ಚಿಕ್ಕಮಗಳೂರು: ಜಿಲ್ಲೆಯ ದೋಣಗುಡಿ ಬಳಿ ಇಸ್ಪೇಟು ಜೂಜಾಟದಲ್ಲಿ ತೊಡಗಿಕೊಂಡಿದ್ದ ಮೂವರನ್ನು ಬಂಧಿಸಿ 17 ಸಾವಿರ ರು. ವಶಕ್ಕೆ ಪಡೆದಿರುವ ಪೊಲೀಸರು, ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಗುರುವಾರ ರಾತ್ರಿ 8.30ರ ಸುಮಾರಿಗೆ ದೋಣಗುಡಿಗೆ ಗ್ರಾಮಕ್ಕೆ ಹೋಗುವ ರಸ್ತೆ ಬಳಿಯ ಅಟದ ಮೈದಾನದಲ್ಲಿ 8 ರಿಂದ 9 ಮಂದಿ ಅಂದರ್ ಬಾಹರ್ ಇಸ್ಪೀಟು ಜೂಜಾಟದ ಆಡುತ್ತಿದ್ದರು. ಜೂಜು ಅಡ್ಡೆಯ ಮೇಲೆ ದಾಳಿ ಮಾಡಿದ ಮೂವರನ್ನು ಬಂಧಿಸಿರುವ ಆಲ್ದೂರು ಪೊಲೀಸರು.
ಮೂಡಿಗೆರೆ ತಾಲೂಕಿಮ ಬಿಳಗುಳ ಗ್ರಾಮದ ಕಿಶೋರ್ ಶೆಟ್ಟಿ (ಕೆಕೆ ಬಾರ್ ಕೆಲಸ), ಮಾಕೋನಹಳ್ಳಿಯ ರುತ್ವಿಕ್ ಬಿನ್ ಪ್ರಭಾಕರ್( ಅಡುಗೆ ಗುತ್ತಿಗೆದಾರ), ಯಲಗುಡಿಗೆ ಗ್ರಾಮದ ಬಸವರಾಜ ಬಿನ್ ಸೋಮೇಗೌಡ (ಕೃಷಿಕ) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 17,200 ರು. ನಗದು ವಶಕ್ಕೆ ಪಡೆಯಲಾಗಿದೆ. ಜತೆಗೆ, 2 ಕ್ಯಾಂಡಲ್ ಹಾಗೂ 52 ಇಸ್ಪೀಟ್ ಎಲೆ, ಐದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ತಪ್ಪಿಸಿಕೊಂಡು ಇನ್ನೂ ಐದಾರು ಮಂದಿ ಹುಡುಕಾಟ ನಡೆಸಲಾಗುತ್ತಿದೆ
Three arrested for gambling
Leave a comment