ಅಜ್ಜಂಪುರ: ಸಾಹಿತ್ಯ ಪರಿಷತ್ತಿನಲ್ಲಿ ಜೋಷಿಗಳು ಹೆಚ್ಚಾಗುತ್ತಿದ್ದಾರೆ ಎಂಬುದಕ್ಕೆ ಬುರುಡೆ ಮಂಜುನಾಥ್ ಬೇಡ,ಬೇಡಾ ನನಗೆ ಹುಷರಿಲ್ಲಾ ಎಂದು ಪತ್ರ ಬರೆದು ಬೇಡಿದರೂ ಇಲ್ಲ ನೀನೆ ಬೇಕು ಎಂದು ” ಗಂಟು” ಬಿದ್ದಿರುವುದರ ಗುಟ್ಟು ಏನು ಎಂಬ ಪ್ರಶ್ನೆ ಮಾತ್ರ ನಿಗೂಢವಾಗಿದೆ.
ಅಜ್ಜಂಪುರ ಎಂದರೆ ಕಲಾವಿದರ ನಾಡು,ನಾಟಕ,ಸಿನಿಮಾದವರ ತವರೂರು,ಸಂಘಟಕರ ಬೀಡು ಎಂಬುದರ ಜೊತೆಗೆ ಊರಿನ ಕೆಲಸದ ವಿಚಾರ ಬಂದರೆ ಪಕ್ಷ, ಜಾತಿ,ಮತ ಬಿಟ್ಟು ಒಗ್ಗಟ್ಟಾಗಿ ನಿಲ್ಲುತ್ತಾರೆ .ಆದರೆ ಊರಿನ ಬಡ ಜನರಿಗೆ ಮೋಸ ಮಾಡಿದ್ದ ಎನ್ನುವ ಮಂಜುನಾಥ್ ನನ್ನು ಮೆರವಣೆಗೆ ಮಾಡಿ ಕಣ್ಣು ತುಂಬಿ ಕೊಳ್ಳಲು ಹಾತೊರೆಯುತ್ತಿರುವುದು ಮಾತ್ರ ವಿಪರ್ಯಾಸ ಎನ್ನಲಾಗುತ್ತದೆ.
ಜನತಾದಳದ ಮುಖಂಡ ಶಿವಾನಂದ್ ಮತ್ತು ಪತ್ರಕರ್ತ ವೆಂಕಟೇಶ್ ತೀವ್ರವಾಗಿ ವಿರೋಧ ಮಾಡಿದವರು ಮೆತ್ತಗಾಗಿದ್ದಾರೆ ಎಂದರೆ ಮಂಜುನಾಥ್ ನ ಮಹಿಮೆ ಅಷ್ಟೊಂದು ಪ್ರಭಾವ ಇದೆ ಎನ್ನಿಸುತ್ತಿದೆ.ಸ್ವತಹ ಮಂಜುನಾಥ್ ನೇ ನನಗೆ ಕಾಲು ನೋವು ನಾನು ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ಪತ್ರ ಬರೆದು ಬರುವುದಿಲ್ಲ ಎಂದವನಿಗೆ ಮೂರು ದಿನದಲ್ಲಿ ಯಾವ “ಟಾನಿಕ್” ಕುಡಿಸಿರಬಹುದು.
ಲಂಕೇಶ್ ರ ಕಟ್ಟಾ ಅನುಯಾಯಿ ವೆಂಕಟೇಶ್ ಗೆ ಯಾವ ರೀತಿ ಉಗಿಯ ಬೇಕು ಮಾನ ಮರ್ಯಾದೆ ಬಿಟ್ಟು ಇಂತವನ ಹೊತ್ತು ಮೆರೆಯಲು ಹೊರಟಿರುವುದು ನೋಡಿದರೆ ಮುಂದಿನ ಸಲ ಜಿಲ್ಲಾ ಅಧ್ಯಕ್ಷ ಸ್ಥಾನ ಖಚಿತ ಎಂದು ಕಾಣುತ್ತದೆ.ಬಡ ವ್ಯಾಪಾರಿಗಳಿಗೆ ಸ್ವಂತ ಅತ್ತಿಗೆಗೆ ಬತ್ತಿ ಇಟ್ಟ ಮಂಜುನಾಥ್ ಪರ ನಿಂತಿರುವುದು ನೋಡಿದರೆ ಬೌದಿಕ ದಿವಾಳಿತನ ಎದ್ದು ಕಾಣುತ್ತದೆ.
ನ್ಯೂಸ್ ಕಿಂಗ್ ನಲ್ಲಿ ಬುರುಡೆ ಮಂಜುನಾಥನ ಸುದ್ದಿ ಪ್ರಕಟಿಸಲಾಗಿತ್ತು ಇದು ಇಲ್ಲಿನ ಬರಹಗಾರ, ಸಾಹಿತಿಗಳ ,ಸಂಘಟಕರ ಅಭಿಪ್ರಾಯವಾಗಿತ್ತು.ನಡೆಯಲಾರದ ಮಂಜುನಾಥ್ ಎದ್ದು ಕುಳಿತಿರುವುದು ನೋಡಿದರೆ ” ಗಂಟಿ”ನ ಘಾಟಿ ವಾಸನೆ ಬರುತ್ತಿದೆ.ಈ ಬಗ್ಗೆ ಎಸ್.ಐ.ಟಿ ರಚನೆ ಮಾಡಿದರೂ ಧರ್ಮಸ್ಥಳದ ಬುರುಡೆ ಕೇಸ್ ಹಳ್ಳ ಹತ್ತಿದಂತೆ ಮಂಜುನಾಥನ ಸಮ್ಮೇಳನಕ್ಕೆ ಕ್ಲೀನ್ ಚಿಟ್ ಸಿಗುತ್ತದೆ.
ರಾಜ್ಯ ಮಟ್ಟದಲ್ಲಿ ಜೋಷಿ ಪುರಾಣದಂತೆ ಅಜ್ಜಂಪುರ ಸಾಹಿತ್ಯ ಪರಿಷತ್ತು ಸಾಗುತ್ತಿರುವುದು ವಿಪರ್ಯಾಸವೆ ಸರಿ.ಸಾಹಿತ್ಯ ಪರಿಷತ್ತು ನೀಡುತ್ತಿರುವ ಹೊಸ,ಹೊಸ ಪ್ರಶಸ್ತಿಗಳು,ಬಿರುದುಗಳಲ್ಲಿ ಯಾವ,ಯಾವ ಪ್ರಶಸ್ತಿ ಮತ್ತು ಬಿರುದುಗಳು ಪಡೆಯಲು ಹಾತೊರೆದು ಹಾದಿ ರಂಪ,ಬೀದಿ ರಂಪವಾಗಿರುವ ಸಮ್ಮೇಳನಕ್ಕೆ ಮತ್ತು ಸಮ್ಮೇಳನದ ಅಧ್ಯಕ್ಷತೆ ವಹಿಸುವ ಮಂಜುನಾಥ್ ಗೆ ಯಾವ ಬಿರುದು ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿ ಸಮ್ಮೇಳನ ಆಯೋಜಿಸಿದಂತೆ ಕಾಣುತ್ತದೆ. ಬಡವರ ಹಣ ನುಂಗಿದ ಮಂಜುನಾಥ್ ಗೆ ಜೈ, ಜೈ ಎನ್ನುವವರ ಬಗ್ಗೆ ದಿಗಿಲು ಉಂಟಾಗಿದೆ.
A dinner party was called for Burude Manjunath
Leave a comment