ತರೀಕೆರೆ: ಸಂವಿಧಾನ ಸಾರ್ವಜನಿಕರು ಆರೋಗ್ಯಕರವಾಗಿ ಪ್ರತಿಭಟಿಸಲು ಅವಕಾಶ ಕಲ್ಪಿಸಿದೆ. ಆದರೆ ಅದನ್ನು ದುರ್ಬಳಕೆ ಮಾಡಿಕೊಂಡು ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಯವರು ನಾಗರೀಕ ವೇದಿಕೆ ಅಡಿಯಲ್ಲಿ ಶಾಸಕ ಜಿ.ಎಚ್. ಶ್ರೀನಿವಾಸ್ ವಿರುದ್ಧ ಪ್ರತಿಭಟಿಸಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಿದ್ದು, ಇದನ್ನು ಕಾಂಗ್ರೇಸ್ ಖಂಡಿಸುತ್ತದೆ ಎಂದು ತರೀಕೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಚ್.ಯು. ಫಾರೂಕ್ ಹೇಳಿದರು
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಮಾಜಿ ಶಾಸಕ ಡಿ.ಎಸ್. ಸುರೇಶ್ ರವರು ಹತ್ತು ವ? ಶಾಸಕರಾಗಿದ್ದರು. ಜಿ.ಎಚ್. ಶ್ರೀನಿವಾಸ್ ಶಾಸಕರಾಗಿ ೮ ವ?ವಾಗಿದೆ. ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಆಗಬಾರದು. ಜನರಿಗೆ ಸತ್ಯಾಸತ್ಯತೆ ತಿಳಿಯಲಿ. ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಯಾರ ಕಾಲದಲ್ಲಿ ಹೆಚ್ಚು ಆಗಿವೆ ಎಂಬುದಕ್ಕೆ ಬಹಿರಂಗ ಚರ್ಚೆಗೆ ಬರಲಿ. ಅವರೇ ಸ್ಥಳ ನಿಗಧಿ ಮಾಡಲಿ ಎಂದು ಸವಾಲೆಸೆದರು.
ಪಟ್ಟಣದ ಸೋಮೇಶ್ವರ ಬಡಾವಣೆಯಲ್ಲಿ ಸರ್ಕಾರದಿಂದ ರೂ. ೩.೯೭ ಕೋಟಿ ಅನುದಾನದಲ್ಲಿ ಮೌಲಾನ ಅಜಾದ್ ಮಾದರಿ ಶಾಲೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಶೋಕ್ ಎಂಬುವರು ಇದರ ಗುತ್ತಿಗೆದಾರ. ಕಾಮಗಾರಿ ಸ್ಥಳಕ್ಕೆ ಬಿಜೆಪಿ ಮುಖಂಡರೊಬ್ಬರು ಹೋಗಿ ಕಳಪೆ ಕಾಮಗಾರಿಯಾಗಿತ್ತಿದೆ ಎಂದು ಆರೋಪಿಸಿ ಕೆಲಸ ನಿಲ್ಲಿಸಲು ಗಲಾಟೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಗುತ್ತಿಗೆದಾರರು ಪೊಲೀಸ್ ಮೊರೆ ಹೋಗಿರಬಹುದು. ಆಗ ಪೋಲೀಸ್ ಸಿಬ್ಬಂಧಿ ಬಂದಿರಬಹುದು. ಆದರೆ ಈ ವಿಚಾರದಲ್ಲಿ ಶಾಸಕರಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದರು.
ಕಾಂಗ್ರೇಸ್ ನಗರಾಧ್ಯಕ್ಷ ಪ್ರಕಾಶ್ ವರ್ಮಾ ಮಾತನಾಡಿ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್. ರಮೇಶ್ ರವರು ಶಾಸಕರು ಮತ್ತು ಅವರ ಪತ್ನಿ ಹಾಗೂ ಮಗಳ ಬಗ್ಗೆ ಬಹಿರಂಗವಾಗಿ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಇನ್ನೊಮ್ಮೆ ಈ ರೀತಿ ಮರುಕಳಿಸಿದರೆ ಪರಿಸ್ಥಿತಿ ಸರಿ ಇರುವುದಿಲ್ಲ ಎಂದು ಹೇಳಿದರು.
ಈ ಸಂದರಭದಲ್ಲಿ ಪುರಸಭಾಧ್ಯಕ್ಷ ವಸಂತಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠನ ಸಮಿತಿ ತಾಲ್ಲೂಕು ಅಧ್ಯಕ್ಷೆ ಹೇಮಲತಾ ರೇವಣ್ಣ, ಮುಖಂಡರಾದ ಎಚ್.ಎನ್. ಮಂಜುನಾಥ್, ಪರ್ವೀನ್ ತಾಜ್, ಸಿರಾಜ್, ಗಿರೀಶ್, ಟಿ.ಆರ್. ಶ್ರೀಧರ್, ಟಿ.ಎನ್. ಜಗದೀಶ್, ಇ?ದ್, ಆದಿಲ್ ಪಾಶ, ಪರಶುರಾಮ್, ವೀರಮಣಿ ಮೊದಲಾದವರು ಭಾಗವಹಿಸಿದ್ದರು.
Protest condemned by civic forum
Leave a comment