Home Latest News ಸಹಕಾರ ಸಚಿವ ರಾಜಣ್ಣನ ಕಣ್ಣು ? ರೇವಣ್ಣನ ನಿಂಬೆ ಹಣ್ಣು !
Latest NewschikamagalurHomenamma chikmagalur

ಸಹಕಾರ ಸಚಿವ ರಾಜಣ್ಣನ ಕಣ್ಣು ? ರೇವಣ್ಣನ ನಿಂಬೆ ಹಣ್ಣು !

Share
Share

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಸಹಕಾರ ಸಚಿವ ಕೆ.ಎನ್.ರಾಜಣ್ಣರವರಿಗೆ ಭರ್ತಿ 75 ವರ್ಷ. ರಾಜಣ್ಣ ಎಂದರೆ ನೇರ, ನೇರಾ ಸಿಡಿ ಗುಂಡಿನಂತಹ ಮಾತು ಜತೆಗೆ ಗತ್ತು .

ಹಟ ಎಂದರೆ ಹಟ ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಗೌಡರ ವಿರುದ್ಧ ರಣ ಕಹಳೆ ಊದಿ ಸೋಲಿಸಿದ್ದವರು ಈಗಲೂ ತಮ್ಮದೇ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಡಿಚ್ಚಿ ಕೊಡುತ್ತಾ ಇರುತ್ತಾರೆ.

ರಾಜಣ್ಣ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು ರೇವಣ್ಣನ ಆಟ ನಡೆಯದಂತೆ ಬಂದುಬಸ್ತೂ ಮಾಡಿದ್ದಾರೆ.ಯಾರಿಗೂ ಕೇರ್ ಮಾಡದೆ ವಾಕ್ ದಾಳಿ ಮುಂದುವರೆಸಿದ್ದಾರೆ.ಪ್ರಜ್ವಲ್ ರೇವಣ್ಣನ ಸಿ.ಡಿ.ಕೇಸ್ ಗತಿಯ ದಿಕ್ಕು ಬದಲಿಸಿದರೆ ರಾಜಣ್ಣನನ್ನು ಹನಿ ಟ್ರಾಪ್ ಮಾಡಲು ಹೋದವರ ಮುಖಕ್ಕೆ ಹಣಿದು ಕಳುಹಿಸಿ ದೂರು ನೀಡಿದರು ಆಗಿಯೇ ತಣ್ಣಗಾದ ವಿಚಾರ ಮಾತ್ರ ನಿಗೂಢವಾಗಿದೆ.

ರೇವಣ್ಣನ ನಿಂಬೆ ಹಣ್ಣಿನ ಬಗ್ಗೆ ಕೇರ್ ಲೆಸ್ ಆದರೂ ಎಚ್ಚರಿಕೆಯಿಂದ ಇದ್ದವರು ಆದರೆ ಈಗ ಕಣ್ಣ ಮುಂದೆ ಮತ್ತೆ,ಮತ್ತೆ ನಿಂಬೆಹಣ್ಣು ಬರುತ್ತಿರುವುದು ಏಕೆ ?

ರಾಜಣ್ಣ ನಾಸ್ತಿಕ ಕೂಡ ದೇವರು,ಮಾಟ,ಮಂತ್ರದ ನಂಬದವರು ಈಗ ನಂಬುವಂತೆ ಆಗಿರುವುದು ಏಕೆ ?

ರಾಜಣ್ಣ ಹಾಸನ ಜಿಲ್ಲೆಗೆ ಎಂಟ್ರಿ ಕೊಡುವಾಗ ಹತ್ತಾರು ಕಾರುಗಳು, ಹಾರ,ತುರಾಯಿ ಪಟಾಕಿ ಶಬ್ದ ಇರುತ್ತವೆ. ಇತ್ತೀಚೆಗೆ ಭೇಟಿ ನೀಡಿದಾಗ ಕಾರ್ಯಕರ್ತರು ಹಚ್ಚಿದ ಪಟಾಕಿ ಸದ್ದು ಬೆಚ್ಚಿ ಬೀಳುವಂತೆ ಇತ್ತಂತೆ ಇದರಿಂದ ಕಾರು ಬಿಟ್ಟು ಇಳಿಯದ ರಾಜಣ್ಣ ಪಟಾಕಿ ಸಿಡಿತ ನಿಂತ ನಂತರ ಕಾರಿನಿಂದ ಇಳಿಯುವಾಗ ಗನ್ ಮ್ಯಾನ್ ಗಳ ರಕ್ಷಣೆ ನೂರಾರು ಕಾರ್ಯಕರ್ತರ ಪಡೆಯ ಮಧ್ಯೆ ನಿಂತಿರುವಾಗ ತಡವಾಗಿ ಸಿಡಿದ ಪಟಾಕಿಯ ಸಿಡಿ ಕಣ್ಣಿಗೆ ಬಡಿದಿದೆ ಹೌಹಾರಿದ ರಾಜಣ್ಣ ತಕ್ಷಣವೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಆದರೆ ಕಣ್ಣು ಸುಧಾರಣೆ ಆಗಿಲ್ಲ. ಆಗುವಂತೆ ಕೂಡ ಕಾಣುತ್ತಿಲ್ಲ ಎಂದು ಅವರ ಆಪ್ತ ವಲಯದಲ್ಲಿ ಚರ್ಚೆ ಆಗುತ್ತಿದೆ.

ಜೊತೆಗೆ ರೇವಣ್ಣನ ನಿಂಬೆಹಣ್ಣಿನ ಮೇಲೆ ಬಲವಾದ ಸಂಶಯ ಬಂದಿದೆ ನಾಸ್ತಿಕ ರಾಜಣ್ಣ ಕೂಡ ಎಡವಟ್ಟು ಆಗಿದೆ ಎಂದು ಶಪಿಸುತ್ತಾ ನನಗೆ ಹಾಸನ ಜಿಲ್ಲೆಯ ಉಸ್ತುವಾರಿ ಬೇಡ ಎನ್ನುತ್ತಿದ್ದಾರೆ ಎಂದು ಹಾಸನದ ಜನ ಮಾತನಾಡುತ್ತಿದ್ದಾರೆ.

Cooperation Minister Rajan’s eyes? Revanna’s lemon!

Share

Leave a comment

Leave a Reply

Your email address will not be published. Required fields are marked *

Don't Miss

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ಚಿಕ್ಕಮಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ ನ್ಯಾಯಾಲಯವು ಮಹತ್ವದ ಶಿಕ್ಷೆ ಪ್ರಕಟಿಸಿದೆ. ಹಣದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ...

Related Articles

ಮೆಡಿಕಲ್ ಅಂಗಡಿಗೆ ಕನ್ನ : ₹2.66 ಲಕ್ಷ ನಗದು ದೋಚಿ ಪರಾರಿ

ಚಿಕ್ಕಮಗಳೂರು;  ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ತಡರಾತ್ರಿ ನಡೆದ ಕಳ್ಳತನ ಪ್ರಕರಣ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ...

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್...

ಸಾಲ ತೀರಿಸಲಾಗದೆ ರೈತ ಬೆಂಕಿ ಹಚ್ಚಿಕೊಂಡು ಸಾವು

ಕಡೂರು: ಜಮೀನಿನ ಅಭಿವೃದ್ಧಿ ಹಾಗೂ ಬೆಳೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೆ ತೀವ್ರವಾಗಿ ಕೊರಗುತ್ತಿದ್ದ ಕನ್ನೇನಹಳ್ಳಿಯ ರೈತರೊಬ್ಬರು...