Home namma chikmagalur ಅತ್ತು ಕರೆದು ಔತಣಕೂಟ ಬುರುಡೆ ಮಂಜುನಾಥ್ ಗೆ ಪಟ್ಟ
namma chikmagalurajjampuraHome

ಅತ್ತು ಕರೆದು ಔತಣಕೂಟ ಬುರುಡೆ ಮಂಜುನಾಥ್ ಗೆ ಪಟ್ಟ

Share
Share

ಅಜ್ಜಂಪುರ: ಸಾಹಿತ್ಯ ಪರಿಷತ್ತಿನಲ್ಲಿ ಜೋಷಿಗಳು ಹೆಚ್ಚಾಗುತ್ತಿದ್ದಾರೆ ಎಂಬುದಕ್ಕೆ ಬುರುಡೆ ಮಂಜುನಾಥ್ ಬೇಡ,ಬೇಡಾ ನನಗೆ ಹುಷರಿಲ್ಲಾ ಎಂದು ಪತ್ರ ಬರೆದು ಬೇಡಿದರೂ ಇಲ್ಲ ನೀನೆ ಬೇಕು ಎಂದು ” ಗಂಟು” ಬಿದ್ದಿರುವುದರ ಗುಟ್ಟು ಏನು ಎಂಬ ಪ್ರಶ್ನೆ ಮಾತ್ರ ನಿಗೂಢವಾಗಿದೆ.

ಅಜ್ಜಂಪುರ ಎಂದರೆ ಕಲಾವಿದರ ನಾಡು,ನಾಟಕ,ಸಿನಿಮಾದವರ ತವರೂರು,ಸಂಘಟಕರ ಬೀಡು ಎಂಬುದರ ಜೊತೆಗೆ ಊರಿನ ಕೆಲಸದ ವಿಚಾರ ಬಂದರೆ ಪಕ್ಷ, ಜಾತಿ,ಮತ ಬಿಟ್ಟು ಒಗ್ಗಟ್ಟಾಗಿ ನಿಲ್ಲುತ್ತಾರೆ .ಆದರೆ ಊರಿನ ಬಡ ಜನರಿಗೆ ಮೋಸ ಮಾಡಿದ್ದ ಎನ್ನುವ ಮಂಜುನಾಥ್ ನನ್ನು ಮೆರವಣೆಗೆ ಮಾಡಿ ಕಣ್ಣು ತುಂಬಿ ಕೊಳ್ಳಲು ಹಾತೊರೆಯುತ್ತಿರುವುದು ಮಾತ್ರ ವಿಪರ್ಯಾಸ ಎನ್ನಲಾಗುತ್ತದೆ.

ಜನತಾದಳದ ಮುಖಂಡ ಶಿವಾನಂದ್ ಮತ್ತು ಪತ್ರಕರ್ತ ವೆಂಕಟೇಶ್ ತೀವ್ರವಾಗಿ ವಿರೋಧ ಮಾಡಿದವರು ಮೆತ್ತಗಾಗಿದ್ದಾರೆ ಎಂದರೆ ಮಂಜುನಾಥ್ ನ ಮಹಿಮೆ ಅಷ್ಟೊಂದು ಪ್ರಭಾವ ಇದೆ ಎನ್ನಿಸುತ್ತಿದೆ.ಸ್ವತಹ ಮಂಜುನಾಥ್ ನೇ ನನಗೆ ಕಾಲು ನೋವು ನಾನು ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ಪತ್ರ ಬರೆದು ಬರುವುದಿಲ್ಲ ಎಂದವನಿಗೆ ಮೂರು ದಿನದಲ್ಲಿ ಯಾವ “ಟಾನಿಕ್” ಕುಡಿಸಿರಬಹುದು.

ಲಂಕೇಶ್ ರ ಕಟ್ಟಾ ಅನುಯಾಯಿ ವೆಂಕಟೇಶ್ ಗೆ ಯಾವ ರೀತಿ ಉಗಿಯ ಬೇಕು ಮಾನ ಮರ್ಯಾದೆ ಬಿಟ್ಟು ಇಂತವನ ಹೊತ್ತು ಮೆರೆಯಲು ಹೊರಟಿರುವುದು ನೋಡಿದರೆ ಮುಂದಿನ ಸಲ ಜಿಲ್ಲಾ ಅಧ್ಯಕ್ಷ ಸ್ಥಾನ ಖಚಿತ ಎಂದು ಕಾಣುತ್ತದೆ.ಬಡ ವ್ಯಾಪಾರಿಗಳಿಗೆ ಸ್ವಂತ ಅತ್ತಿಗೆಗೆ ಬತ್ತಿ ಇಟ್ಟ ಮಂಜುನಾಥ್ ಪರ ನಿಂತಿರುವುದು ನೋಡಿದರೆ ಬೌದಿಕ ದಿವಾಳಿತನ ಎದ್ದು ಕಾಣುತ್ತದೆ.

ನ್ಯೂಸ್ ಕಿಂಗ್ ನಲ್ಲಿ ಬುರುಡೆ ಮಂಜುನಾಥನ ಸುದ್ದಿ ಪ್ರಕಟಿಸಲಾಗಿತ್ತು ಇದು ಇಲ್ಲಿನ ಬರಹಗಾರ, ಸಾಹಿತಿಗಳ ,ಸಂಘಟಕರ ಅಭಿಪ್ರಾಯವಾಗಿತ್ತು.ನಡೆಯಲಾರದ ಮಂಜುನಾಥ್ ಎದ್ದು ಕುಳಿತಿರುವುದು ನೋಡಿದರೆ ” ಗಂಟಿ”ನ ಘಾಟಿ ವಾಸನೆ ಬರುತ್ತಿದೆ.ಈ ಬಗ್ಗೆ ಎಸ್.ಐ.ಟಿ ರಚನೆ ಮಾಡಿದರೂ ಧರ್ಮಸ್ಥಳದ ಬುರುಡೆ ಕೇಸ್ ಹಳ್ಳ ಹತ್ತಿದಂತೆ ಮಂಜುನಾಥನ ಸಮ್ಮೇಳನಕ್ಕೆ ಕ್ಲೀನ್ ಚಿಟ್ ಸಿಗುತ್ತದೆ.

ರಾಜ್ಯ ಮಟ್ಟದಲ್ಲಿ ಜೋಷಿ ಪುರಾಣದಂತೆ ಅಜ್ಜಂಪುರ ಸಾಹಿತ್ಯ ಪರಿಷತ್ತು ಸಾಗುತ್ತಿರುವುದು ವಿಪರ್ಯಾಸವೆ ಸರಿ.ಸಾಹಿತ್ಯ ಪರಿಷತ್ತು ನೀಡುತ್ತಿರುವ ಹೊಸ,ಹೊಸ ಪ್ರಶಸ್ತಿಗಳು,ಬಿರುದುಗಳಲ್ಲಿ ಯಾವ,ಯಾವ ಪ್ರಶಸ್ತಿ ಮತ್ತು ಬಿರುದುಗಳು ಪಡೆಯಲು ಹಾತೊರೆದು ಹಾದಿ ರಂಪ,ಬೀದಿ ರಂಪವಾಗಿರುವ ಸಮ್ಮೇಳನಕ್ಕೆ ಮತ್ತು ಸಮ್ಮೇಳನದ ಅಧ್ಯಕ್ಷತೆ ವಹಿಸುವ ಮಂಜುನಾಥ್ ಗೆ ಯಾವ ಬಿರುದು ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿ ಸಮ್ಮೇಳನ ಆಯೋಜಿಸಿದಂತೆ ಕಾಣುತ್ತದೆ. ಬಡವರ ಹಣ ನುಂಗಿದ ಮಂಜುನಾಥ್ ಗೆ ಜೈ, ಜೈ ಎನ್ನುವವರ ಬಗ್ಗೆ ದಿಗಿಲು ಉಂಟಾಗಿದೆ.

A dinner party was called for Burude Manjunath

Share

Leave a comment

Leave a Reply

Your email address will not be published. Required fields are marked *

Don't Miss

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ...

ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವುದೇ ಚೈತ್ರೋತ್ಸವದ ಉದ್ದೇಶ

ಚಿಕ್ಕಮಗಳೂರು: ಜಿಲ್ಲೆಯರೈತರು ಮತ್ತು ಬೆಳೆಗಾರರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವುದೇಚೈತ್ರೋತ್ಸವದಉದ್ದೇಶಎಂದುಜಿಲ್ಲಾಧಿಕಾರಿಎಂ.ಎನ್ ನಾಗರಾಜ್ ತಿಳಿಸಿದರು. ಅವರುಇಂದು ನಗರದ ನೇತಾಜಿ ಸುಭಾಷ್‌ಚಂದ್ರಬೋಸ್‌ಜಿಲ್ಲಾಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು...

Related Articles

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ...

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು...

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

ಚಿಕ್ಕಮಗಳೂರು :ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್...