Home namma chikmagalur chikamagalur ರೈತನಿಂದ 50 ಸಾವಿರ ಕಿತ್ತುಕೊಂಡು ಹೋದ ದುಷ್ಕರ್ಮಿಗಳು
chikamagalurCrime NewsHomeKadurLatest Newsnamma chikmagalur

ರೈತನಿಂದ 50 ಸಾವಿರ ಕಿತ್ತುಕೊಂಡು ಹೋದ ದುಷ್ಕರ್ಮಿಗಳು

Share
Share

ಚಿಕ್ಕಮಗಳೂರು: ರೈತನೊಬ್ಬ ತಾನು ಬೆಳೆದ ತರಕಾರಿಯನ್ನು ಚಿಕ್ಕಮಗಳೂರು ಎಪಿಎಂಸಿಯಲ್ಲಿ ಮಾರಾಟ ಮಾಡಿ ಹಣ ಪಡೆದು ಊರಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ತಾವು ಸಖರಾಯಪಟ್ಟಣಕ್ಕೆ ತೆರಳುತಿದ್ದ ಲಕ್ಯಾವರೆಗೆ ರೈತನಿಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಮಾರ್ಗ ಮಧ್ಯದಲ್ಲಿ ರೈತನ ಬಳಿಯಿಂದ ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಕುರಿಚಿಕ್ಕನಹಳ್ಳಿಯ ನಿಂಗೇಗೌಡ ಹಣ ಕಳೆದುಕೊಂಡ ರೈತ. ನಿಂಗೇಗೌಡ ತಾವು ಬೆಳೆದ ಆಲೂಗಡ್ಡೆ ಹಾಗೂ ಬೀನ್ಸ್ ಅನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಿ ಅದರ ಬಾಬ್ತು 50 ಸಾವಿರ ಹಣ ಪಡೆದು ಮಂಗಳವಾರ ಮುಂಜಾನೆ 5.30ಕ್ಕೆ ತಮ್ಮ ಊರಿಗೆ ತೆರಳಲು ಎಐಟಿ ಸರ್ಕಲ್ ಬಳಿ ಬಸ್ಸಿಗೆ ಕಾಯುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತರಿಬ್ಬರು ನಿಂಗೇಗೌಡರನ್ನು ಮಾತನಾಡಿಸಿದ್ದಾರೆ.

ಈ ವೇಳೆ ಅವರು ತಾವು ಕುರಿಚಿಕ್ಕನಹಳ್ಳಿಗೆ ಹೋಗಲು ಬಸ್ಸಿಗೆ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಆಗ ಬೈಕ್ ನಲ್ಲಿ ಬಂದವರು ನಾವು ಸಖರಾಯಪಟ್ಟಣಕ್ಕೆ ತೆರಳುತ್ತಿದ್ದು ಮಾರ್ಗ ಮಧ್ಯೆ ನಿಮ್ಮ ಊರಿಗೆ ಬಿಡುತ್ತೇವೆ ಎಂದು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.

ನಗರವನ್ನು ದಾಟಿ ಕಣಿವೆ ದೇವಾಸ್ಥಾನದ ಬಳಿ ಹೋಗುತ್ತಿದ್ದಂತೆ ಬೈಕ್ ನಿಲ್ಲಿಸಿದ ದುಷ್ಕರ್ಮಿಗಳು ನಿಂಗೇಗೌಡ ಅವರ ಮೇಲೆ ಹಲ್ಲೆ ನಡೆಸಿ ಅವರ ಜೇಬಿನಲ್ಲಿದ್ದ 50 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Miscreants snatched 50 thousand from farmer

Share

Leave a comment

Leave a Reply

Your email address will not be published. Required fields are marked *

Don't Miss

ರಾಜಕಾರಣಿಗಳೆಂಬ ಹೊಸ-ಹೊಸ ವೇಷದಾರಿಗಳು

ಹೊಸ,ಹೊಸ ವೇಷದಾರಿಗಳು ! ರಾಜಕಾರಣ ಮತ್ತು ಇಲಾಖೆಗಳಿಗೆ ಅವಿನಾಭಾವ,ಆಕ್ರಮ ಸಂಬಂಧ. ಕಳೆದ ನಲವತ್ತು ವರ್ಷಗಳಿಂದ ಸಾರ್ವಜನಿಕ ಬದುಕು,ಹೋರಾಟ ಪತ್ರಕರ್ತನಾಗಿ ಕಂಡಿರುವ ಸತ್ಯಗಳು. 1980 ರ ತನಕ ರಾಜಕಾರಣ ಅಷ್ಟು ಕುಲಷಿತ ವಾಗಿರಲಿಲ್ಲ...

ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಸಿ ಟಿ. ರವಿಗೆ ಅಭಿನಂದನೆ

ಚಿಕ್ಕಮಗಳೂರು: ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಾದ ವಿಧಾನ ಪರಿಷತ್ತಿನ ಶಾಸಕ ಡಾ. ಸಿ ಟಿ. ರವಿಗೆ ಬಿಜಪಿ ಸೇರಿದಂತೆ ವಿವಿಧ ಸಂಘಟನೆ ನಾಯಕರು ಅಭಿನಂದನೆ ಸಲ್ಲಿಸಿದರು. ಸಂದರ್ಭದಲ್ಲಿ ನಮ್ಮ ಜಿಲ್ಲಾ ಬಿಜೆಪಿ...

Related Articles

ಪ್ರಿಯಾಂಕ್ ಖರ್ಗೆ ನಾಲಿಗೆ ಬಿಗಿ ಹಿಡಿದು ಮಾತನಾಡಲಿ

ಚಿಕ್ಕಮಗಳೂರು: ಸಿಎಂ ಬದಲಾವಣೆ ವಿಷಯವನ್ನು ಮರೆಮಾಚುವ ಉz್ದೆÃಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಗುರಿಯಾಗಿಸಿಕೊಂಡು ಆರೋಪ...

ಜಿಲ್ಲೆಯಲ್ಲಿ ಲಿಂಗಾಯತರನ್ನು ತುಳಿಯುತ್ತಿರುವ ಸಿ.ಟಿ.ರವಿ

ಚಿಕ್ಕಮಗಳೂರು: ಜಿಲ್ಲೆಯ ಲಿಂಗಾಯತ ಸಮುದಾಯವನ್ನು ತುಳಿಯುವ ಕೆಲಸವನ್ನು ಬಿಜೆಪಿಯ ಹಿರಿಯ ಮುಖಂಡ ಸಿ.ಟಿ.ರವಿ ಮಾಡುತ್ತಿದ್ದಾರೆ ಎಂದು...

ರೈತರು ಕೇವಲ ಬೆಳೆಗಾರರಾಗದೆ ರಫ್ತುದಾರರಾಗಿ ಮಾರ್ಪಡಲಿ

ಚಿಕ್ಕಮಗಳೂರು:  ರೈತರು ಕೇವಲ ಬೆಳೆಗಳನ್ನು ಬೆಳೆಯುವುದಕ್ಕೆ ಸೀಮಿತರಾಗದೆ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ...

ಮನೆಯ ಮೇಲೆ ಕಲ್ಲು ತೂರಾಟ-ದೂರು ಪ್ರತಿ ದೂರು ದಾಖಲು

ಚಿಕ್ಕಮಗಳೂರು: ನಗರದ ವಿಜಯಪುರ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರು ಹಿಂದೂಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ...