Home namma chikmagalur chikamagalur ಅಫ್ ರೇಟ್-ಚೀಫ್ ರೇಟ್ ಅಜ್ಜಂಪುರದಲ್ಲಿ ವಂಚಕರು ಜಾಲ
chikamagalurHomeLatest Newsnamma chikmagalur

ಅಫ್ ರೇಟ್-ಚೀಫ್ ರೇಟ್ ಅಜ್ಜಂಪುರದಲ್ಲಿ ವಂಚಕರು ಜಾಲ

Share
Share

ಅಜ್ಜಂಪುರ: ಅಫ್ ರೇಟ್ ಚೀಫ್ ರೇಟ್ ಎಂದು ಜನರನ್ನು ನಂಬಿಸಿ ವಂಚನೆ ಮಾಡುವವರು ಅಂಗಡಿ ತೆರೆದು ಕುಳುತ್ತಿದ್ದಾರೆ ಎಂದು ಹೇಳುತ್ತಲೇ ಖರೀದಿಗೆ ಮುಂದಾಗಿರುವುದು ತಿಳಿದುಬಂದಿದೆ.

ಅಜ್ಜಂಪುರದ ಶಿವಾನಂದ ಆಶ್ರಮದ ಮುಂಭಾಗದ ರಸ್ತೆಯಲ್ಲಿ ಎಸ್.ಆರ್.ಎಂಬ ಅಂಗಡಿ ಪ್ರಾರಂಭಿಸಿ ಮುಂಗಡವಾಗಿ ಹಣ ಪಡೆದು ಚೀಟಿ ನೀಡಿ ಜನರನ್ನು ಗುಂಡಿಗೆ ಬೀಳಿಸುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯಲ್ಲಿ ಹೊಸದುರ್ಗದಲ್ಲಿ ಅಂಗಡಿ ತೆರೆದು ಜನರಿಗೆ ಎಳ್ಳು ನೀರು ಬಿಟ್ಟು ರಾತ್ರೋರಾತ್ರಿ ಹಣ ದೋಚಿಕೊಂಡು ಓಡಿ ಹೋಗಿರುವ ಘಟನೆ ಕಣ್ಣು ಮುಂದಿರುವಾಗ ಜನ ಮರೂಳೋ ಜಾತ್ರೆ ಮರೂಳೋ ಎಂಬ ಗಾದೆ ನೆನಪಾಗುತ್ತದೆ.

ಎಸ್.ಆರ್.ಟ್ರೇಡರ್ಸ್ ಗೆ ಹಣ ಕಟ್ಟಿ ಕೈ,ಕೈ ಹಿಸುಕಿಕೊಳ್ಳುತ್ತಿರುವ ಜನರ ಮಧ್ಯೆ ಪೊಲೀಸರು ಆತನ ಜಾಲ ಶೋಧಿಸ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಹದಿನೈದು ದಿನಗಳಿಂದ ವಂಚನೆ ಮಾಡುತ್ತಿದ್ದ ಅಸಾಮಿ 150 ಕ್ಕೂ ಹೆಚ್ಚು ಜನರಿಗೆ ಟೋಪಿ ಹಾಕಿ ಲಕ್ಷಂತರ ಹಣ ದೋಚಿದ್ದಾರೆ ಎನ್ನಲಾಗಿದೆ.

ಕಳೆದ ಎರಡು ದಿನದ ಹಿಂದೆ ರಾತ್ರೋರಾತ್ರಿ ಪರಾರಿಯಾಗಿರುವ ವಂಚಕರಿಗೆ ಮೊಬೈಲ್ ಕರೆ ಮಾಡಿದರೆ ಸದ್ಯಕ್ಕೆ ಸ್ವಿಚ್ ಅಫ್ ಎಂಬ ಮೆಸೇಜ್ ಬರುತ್ತಿದ್ದು ಪೋಲಿಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.ಕೊಟ್ಟವ ಕೋಡಂಗಿ ಇಸುಕೊಂಡವ ವೀರಭದ್ರ ಎನ್ನ ಬೇಕಾಗಿದೆ.

ಜನ ಮತ್ತೆ,ಮತ್ತೆ ಇಂತಹ ಚೀಫ್ ಗಿರಾಕಿಗಳ ಕೈಗೆ ಸಿಕ್ಕಿ ಕೊಳ್ಳುವುದು ನಡೆದಿದೆ ನಡೆಯುತ್ತಲೇ ಇವೆ.ಜನ ಎಚ್ಚರಿಕೆವಹಿಸುವುದರ ಜೊತೆಗೆ ಪೊಲೀಸರು ಗಮನ ಹರಿಸಿದರೆ ಅನಾಹುತ ತಪ್ಪಿಸಬಹುದು.

Off-rate-Chief Rate Ajjampura is a network of fraudsters

Share

Leave a comment

Leave a Reply

Your email address will not be published. Required fields are marked *

Don't Miss

ಲೋಕಾಯುಕ್ತ ಬಲೆಗೆ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ

ಕಡೂರು : ಸೈಟ್ ಗೆ ಎನ್.ಒ.ಸಿ (NOC) ನೀಡಲು ಲಂಚದ ಬೇಡಿಕೆಯಿಟ್ಟಿದ್ದ ಕಡೂರು ತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಿಮ್ಮಶೆಟ್ಟಿ ಎಂಬುವವರಿಗೆ ಸೇರಿದ...

ಕಳಪೆ ಕಾಮಗಾರಿ ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ

ಚಿಕ್ಕಮಗಳೂರು: ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಕಾಲುವೆಯ (ಚಾನಲ್) ಕಳಪೆ ಕಾಮಗಾರಿಯನ್ನು ತಡೆಗಟ್ಟುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ...

Related Articles

ಶಾಸಕ ರಾಜೇಗೌಡರ ಕಣ್ಣೀರು ಕಾಂಗ್ರೆಸ್ ನವರ ಆಕ್ರೋಶ-ಬಿ.ಜೆ.ಪಿಯ ತಲ್ಲಣ

ಶೃಂಗೇರಿ: ಶೃಂಗೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಶಾಸಕ ರಾಜೇಗೌಡರ ವಿರುದ್ಧ ಬಿಜೆಪಿ...

ದಲಿತ ಸಂಘಟನೆಗಳ ಒಕ್ಕೂಟದ ವಿಭಿನ್ನ ಹೋರಾಟ

ಚಿಕ್ಕಮಗಳೂರು : ನಗರ ಸಮೀಪದ ಗೌಡನಹಳ್ಳಿ ವಾಸಿ ಮಂಜುನಾಥ್ ಯಾನೆ ಹೇಮಂತ್ ಎಂಬುವವರಿಗೆ ಸೇರಿದ ಜೆ.ಸಿ.ಬಿ...

ಅರವಿಂದ್ ಕೇಜ್ರವಾಲ್ ದೋಷಮುಕ್ತ ಪಕ್ಷಕ್ಕೆ ಸಂದ ಜಯ

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಪಿತೂರಿಯಿಂದ ದೆಹಲಿಯ ಅಬಕಾರಿ ಹಗರಣದಲ್ಲಿ ಸಿಲುಕಿಸಲಾಗಿದ್ದ ಅರವಿಂದ್ ಕೇಜ್ರವಾಲ್ ಮತ್ತು...

ಬಿಜೆಪಿ ಟಿಕೆಟ್ ಭ್ರಮೆಯಿಂದ ವೆಂಕಟೇಶ್ ಹೊರಬರಲಿ

ಚಿಕ್ಕಮಗಳೂರು : ಶಾಸಕ ಹೆಚ್.ಡಿ ತಮ್ಮಯ್ಯನವರನ್ನು ಪ್ರತಿ ನಿತ್ಯ ವಿರೋಧಿಸಿದರೆ ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ಬಿಜೆಪಿ...