ಚಿಕ್ಕಮಗಳೂರು: ನಾಡಿನಲ್ಲಿ ಶ್ರೀಗಂಧ ಮರಗಳ ರಕ್ಷಣೆ ಮತ್ತು ನಗರವನ್ನು ಪ್ಲಾಸ್ಟಿಕ್ ಮು ಕ್ತಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲಾ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಬೇಲೂರು ರಸ್ತೆ ಸಮೀಪ ಮುಖಂಡರುಗಳು ಮೌನ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ|| ಕೆ.ಸುಂದರಗೌಡ ಕರ್ನಾಟಕ ರಾಜ್ಯ ಶ್ರೀಗಂಧದ ಬೀಡಾಗಿತ್ತು. ಯಥೆಚ್ಚವಾಗಿ ಬೆಳೆಯುತ್ತಿದ್ದ ಶ್ರೀಗಂಧವು ಇಂದು ಮರವಿಲ್ಲದೇ ಬರಡು ಭೂಮಿಯಾಗುತ್ತಿದೆ. ರೈತರು ಜೀವನಕ್ಕೆ ಆಸರೆಯಾಗಿ ಬೆಳೆದಿರುವ ಶ್ರೀಗಂಧ ಮರವನ್ನು ಕಳ್ಳರ ಹಾವಳಿಯಿ ಂದ ನಲುವಂತಾಗುತ್ತಿದೆ ಎಂದರು.
ಕೃಷಿ ಚಟುವಟಿಕೆ ಜೊತೆಗೆ ರೈತರು ಉಪ ಬೆಳೆಯಾಗಿ ಶ್ರೀಗಂಧ ಬೆಳೆಯುತ್ತಿದ್ದರು. ಅನೇಕ ವರ್ಷಗಳಿ ಂದ ಪೋಷಿಸಿದ ಮರವನ್ನು ರಾತ್ರೋರಾತ್ರಿ ಕಡಿದು ಸಾಗಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಅರ ಣ್ಯ ಇಲಾಖೆ ರೈತರ ಬೆಳೆದಿರುವ ಬೆಳೆಗೆ ರಕ್ಷಣೆ ಒದಗಿಸದಿದ್ದಲ್ಲಿ ಮುಂದೆ ಶ್ರೀಗಂಧ ಮರವು ನಶಿಸುವ ಕಾಲ ಸನ್ನಿಹಿತವಾಗಲಿದೆ ಎಂದು ತಿಳಿಸಿದರು.
ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಶ್ರೀಗಂಧದ ಕೃಷ್ಣೇಗೌಡ ಮಾತನಾಡಿ ರೈತರು ಮತ್ತು ಬೆಳೆಗಾರರಿಗೆ ಬದುಕಿಗೆ ಆಸರೆಯಾದ ಶ್ರೀಗಂಧ ಬೆಳೆ ರಕ್ಷಣೆಗೆ ಅನೇಕ ವರ್ಷಗಳಿಂದ ಅಧಿಕಾರಿಗಳಿಗೆ ಮನ ವಿ ಸಲ್ಲಿಸಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಪೂರ್ವಿಕರು ಬಳುವಳಿಯಾಗಿ ಉಳಿಸಿಕೊಟ್ಟ ಶ್ರೀಗಂಧ ಬೆಳೆ ಇಂದು ಕದೀಮರ ಪಾಲಾಗುತ್ತಿದೆ ಎಂದು ಹೇಳಿದರು.
ಕಾಡಿನ ವನ್ಯಮೃಗಗಳು ನಾಡಿನತ್ತ ಧಾವಿಸಲು ಅರಣ್ಯದಲ್ಲಿ ಆಹಾರದ ಕೊರತೆ ಹಾಗೂ ಕಾಡುಪ್ರಾಣಿ ಗಳ ಹತ್ಯೆಯೇ ನೇರ ಕಾರಣವಾಗಿದೆ. ಮಾನವ ದುರಾಸೆಗೆ ಪಕೃತಿಯನ್ನು ಹಾಳು ಮಾಡುವುದು ಸರಿಯಲ್ಲ. ಇತ್ತೀಚೆಗೆ ಕಾಡಾನೆಗಳ ಹಿಂಡು ನಗರ ಸಮೀಪದಲ್ಲೇ ಸಂಚರಿಸಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದು ಈ ಬಗ್ಗೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದರು.
ಶ್ರೀಗಂಧ ಬೆಳೆಗಾರ ವಿಶುಕುಮಾರ್ ಮಾತನಾಡಿ ರೈತರು ಶ್ರೀಗಂಧ ಮರಗಳ ಮಾರಾಟದಿಂದ ಸರ್ಕಾ ರಕ್ಕೆ ಶೇ.೫೫ ರಷ್ಟು ತೆರಿಗೆ ರೂಪದಲ್ಲಿ ನೀಡಲಾಗುವುದು. ಹೀಗಾಗಿ ಸರ್ಕಾರವು ಶ್ರೀಗಂಧ ಬೆಳೆಗೆ ಪ್ರೊತ್ಸಾಹ ನೀಡಬೇಕು. ಅಲ್ಲದೇ ಬೆಳೆಗಾರರಿಗೆ ಉಚಿತ ಗನ್ ತರಬೇತಿ, ತೋಟಗಳಿಗೆ ಸಿಸಿಟಿವಿ ಸೌಲಭ್ಯ ಕಲ್ಪಿಸಿಕೊಡ ಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ವಕ್ತಾರ ಹುಣಸೇಮಕ್ಕಿ ಲ ಕ್ಷ್ಮಣ್, ಮುಖಂಡರಾದ ತರೀಕೆರೆ ಲಿಂಗರಾಜ್, ಮರಬೈಲು ಜಗದೀಶ್ ಉಪಸ್ಥಿತರಿದ್ದರು.
Silent protest demanding protection of sandalwood trees and plastic-free environment
Leave a comment