಲು ಹೆಣಗಾಡುತ್ತಿದ್ದಾರೆ.

ಇಲಾಖೆಯಲ್ಲಿ ಹೊಸತನ ತರಲು ಪ್ರಯತ್ನ ನಡೆಸಿದ್ದಾರೆ.ಯಾರ ಒತ್ತಡಕ್ಕೂ ಮಣಿಯುವುದಿಲ್ಲ.ಸರಳರು ಯಾರಿಗೂ ಕಾಫಿ ಕುಡಿಸುವುದಿಲ್ಲ ಅವರು ಕುಡಿಯುವುದಿಲ್ಲ ಮನೆಯಿಂದ ಊಟ ತಂದು ಊಟ ಮಾಡುವಷ್ಟು ಸರಳರು ನೇರ ಮಾತು ,ಮಾತು ಕಮ್ಮಿ ಕೆಲಸ ಜಾಸ್ತಿ ಎಂದು ಕೊಂಡಿದ್ದಾರೆ.ಇದು ರಾಜಕೀಯ ದಲ್ಲಾಳಿಗಳು ರಿಯಲ್ ಎಸ್ಟೇಟ್ ನವರಿಗೆ ನುಂಗಲಾರದ ತುತ್ತಾಗಿದ್ದರೆ ಅಧಿಕಾರಿಗಳು ಬೇರೆ ಇಲಾಖೆಗೆ ಹೋಗಲು ಜಾಗ ಹುಡುಕುತ್ತಿದ್ದಾರೆ.

ಅಕ್ರಮ ಒತ್ತುವರಿ ಮಾಡಿಕೊಂಡವರು ಮತ್ತು ಕಳ್ಳದಾರಿಯಲ್ಲಿ ಸಾಗುವಳಿ ಪತ್ರ ನೀಡಲು ಪ್ಲಾನ್ ಮಾಡಿರುವ ಕೆಲವು ಶಾಸಕರುಗಳು ಪರದಾಡುತ್ತಿದ್ದಾರೆ.ಅಷ್ಟರ ಮಟ್ಟಿಗೆ ಕೃಷ್ಣ ಬೈರೇಗೌಡರ ಸಂಚಲನ ಸೃಷ್ಟಿಸಿದ್ದಾರೆ.

Minister Krishna Byre Gowda is a son worthy of his father.

Share

Leave a comment

Leave a Reply

Your email address will not be published. Required fields are marked *

Don't Miss

ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ಯವಕ ಸಾವು

ಚಿಕ್ಕಮಗಳೂರು: ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ತಲೆ ಬಂಡೆಗೆ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್.ಪುರ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದ...

ಮನ್ ಕಿ ಬಾತ್‌ನಲ್ಲಿ ಚಿಕ್ಕಮಗಳೂರು ರೈತರ ಕೃಷಿ ವೈವಿಧ್ಯತೆಗೆ ಪ್ರಧಾನಿ ಮೋದಿ ಮೆಚ್ಚುಗೆ

ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 137ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ರೈತರ ಕೃಷಿ ವೈವಿಧ್ಯತೆ ಹಾಗೂ ನಾವೀನ್ಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಸಾಂಪ್ರದಾಯಿಕ ಕಾಫಿ...

Related Articles

ನೂತನ ಪಶ್ಚಿಮ ವಲಯ ಡಿಐಜಿ ಆರ್. ಚೇತನ್ ಭೇಟಿ

ಚಿಕ್ಕಮಗಳೂರು: ನೂತನ ಪಶ್ಚಿಮ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕರಾಗಿ (ಡಿಐಜಿ) ಅಧಿಕಾರ ವಹಿಸಿಕೊಂಡಿರುವ ಆರ್....

ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತ

ಚಿಕ್ಕಮಗಳೂರು: ಹಾಫ್ ಹೆಲ್ಮೆಟ್ ಹಾಕುವವರೇ ಎಚ್ಚರ.. ಎಚ್ಚರ.. ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ...

ಕರ್ವಾಲೊ ಚಿತ್ರಕಲಾ ಸ್ಪರ್ಧೆಯಲ್ಲಿ ಹರ್ಷ ಕಾವೇರಿಪುರ ಪ್ರಥಮ

ಕೊಟ್ಟಿಗೆಹಾರ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಅವರ ೮೮ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕರ್ವಾಲೊ ಕೃತಿ...

₹1,281.80 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ

ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗದ ರೈತರ ಬಹುದಿನಗಳ ನಿರೀಕ್ಷೆಯಾಗಿರುವ ₹1,281.80 ಕೋಟಿ ಅಂದಾಜು ವೆಚ್ಚದ ಮಹತ್ವಾಕಾಂಕ್ಷಿ...