Home namma chikmagalur ಧಾರಾಕಾರ ಮಳೆಗೆ ಬೆಳೆ ನಾಶ ರಸ್ತೆಗಳು ಮಾಯಾ,ಪ್ರಾಣ ಹಾನಿ ರೈತರಿಗೆ ಸಂಕಷ್ಟ
namma chikmagalurchikamagalurHomeLatest News

ಧಾರಾಕಾರ ಮಳೆಗೆ ಬೆಳೆ ನಾಶ ರಸ್ತೆಗಳು ಮಾಯಾ,ಪ್ರಾಣ ಹಾನಿ ರೈತರಿಗೆ ಸಂಕಷ್ಟ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿತ್ಯ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರು, ಅಡಿಕೆ ಬೆಳೆಗಾರರು,ಸಂಪ್ರದಾಯದ ಬೆಳೆಗಳನ್ನು ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿ ತತ್ತರಿಸುತ್ತಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಹಗಲು ರಾತ್ರಿ ಸುರಿಯುತ್ತಿರುವ ಮಳೆಗೆ ಈರುಳ್ಳಿ, ಜೋಳ, ರಾಗಿ ಮತ್ತು ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ ಅಡಿಕೆ ಮತ್ತು ಕಾಫಿ ಬೆಳೆ ಅಲ್ಲಲ್ಲಿ ಕಟಾವಿಗೆ ಬಂದಿದ್ದು ಕಟಾವು ಮಾಡಲಾಗದೆ ಬೆಳೆಗಾರ ರೈತರು ತತ್ತರಿಸಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಹಣ್ಣಾಗಿರುವ ಕಾಫಿ ಮಳೆಗೆ ನೆಲಕ್ಕೆ ಸುರಿಯುತ್ತಿದೆ ಅಡಿಕೆ ಕಾಯಿ ಉದುರುತ್ತಿದೆ. ಬೆಳೆಗೆ ಬೆಲೆ ಇದೆ ಆದರೆ ಬೆಳೆ ನೀರುಪಾಲಾಗುತ್ತಿದೆ. ರೖತ ಅಸಹಾಯಕನಾಗಿದ್ದಾನೆ. ರೖತರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ಸಮಾದಾನ ಸಾಂತ್ವಾನ ಹೇಳಬೇಕಾಗಿದ್ದ, ರೖತರ ನಷ್ಟಕ್ಕೆ ಪರಿಹಾರ ಒದಗಿಸಬೇಕಾಗಿದ್ದ ಜನ ಪ್ರತಿನಿದಿನಗಳು ಸರ್ಕಾರ ಇದುವರೆಗೆ ಸ್ಪಂದಿಸಿಲ್ಲ.

ಇಂತಹ ದುಸ್ಥಿತಿ ಬೆಳೆಗಾರರನ್ನು ಚಿಂತೆ ಉಂಟುಮಾಡುವ ಜೊತೆಗೆ ಕಾಫಿ ಹೇಗೆ ಕೊಯ್ಲು ಮಾಡುವುದು ಹೇಗೆ ಎಂಬ ದುಸ್ಥಿತಿಯಲ್ಲಿದ್ದಾರೆ.ಇನ್ನೂ ಅಡಿಕೆ ಬೆಳೆಗಾರರ ಪರಿಸ್ಥಿತಿ ಕೂಡ ಭಿನ್ನ ಇಲ್ಲ ತೋಟಕ್ಕೆ ಕಾಲಿಡಲು ಆಗುತ್ತಿಲ್ಲ.ಕೊಯ್ದ ಅಡಿಕೆ ಒಣಗುತ್ತಿಲ್ಲ.

ಸಂಪ್ರದಾಯಿಕ ಬೆಳೆಗಳು ಸುರಿಯುತ್ತಿರುವ ಮಳೆಗೆ ಹೊಲದಲ್ಲಿ ಕರಗುತ್ತಿರುವುದು ರೈತರ ಕಣ್ಣಲ್ಲಿ ಮಳೆ ನೀರಿಗಿಂತ ಹೆಚ್ಚು ನೀರು ಸುರಿಸುವಂತೆ ಆಗಿದೆ. ತರಕಾರಿ ಬೆಳೆಗಳು ಗದ್ದೆ,ಹೊಲದಲ್ಲಿ ಕರಗುತ್ತಿವೆ .ವರ್ಷಗಳು ಕಷ್ಟ ಪಟ್ಟಿದ್ದು ಮಳೆಯಲ್ಲಿ ಕರಗಿ ಹೋಯಿತು ಎಂದು ಚಿಂತ ಕ್ರಾಂತರಾಗಿದ್ದಾರೆ.ಇದನ್ನು ಕೇಳಲು ಜನಪ್ರತಿನಿಧಿಗಳು ಬರುತ್ತಿಲ್ಲ.

ರಾಜ್ಯ ಮತ್ತು ಜಿಲ್ಲೆಗಳಲ್ಲಿ ಹಲವು ಅನಾಹುತ ಜರಗಿವೆ.ನೀರಿನಲ್ಲಿ ಕೊಚ್ಚಿ ಹೋದ ಬೆಳೆಗಳು ದನಕರುಗಳು ಜನಗಳು ಮತ್ತು ಕುಸಿದ ಮನೆಗಳ ಲೆಕ್ಕ ಸಿಗುತ್ತಿಲ್ಲ.ಗುಂಡಿಗಳನ್ನು ರಸ್ತೆ ಎಂದು ಕರೆಯ ಬೇಕಾಗಿದೆ. ಆಡಳಿತ ಪಕ್ಷ ಮತ್ತು ಪ್ರತಿ ಪಕ್ಷಗಳು ಖುರ್ಚಿ ಕಿತ್ತಾಟದಲ್ಲಿ ನಿರತವಾಗಿವೆ .

ನಮ್ಮ ಸಂಕಷ್ಟ, ನೋವು ಕೇಳುವವರು ಯಾರೂ ಇಲ್ಲ ಎಂದು ಕಾಫಿ ಬೆಳೆಗಾರರು, ಅಡಿಕೆ ಬೆಳೆಗಾರರು ರೈತರು ಕ್ಯಾಕರಿಸಿ ಉಗಿಯುತ್ತಿದ್ದಾರೆ.

Heavy rains destroy crops make roads impassable cause loss of life and create hardship for farmers

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...