Home ಕಡೂರು ತಾಲ್ಲೂಕು ಬರಪೀಡಿತ ಘೋಷಣೆಗೆ ಆಗ್ರಹಿಸಿ ಪಾದಯಾತ್ರೆ ಆರಂಭ
HomeKadurLatest Newsnamma chikmagalur

ಕಡೂರು ತಾಲ್ಲೂಕು ಬರಪೀಡಿತ ಘೋಷಣೆಗೆ ಆಗ್ರಹಿಸಿ ಪಾದಯಾತ್ರೆ ಆರಂಭ

Share
Share

ಕಡೂರು: ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಲು ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ತಾಲ್ಲೂಕಿನ ಕಲ್ಕೆರೆ ಗ್ರಾಮದ ಕರಿಯಮ್ಮ ದೇವಾಲಯದ ಮುಂಭಾಗದಲ್ಲಿ ಶುಕ್ರವಾರ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಕಲ್ಕೆರೆ, ಕುಕ್ಕ ಸಮುದ್ರ ಕೆರೆಗೆ ನೀರು ಹರಿಯುವುದು ನಿಶ್ಚಿತ. ಹೊಸ ಸರ್ಕಾರಕ್ಕೆ ನೂರು ದಿನ ತುಂಬುವುದರೊಳಗಾಗಿ ನೀರು ಈ ಕೆರೆಗಳಿಗೆ ಬರುತ್ತದೆಯೆಂಬ ವಿಶ್ವಾಸ ಆಶಾಭಾವನೆ ನನ್ನದಾಗಿದೆ. ಭಧ್ರಾ ಮೇಲ್ದಂಡೆ 32 ಕೆರೆ ತುಂಬಿಸುವುದರಿಂದ ಸಿಂಗಟಗೆರೆ, ಪಂಚನಹಳ್ಳಿ, ಯಗಟಿ ಹೋಬಳಿಗಳಿಗೆ ಅನುಕೂಲವಾಗುತ್ತದೆ. ಮಧಗದ ಕೆರೆಗೆ ಭಧ್ರಾ ಉಪಕಣಿವೆ ಯೋಜನೆಯಡಿ ನೀರು ಹರಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿರುವುದು ಸಮಾಧಾನಕರ. ಆದರೆ ಈ ಕಾಮಗಾರಿಗೂ ಮುನ್ನ ಘೋಷಣೆಯಾದ ಭಧ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಕುಂಠಿತವಾಗಿರುವುದು ಬೇಸರವಾಗಿದೆ. ಈ ಕಾಮಗಾರಿಗೆ ವೇಗ ದೊರಕಿಸುವುದಕ್ಕೆ ಸರ್ಕಾರ ಆಧ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ 102 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಕಡೂರನ್ನು ಆ ಪಟ್ಟಿಯಿಂದ ಕೈಬಿಟ್ಟಿದೆ. ನಮ್ಮ ರೈತರ ಹಕ್ಕೊತ್ತಾಯವಾಗಿ ತಾಲ್ಲೂಕನ್ನು ಬರಪೀಡಿತ ಎಂದು ಫೋಷಣೆ ಮಾಡಬೇಕೆಂಬ ಒತ್ತಾಯ ಮಾಡುವ ಉದ್ದೇಶದಿಂದ ರೈತರೊಡಗೂಡಿ ತಾಲ್ಲೂಕಿನ ಕಲ್ಕೆರೆ ಯಿಂದ ತಾಲೂಕು ಕೇಂದ್ರಕ್ಕೆ ಪಾದಯಾತ್ರೆ ಮಾಡಲಿದ್ದೇನೆ. ಆಗಸ್ಟ್ 28 ರಂದು ಶುಕ್ರವಾರ ಬೆಳಗ್ಗೆ ಕಲ್ಕೆರೆಯಿಂದ ಆರಂಭಿಸಿ, ತಿಮ್ಲಾಪುರ, ಕಳ್ಳಿ ಹೊಸಹಳ್ಳಿ, ಹುರುಕನಹಳ್ಳಿ, ದೊಡ್ಡ ಬಳ್ಳೇಕೆರೆ, ಪಿ.ಕೋಡಿಹಳ್ಳಿ, ಹಿರೇಗರ್ಜೆ,ಗರ್ಜೆ, ಜಿಮಾದಾಪುರ, ಬಿಳುವಾಲ ತಲುಪಿ ಅಲ್ಲಿ ವಾಸ್ತವ್ಯವಿದ್ದು. ಮಾರನೇ ದಿನ ಶನಿವಾರ ಬಿಳುವಾಲದಿಂದ ಹೊರಟು ಎಂ.ಕೋಡಿಹಳ್ಳಿ, ಮಚ್ಚೇರಿ, ಮಲ್ಲೇಶ್ವರ, ಕಡೂರು ತಲುಪಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕಿನ ಬರ ಪರಿಸ್ಥಿತಿ ಅವಲೋಕಿಸಿದ್ದಾರೆ. ಶಾಸಕರೂ ಸಹ ವಸ್ತುಸ್ಥಿತಿ ವಿವರಿಸಿದ್ದಾರೆ. ಆದರೆ ಕ್ಷೇತ್ರದ ಬಗ್ಗೆ ಇರುವ ಅಸ್ಥೆ ಮತ್ತು ಕರ್ತವ್ಯದ ದೃಷ್ಟಿಯಿಂದ ಈ ಪಾದಯಾತ್ರೆ ಮಾಡಲಿದ್ದೇನೆ. ಯಾವುದೇ ರಾಜಕೀಯ ಉದ್ದೇಶವಿಲ್ಲ. ಕ್ಷೇತ್ರದ ರೈತರ ಹಿತದೃಷ್ಟಿಯಿಂದಷ್ಟೆ ಈ ಪಾದಯಾತ್ರೆ ಎಂದು ಸ್ಷಷ್ಠ ಪಡಿಸಿದರು.

ಜೆ.ಡಿ.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಪ್ರೇಮ್‌ಕುಮಾರ್ ಮಾತನಾಡಿ ಕಡೂರು ಕ್ಷೇತ್ರದ ರೈತರು ಸಹ ಶಾಸಕ ಆನಂದ್ ರವರಿಗೆ ಚುನಾವಣೆಯಲ್ಲಿ ಮತ ಹಾಕಿರುವುದನ್ನು ಮರೆತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ರೈತರ ಒಳಿಗಾಗಿ ಶ್ರಮಿಸಬೇಕು. ಬರದಿಂದ ನಲುಗುತ್ತಿರುವ ರೈತರು ತೋಟಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ. ಸಮಸ್ಯೆ ಬಹಳಷ್ಟು ಇದ್ದರು ಬರ ಪೀಡಿತ ಪಟ್ಟಿಗೆ ಸೇರಿಸದೆ ಜಿಲ್ಲಾ ಉಸ್ತುವಾರಿ ಸಚಿವರು ಕೈಚೆಲ್ಲಿದ್ದಾರೆ ಎಂದರು.

ಕಡೂರು ಪ್ರಶಾಂತ್ ಮಾತನಾಡಿ ಈ ಹೋರಾಟದಲ್ಲಿ ಯಾವುದೇ ರಾಜಕೀಯವಿಲ್ಲ. ನಮ್ಮ ನೀರು ನಮ್ಮ ಹಕ್ಕಿಗಾಗಿ ಮಾಜಿ ಶಾಸಕರು ಹೋರಾಟ ಮಾಡುತ್ತಿದ್ದಾರೆ. ತಾಲ್ಲೂಕಿನ ಜನತೆ ಎಚ್ಚೆತ್ತು ಇಂತಹ ಹೋರಾಟದಲ್ಲಿ ಭಾಗವಹಿಸಿದಾಗ ಮಾತ್ರ ನಾವು ಸರ್ಕಾರವನ್ನು ಎಚ್ಚರಿಸಿ ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದಾಗ ಮಾತ್ರ ನಮ್ಮ ರೈತರನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಗಣೇಶ್, ಮಚ್ಚೇರಿ ಮಂಜು, ಗುಜ್ಜೆನಲ್ಲಿ ಶಂಕ್ರಣ್ಣ, ಗುಡ್ಡೆಹಳ್ಳಿ ವಿನಯ್, ಮಂಜುನಾಥ್, ಚೌಳಹಿರಿಯೂರು ಅಶೋಕ್, ವೈ.ಎಸ್.ರವಿಪ್ರಕಾಶ್, ಹಾಲುಸಿದ್ದಪ್ಪ, ಯತೀಶ್ , ಮಲ್ಲಿಕಾರ್ಜುನ್ ವೈ.ಎಸ್.ವಿ ಅಭಿಮಾನ ಬಳಗದ ನೂರಾರು ಯುವಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು

Kadur taluk started a walk demanding drought declaration

Share

Leave a comment

Leave a Reply

Your email address will not be published. Required fields are marked *

Don't Miss

ಲಾರಿ ಡಿಕ್ಕಿಗೆ ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ಸಾವು

ಅಜ್ಜಂಪುರ: ಕರ್ತವ್ಯಕ್ಕೆ ತೆರಳುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಶುವೈದ್ಯಕೀಯ ಇಲಾಖೆಯ ಅಟೆಂಡರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿಯಾಪುರದ ಜ್ಞಾನ ದೀಪ ಶಾಲೆ...

ವಿದ್ಯುತ್ ಸ್ಪರ್ಶ: ಬೇಲಿ ಕಟಾವು ಮಾಡುತ್ತಿದ್ದ ವಾಚ್‌ಮನ್ ಸಾವು

ತರೀಕೆರೆ: ತೋಟದ ಬೇಲಿ ಕಟಾವು ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಾಚ್‌ಮನ್ ಮೃತಪಟ್ಟಿರುವ ಘಟನೆ ತರೀಕೆರೆ ಪಟ್ಟಣದ ಗಾಳಿಹಳ್ಳಿ ಕ್ರಾಸ್‌ನಲ್ಲಿ ಆ.20ರಂದು ನಡೆದಿದೆ. ಮೃತರನ್ನು ಲಿಂಗದಹಳ್ಳಿ ಕಾವಲ್ ಆರ್.ಸಿ. ಕಾಲೋನಿ...

Related Articles

ಕಾಫಿನಾಡಿನಲ್ಲಿ ಎಚ್1ಎನ್1 ಪ್ರಕರಣ ಏರಿಕೆ: 24 ಮಂದಿಗೆ ಸೋಂಕು ದೃಢ

ಚಿಕ್ಕಮಗಳೂರು:  ಕಾಫಿನಾಡಿನಲ್ಲಿ ಕಳೆದೊಂದು ವಾರದಿಂದ ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜ್ವರ, ನೆಗಡಿ, ಕೆಮ್ಮು ಹಾಗೂ...

ಉಪ ಪೊಲೀಸ್ ಠಾಣೆಗಳ ತೆರೆಯುವಂತೆ ಗೃಹ ಸಚಿವರಿಗೆ ಒತ್ತಾಯ

ಚಿಕ್ಕಮಗಳೂರು:  ಜಿಲ್ಲೆಯ ಕೆಲವು ಕಡೆ ಉಪ ಪೊಲೀಸ್ ಠಾಣೆಗಳನ್ನು ತೆರೆಯುವಂತೆ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್...

ಆಲ್ದೂರಿನಲ್ಲಿ ಟೈಲ್ಸ್ ಮೇಲೆ ಜಾರಿ ಬಿದ್ದ ರೈತ ಸಾವು

ಆಲ್ದೂರು: ಅಡುಗೆ ಮನೆಯ ನೆಲದ ಮೇಲೆ ಬಿದ್ದಿದ್ದ ನೀರನ್ನು ಗಮನಿಸದೆ ಟೈಲ್ಸ್ ಮೇಲೆ ಕಾಲಿಟ್ಟು ಜಾರಿ...

ಕಲ್ಯಾಣನಗರ 5ನೇ ಕ್ರಾಸ್‌ನಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು

ಚಿಕ್ಕಮಗಳೂರು: ಭಜನೆ ಮುಗಿಸಿಕೊಂಡು ಸ್ನೇಹಿತೆಯೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಗೃಹಿಣಿಯೊಬ್ಬರ ಕುತ್ತಿಗೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು...