ಚಿಕ್ಕಮಗಳೂರು: ಬೇಲಿ ದಾಟುವಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಬಲಿಯಾಗಿರುವ ಘಟನೆ ಕಡೂರು ತಾಲೂಕಿನ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಸನ್ನ (43) ಮೃತ ದುರ್ದೈವಿ.
ಒಂದೇ ವಾರದಲ್ಲಿ ಕಡೂರು ತಾಲೂಕಿನಲ್ಲಿ ಎರಡು ದುರಂತ ಸಂಭವಿಸಿದ್ದು ಕಳೆದ ವಾರವಷ್ಟೇ ತಾಲೂಕಿನ ಮರಡಿಹಳ್ಳಿಯಲ್ಲಿ ಹನುಮಂತಪ್ಪ ಎಂಬುವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಾಗ ಗ್ರಾಮಸ್ಥರು ಶವವನ್ನಿಟ್ಟು ಮೆಸ್ಕಾಂ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದರು. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯ ಈಗ ಮತ್ತೊಬ್ಬ ರೈತನನ್ನು ಬಲಿಪಡೆದಿದೆ.
ಖುದ್ದೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಉಸ್ತುವಾರಿ ಜಿಲ್ಲೆಯಲ್ಲೇ ವಾರದ ಅಂತರದಲ್ಲಿ ಇಂತಹ ಎರಡು ಘಟನೆಗಳು ಮರುಕಳಿಸಿರುವುದು ಮೆಸ್ಕಾಂ ಸಿಬ್ಬಂದಿಯ ಘೋರ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.
ಮೃತ ಪ್ರಸನ್ನ ಅವರಿಗೆ ಕೇವಲ 5 ತಿಂಗಳ ಹೆಣ್ಣು ಮಗುವಿದ್ದು, ಮನೆಗೆ ಆಸರೆಯಾಗಿದ್ದ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Farmer dies after touching downed electric wire
Leave a comment