ಚಿಕ್ಕಮಗಳೂರು: ನಗರದಲ್ಲಿ ಕಳೆದ ೧೯೬೨ರಲ್ಲಿ ಆರಂಭಗೊಂಡ ತಮ್ಮ ಸಂಸ್ಥೆ ಸಾವಿ ರಾರು ಮಹಿಳೆಯರು, ಮಕ್ಕಳಿಗೆ ಆಶ್ರಯ ನೀಡಿ ತಾತ್ಕಾಲಿಕ ವಸತಿ ಕಲ್ಪಿಸುತ್ತಿದ್ದು, ಆದರೆ ಈಗ ಜಿಲ್ಲಾಧಿ ಕಾರಿಗಳು `ಒನ್ ಸ್ಟಾಪ್ ಸೆಂಟರ್’ ಪ್ರಾರಂಭವಾಗಿರುವುದರಿಂದ ತಮ್ಮ ಸಂಸ್ಥೆಯನ್ನು ಮುಚ್ಚಲು ತಿಳಿಸಿದ್ದಾರೆ. ಆದರೆ ಅದರಿಂದ ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಸಿಬ್ಬಂದಿಗಳು ಸೇರಿ ದಂತೆ ನೊಂದ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂದು ನಗರದ ಕಸ್ತೂರಿಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ನೊಂದು ಬರುವ ಮಹಿಳೆಯರು ಹಾಗು ಹೆಣ್ಣು ಮಕ್ಕಳಿಗೆ ಆಶ್ರಯ ಹಾಗು ರಕ್ಷಣೆ ನೀಡುತ್ತಿದ್ದ ತಮ್ಮ ಸಂಸ್ಥೆಗೆ ಕಳೆದ ೨೦೦೧ರಲ್ಲಿ ಸಾಂತ್ವನ ಕೇಂದ್ರ ಆರಂಭಿ ಸಲು ಸರ್ಕಾರ ಮಂಜೂರಾತಿ ನೀಡಿದ್ದು, ಅಂದಿನಿಂದ ನೊಂದ ಮಹಿಳೆಯರ ಕೌಟುಂಬಿಕ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿ ತಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.
ನಮ್ಮಲ್ಲಿ ಆಶ್ರಯ ಮತ್ತು ರಕ್ಷಣೆ ದೊರೆಯುತ್ತಿರುವುದರಿಂದ ಬೇರೆ ತಾಲೂಕುಗಳಿಂದ ದೂರುಗಳು ದಾಖಲಾಗಿದ್ದು, ಅದನ್ನು ಸಮರ್ಥ ವಾಗಿ ಇತ್ಯರ್ಥಪಡಿಸಲಾಗುತ್ತಿದೆ. ಹೀಗಾಗಿ ಪ್ರತಿ ತಿಂಗಳು ಹತ್ತರಿಂದ ಹದಿನೈದು ಕೌಟುಂಬಿಕ ಸಮಸ್ಯೆಯ ದೂರುಗಳು ದಾಖಲಾಗುತ್ತಿದೆ ಎಂದ ಅವರು, ಆದರೆ ಇತ್ತೀಚೆಗೆ ತಮ್ಮ ಸಂಸ್ಥೆಯುನಿರ್ವಹಿಸುತ್ತಿರುವ ಹೊಣೆ ಗಾರಿಕೆಯ ಮಾಹಿತಿ ತಿಳಿಯದೆ ಸಂಬಂಧಿಸಿದ ಇಲಾಖೆ ಉಪನಿರ್ದೇ ಶಕರೋರ್ವರುನೀಡಿದ ತಪ್ಪು ಮಾಹಿ ತಿಯಿಂದ ತಮ್ಮ ಸಂಸ್ಥೆ ಮುಚ್ಚುವಂತೆ ಸೂಚನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ
ಆದರೆ ಆನಂತರ ಖುದ್ದು ಪರಿಶೀ ಲನೆ ಮಾಡಿದ ಅಧಿಕಾರಿ ನಗರದಲ್ಲಿ ಸಾಂತ್ವನ ಕೇಂದ್ರದ ಅಗತ್ಯವಿದೆ ಎಂದು ಸರ್ಕಾರಕ್ಕೆ ಮರು ಪರಿಶೀ ಲನಾ ವರದಿ ನೀಡಿದ್ದಾರೆ. ಈ ಹಿನ್ನೆ ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ನೊಂದ ಮಹಿಳೆಯರಿಗೆ ನೆರವಾಗಲು ಸರ್ಕಾ ರದ ಯೋಜನೆ ಮುಂದುವರೆಸಲು ಆದೇಶ ನೀಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದ್ದಾರೆ
Comfort Center Cooperative to help distressed women
Leave a comment