ಚಿಕ್ಕಮಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಮೂರು ಬಣವಾಗಿರುವುದು ಸ್ಪಷ್ಟವಾಗಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಣ ,ಇನ್ನೊಂದು ಬಣದ ನಾಯಕತ್ವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇದೆ,ಮತ್ತೊಂದಿಷ್ಟು ಜನ ತಟಸ್ಥವಾಗಿದ್ದಾರೆ.ಇನ್ನೂ ಸ್ವಲ್ಪ ಜನ ಮೂರು ಕೊಟ್ಟರೆ ಮಾವನ ಕಡೆ,ಆರು ಕೊಟ್ಟರೆ ಆತ್ತೆ ಕಡೆ ಎನ್ನುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರದಲ್ಲಿ ಐದು ಜನರು ಕಾಂಗ್ರೆಸ್ ಶಾಸಕರಿದ್ದಾರೆ. ಮನೆಯೊಂದು ಮೂರು ಬಾಗಿಲು ಎನ್ನುವ ದುಸ್ಥಿತಿಯಲ್ಲಿ ಇದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಹೇಳುತ್ತಿದ್ದಾರೆ.
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ತೀರ ಇಕ್ಕಟ್ಟಿಗೆ ಸಿಲುಕಿದ್ದಾರೆ.ಒಮ್ಮೆ ಡಿ.ಕೆ.ಗೆ ಜೈ ಅಂದರೆ ಮತ್ತೊಮ್ಮೆ ಸಿದ್ದರಾಮಯ್ಯನವರು ಬೇಕು ಎನ್ನುವ ಖಾಯಿಲೆ ಬಂದಿದೆ.
ಡಿ.ಕೆ.ಸೀಟು ಕೊಟ್ಟು ನೋಟು ಕೊಟ್ಟರೆ ಸಿದ್ದರಾಮಯ್ಯನವರ ಅಹಿಂದ ಮತದಾರರು ಗೆಲ್ಲಿಸಿದ್ದಾರೆ.
ಹೀಗಾಗಿ ಎರಡು ಕಡೆ ಸಲ್ಲಲು ಹೋಗಿ ನಗೆಪಾಟಲಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಡಿ.ಕೆ.ಕೈ ಬಿಟ್ಟರೆ ನೆಕ್ಟ್ ತರಕಾರಿ ಹರೀಶ್,ಸಿದ್ದರಾಮಯ್ಯನವರ ಕಡೆಯವರು ಕೈ ಬಿಟ್ಟರೆ ಸೋಲು ಖಚಿತ. ಇದರಿಂದಾಗಿ ತಮ್ಮಯ್ಯ ಎಲ್ಲಾ ಕಡೆ ಸಲ್ಲಲು ಹೋಗಿ ಏಡವಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರ ಹಿಂಬಾಲಕರ ವಿಶ್ಲೇಷಣೆ.
ಮೂಡಿಗೆರೆ ಶಾಸಕಿ ನಯನ ಖುಲ್ಲಾ,ಖುಲ್ಲಾ.ಮೊದಲಿಂದ ಡಿ.ಕೆ.ಶಿವಕುಮಾರ್ ಪರಮ ಹಿಂಬಾಲಕರು. ಕ್ಷೇತ್ರದಲ್ಲಿ ತನ್ನದೇ ಸ್ಟೈಲ್ ಉಳಿಸಿಕೊಂಡು ಕಾಂಗ್ರೆಸ್ ನ ಬಹುತೇಕ ಮುಖಂಡರ ವಿರೋಧ ಕಟ್ಟಿಕೊಂಡು ವಿನಯ್ ಗುರೂಜಿ ಆರ್ಶೀವಾದ ಸಾಕು ಎಂದು ಬಹಿರಂಗವಾಗಿ ಹೇಳುವ ನಯನ ಕೇವಲ ಏಳು ನೂರು ಚಿಲ್ಲರೆ ಮತಗಳಲ್ಲಿ ಗೆಲ್ಲಲು ಅಹಿಂದ ಮತಗಳು ಅದರಲ್ಲೂ ಅಂಬಳೆ ಹೋಬಳಿಯ ಅಹಿಂದ ಮತದಾರರು ಮೂರು ಸಾವಿರ ಲೀಡ್ ಕೊಟ್ಟದ್ದನ್ನು ಮರೆತು ಡಿ.ಕೆ.,ಡಿ.ಕೆ ಎಂಬ ಜಪದಲ್ಲಿ ಲೀನವಾಗಿ ಹೋದಂತೆ ಮುಂದಿನ ಚುನಾವಣೆಯಲ್ಲಿ ಕಳೆದು ಹೋಗುವುದು ಖಚಿತ ಎಂದು ಅವರ ಗೆಲುವಿಗೆ ದುಡಿದವರ ಅನಿಸಿಕೆ.
ಕಡೂರು ಶಾಸಕ ಆನಂದ್ ಪಕ್ಕಪಕ್ಕಾ ಯಾರ ಟೀಮ್ ನಲ್ಲಿ ಇದ್ದಾರೆ ಎಂಬ ಸಂಶಯವಿದೆ.ಮತದಾರರಿಗೊಸ್ಕರ ಸಿದ್ದರಾಮಯ್ಯನವರ ಗುಂಪಿನಲ್ಲಿ ಕಾಣಿಸಿದಂತೆ ಕಂಡರೆ ಒರಿಜಿನಲ್ ಡಿ.ಕೆ.ಬ್ರ್ಯಾಂಡ್ ಎನ್ನುತ್ತಾರೆ .ಇವರು ಕ್ಷೇತ್ರದಲ್ಲಿ ಇವರಿಗಿಂತ ಇವರ ಪಿ.ಎ.ಮಂಜುನಾಥ್ ನ ಆಡಳಿತ ಹೆಚ್ಚು. ಕೊಡುವುದು ತೆಗೆದುಕೊಳ್ಳುವ ವ್ಯವಹಾರದಲ್ಲಿ ಇದ್ದರೆ ಇವರ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಮೊದಲ ಆದ್ಯತೆ ಜೊತೆಗೆ ಇವರ ವಿರೋಧಿಗಳ ಹಣಿಯಲು ಎಲ್ಲಾ ರೀತಿಯ ಮಾಸ್ಟರ್ ಪ್ಲಾನ್ ಬ್ಲೂ ಪ್ರಿಂಟ್ ರೆಡಿಯಿರುವಂತೆ ರಾಜಕೀಯ ವಾಗಿ ಬ್ಲೂ ಪ್ರಿಂಟ್ ತಯಾರಿಸಿಲ್ಲಾ ಆದರೂ ಡಿ.ಕೆ.ಲೆಕ್ಕದಲ್ಲಿ ಇದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಮಾತನಾಡುತ್ತಿದ್ದಾರೆ.
ತರೀಕೆರೆ ಕ್ಷೇತ್ರದಲ್ಲಿ ಶ್ರೀನಿವಾಸ್ ಮತ್ತೊಂದು ತಿರುಪತಿ ತಿಮ್ಮಪ್ಪನ ಹುಂಡಿ ತೆರೆದುಕೊಂಡಿದ್ದು ಹುಂಡಿ ತುಂಬಿಸಲು ಕುಟುಂಬಸ್ಥರು ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ .ರಾಜಕೀಯವಾಗಿ ಸಿದ್ದರಾಮಯ್ಯನವರ ಪರಮ ಶಿಷ್ಯ ಎನ್ನಿಸಿ ಕೊಂಡು ಡಿ.ಕೆ.ಆವಾಜ್ ಗೆ ತತ್ತರಿಸುತ್ತಿದ್ದಾರೆ ಡಿ.ಕೆ.ಮುಖ್ಯ ಮಂತ್ರಿ ಆದರೆ ಶ್ರೀನಿವಾಸ್ ಪರಿಸ್ಥಿತಿ ಕಷ್ಟ .
ಅದಕ್ಕೆ ಬ್ಯಾಲೆನ್ಸ್ ಮಾಡಲೂ ಹೋಗಿ ಸಿಕ್ಕಿ ಕೊಂಡು ಪೇಚಾಡಿದ್ದು ಉಂಟು ಹುಂಡಿ ತುಂಬಿಸುವ ಸಲವಾಗಿ ಡಿಕೆ.ಡಿಕೆ ಎಂದು ಹೇಳಿದರು ಆಶ್ಚರ್ಯವಿಲ್ಲ ರಚನಾತ್ಮಕ ಕೆಲಸಗಳ ಬದಲಿಗೆ ಕ್ಷೇತ್ರದಲ್ಲಿ ಮುಖಂಡರನ್ನು ಬಿಟ್ಟು ಚುನಾವಣೆ ಮಾಡ ಬೇಕೆಂಬ ಮಹದಾಸೆಗೆ ಮತದಾರರು ತಿರುಪತಿ ಯಾತ್ರೆಗೆ ಕಳಿಸ ಬಹುದು. ಡಿ.ಕೆ.ಸಿ.ಎಂ ಆದರೆ ಶ್ರೀನಿವಾಸ್ ಕತೆ ಕಷ್ಟ.
ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡರು ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿರುವುದು ಮೂರನೇ ಬಾರಿ ಗೆಲ್ಲ ಬೇಕು ಎಂಬ ಹಂಬಲದಿಂದ ಡಿ.ಕೆ.ಶಿವಕುಮಾರ್ ಪಕ್ಕ ಬೆಂಬಲಿಗರು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇವರಿಗೆ ಆನೆ ಕಾಟಕ್ಕಿಂತ ಬಿಜೆಪಿಯವರ ಕಾಟ ಹೆಚ್ಚಾಗಿದೆ.ಪೊಗರ್ ದಸ್ತು ಕ್ರೆಡಿಲ್ ಎಂಬ ಬೋರ್ಡ್ ಸಿಕ್ಕಿದೆ.ಕಿವಿ,ಕಣ್ಣು ಮೂಗು ಇಲ್ಲದ ಜಿಲ್ಲಾ ಉಸ್ತುವಾರಿ ಸಚಿವರಾದ ಜಾರ್ಜ್ ರ ಆಪ್ತ ರಾಗಿರುವುದು ಹೈಕಮಾಂಡ್ ಇವರಿಗೆ ಮಣಿ ಹಾಕುವ ನಿರೀಕ್ಷೆಯಲ್ಲಿ ಇದ್ದಾರೆ.
ಡಿ.ಕೆ.ಸಿ.ಎಂ ಆದರೆ ರಾಜೇಗೌಡರು ಮತ್ತಷ್ಟು ರಾಜಕೀಯ ಪ್ರಬಲರಾಗುತ್ತಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಲ್ಲಿ ರಾಜೇಗೌಡ ಮತ್ತು ನಯನ ಡಿ.ಕೆ ಪರವಾದರೆ ಶ್ರೀನಿವಾಸ್ ಮಾತ್ರ ಸಿದ್ದರಾಮಯ್ಯನವರ ಪರ .ತಮ್ಮಯ್ಯ ಎಲ್ಲಿ ಸಲ್ಲ ಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಆನಂದ್ ಎಲ್ಲಿಯಾದರೂ ಸರಿ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ನಲ್ಲಿ ಪಿಸುಗುಡುತ್ತಿದ್ದಾರೆ.
Nayana Out – H.D. Thammaiah in trouble?
Leave a comment